Don't Miss!
- News ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಡಾ. ಕೆ. ಸುಧಾಕರ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತ-ಪಾಕ್ ಸಮಸ್ಯೆಗೆ ಸಲ್ಮಾನ್ ಹೇಳಿದ ಪರಿಹಾರವಿದು..
ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಟ್ಯೂಬ್ ಲೈಟ್' ಇದೇ ತಿಂಗಳ 23 ಕ್ಕೆ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಪ್ರಮೋಶನ್ ಚಟುವಟಿಕೆಯಲ್ಲಿ ತೊಡಗಿರುವ ಸಲ್ಮಾನ್ ಖಾನ್ ಭಾರತ-ಪಾಕ್ ಯುದ್ಧದ ಬಗ್ಗೆ ಮಾತನಾಡಿ ಹೊಸ ವಿವಾದ ಸೃಷ್ಟಿಯಾಗಿದೆ.
ಮಂಗಳವಾರ ಮುಂಬೈನಲ್ಲಿ 'ಟ್ಯೂಬ್ ಲೈಟ್' ಚಿತ್ರದ ಪ್ರಮೋಶನ್ ವೇಳೆ ಸಲ್ಮಾನ್ ಖಾನ್ ಗೆ ಭಾರತ ಮತ್ತು ಪಾಕ್ ಸಂಬಂಧದ ಕುರಿತು ಪ್ರಶ್ನೆಯೊಂದು ಮಾಧ್ಯಮ ಪ್ರತಿನಿಧಿಗಳಿಂದ ತೂರಿಬಂದಿತ್ತು. ಅದೇನಂದ್ರೆ 'ಟ್ಯೂಬ್ ಲೈಟ್' ಭಾರತ ಮತ್ತು ಪಾಕ್ ಯುದ್ಧದ ಆಂಗಲ್ ನ ಕಥೆ ಏನಾದರೂ ಹೊಂದಿದೆಯೇ ಎಂಬುದು. ಇದಕ್ಕೆ ಉತ್ತರಿಸಿದ ಸಲ್ಮಾನ್, "ಖಂಡಿತ ಇಲ್ಲ. ಅದನ್ನು ನಾವು ಟಚ್ ಮಾಡಿಲ್ಲ. ಎರಡು ದೇಶಗಳ ನಡುವೆ ಶಾಂತಿ ಕಾಪಾಡಬೇಕಿದೆ. ಯುದ್ಧದಿಂದ ಎರಡು ದೇಶಗಳಲ್ಲಿ ಪ್ರಾಣ ಹಾನಿಯಾಗುತ್ತದೆಯೇ ಹೊರತು ಲಾಭವಿಲ್ಲ. ಅದರ ಬದಲು ಶಾಂತಿ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು" ಎಂದಿದ್ದಾರೆ.
"ಎರಡು ದೇಶಗಳಲ್ಲಿ ಮನೆಯೊಳಗೆ ಕುಳಿತು ಯುದ್ಧ ಬೇಕು ಎನ್ನುವ ಸಾಮಾನ್ಯ ಜನರಿಗೆ ಅದರ ಪರಿಣಾಮ ಏನು ಎಂಬುದು ಸರಿಯಾಗಿ ಅರ್ಥವಾಗಿಲ್ಲ. ಯುದ್ಧ ಬೇಕು ಎನ್ನುವವರ ಕೈಗೆ ಗನ್ ಕೊಟ್ಟು ಹೋರಾಟಕ್ಕೆ ಕಳುಹಿಸಬೇಕು. ಆಗ ಮಾತ್ರ ಅವರಿಗೆ ಯುದ್ಧದಿಂದ ಆಗುವ ಸಮಸ್ಯೆ ಅರಿವಾಗುತ್ತದೆ' ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.
ಸಲ್ಮಾನ್ ಖಾನ್ ಚಿತ್ರ ಪ್ರಮೋಶನ್ ವೇಳೆ ನೀಡಿದ ಈ ಹೇಳಿಕೆಗಳಿಗೆ ಶಿವಸೇನೆ ಆಕ್ಷೇಪಿಸಿ, ಇದು ಎಲ್ಲೆಯನ್ನು ಮೀರಿದ ಮಾತಾಗಿದೆ ಎಂದಿದೆ. ಅಲ್ಲದೇ ಹಲವರು ಸಲ್ಮಾನ್ ತಮ್ಮ ಚಿತ್ರದ ಪ್ರಮೋಶನ್ ದೃಷ್ಟಿಯಿಂದ ಈ ರೀತಿ ಮಾತನಾಡಿದ್ದಾರೆ ಎಂದಿದ್ದಾರೆ.
ಅಂದಹಾಗೆ ಕಬೀರ್ ಖಾನ್ ಆಕ್ಷನ್ ಕಟ್ ಹೇಳಿರುವ 'ಟ್ಯೂಬ್ ಲೈಟ್' 1962 ರ ಕಾಲಘಟ್ಟದ ಚೀನ-ಭಾರತದ ನಡುವಿನ ಯುದ್ಧ ಕುರಿತ ಚಿತ್ರಕಥೆ ಹೊಂದಿದೆ.