Don't Miss!
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
51 ಡಿಗ್ರಿ ತಾಪದಲ್ಲಿ ಕೂಲಾಗಿದ್ದ ಅಕ್ಷಯ್ ಕುಮಾರ್!
ಬಾಲಿವುಡ್ ನಲ್ಲಿ ಆಕ್ಷಯ್ ಕುಮಾರ್ ಅಂದ್ರೇನೇ ಖತರೋಂಕೆ ಖಿಲಾಡಿ. ಬೆಂಕಿ, ಗಾಳಿ, ನೀರು, ಎತ್ತರ, ಇದ್ಯಾವುದನ್ನೂ ಲೆಕ್ಕಿಸದೇ ಜೀವವನ್ನೇ ಪಣಕ್ಕಿಟ್ಟು 'ಆಕ್ಷನ್' ಮಾಡುವುದರಲ್ಲಿ ಅಕ್ಷಯ್ ಕುಮಾರ್ ನಿಸ್ಸೀಮ.
ಪ್ರತಿಯೊಂದು ಸಿನಿಮಾದಲ್ಲಿ ಏನಾದರೊಂದು ಸೂಪರ್ ಸ್ಟಂಟ್ ಮಾಡಿ ಎಲ್ಲರ ಕಣ್ಣುಕುಕ್ಕುವ ಅಕ್ಕಿ, ಈ ಬಾರಿ 51 ಡಿಗ್ರಿ ತಾಪದಲ್ಲಿ 'ಕೂಲಾ'ಗಿದ್ದು ಎಲ್ಲರು ನಿಬ್ಬೆರಗಾಗುವಂತೆ ಮಾಡಿದ್ದಾರೆ.
ಸಾಮಾನ್ಯ
30
ರಿಂದ
35
ಡಿಗ್ರಿ
ತಾಪವನ್ನೇ
ಎಲ್ಲರು
ತಡೆಯವುದಕ್ಕೆ
ಆಗುವುದಿಲ್ಲ.
ಅಂತದ್ರಲ್ಲಿ
51
ಡಿಗ್ರಿ
ಉಷ್ಣಾಂಶ
ಅಂದ್ರೆ
ಸುಮ್ನೆನಾ.
ಊಹಿಸಿಕೊಂಡರೆ
ಬೆಂದು
ಬೆವರುವಾಗ,
ಅಕ್ಕಿ
ಹೇಗೆ
ಶೂಟ್
ಮಾಡಿದ್ರು
ಅಂದ್ರೆ
ಪಾರ್ಕ್
ನಲ್ಲಿ
ಓಡಾಡುವಷ್ಟೇ
ಆರಾಮಾಗಿದ್ದರು
ಅಂತ
ಚಿತ್ರತಂಡ
ಹೇಳಿದೆ.
[ಅಕ್ಷಯ್
ಕುಮಾರ್
ಪಾದದ
ಮೇಲೆ
ಹರಿದ
ಟ್ರಕ್]
ಅಸಲಿಗೆ ಅಕ್ಷಯ್ ಕುಮಾರ್ 51 ಡಿಗ್ರಿ ಉಷ್ಣಾಂಶದಲ್ಲಿ ಶೂಟ್ ಮಾಡಿರುವುದು ಅಬುಧಾಬಿಯ ಮರುಭೂಮಿಯಲ್ಲಿ. 'ಬೇಬಿ' ಚಿತ್ರದಲ್ಲಿನ ಭರ್ಜರಿ ಆಕ್ಷನ್ ಸೀಕ್ವೆನ್ಸ್ ಗಾಗಿ ಅಲ್ಲಿಗೆ ತೆರಳಿದ್ದ ಚಿತ್ರತಂಡಕ್ಕೆ, ಉಷ್ಣಾಂಶ ತುಂಬಾ ಕಿರಿಕಿರಿ ಉಂಟುಮಾಡಿತ್ತು. [ಸ್ಟಾರ್ ಪಟ್ಟಕ್ಕೆ ಆತ್ಮವನ್ನೇ ಪಣಕ್ಕಿಟ್ಟ ಖಿಲಾಡಿ ಅಕ್ಷಯ್]
ನಿಮಿಷಕೊಮ್ಮೆ ತಲೆ ಮೇಲೆ ನೀರು ಸುರಿದುಕೊಳ್ಳದೆ, ಕೈಯಲ್ಲಿ ಛತ್ರಿ ಹಿಡಿದುಕೊಳ್ಳದೆ, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕದೇ ಇದ್ರೆ ಅಲ್ಲಿನ ತಾಪ ತಡೆಯುವುದು ತೀರಾ ಕಷ್ಟ. ಅಂತದ್ರಲ್ಲಿ ನೆಲದ ಮೇಲೆ ಕಾಲಿಡುವುದಕ್ಕೂ ಆಗದ ಪರಿಸ್ಥಿತಿ ಅಲ್ಲಿದ್ದಾಗ ಅಕ್ಕಿ ಸ್ಪಾಟ್ ಗೆ ಬರುತ್ತಾರೋ ಇಲ್ಲವೋ ಅನ್ನುವ ಅನುಮಾನ ಎಲ್ಲರಿಗೂ ಕಾಡ್ತಿತ್ತಂತೆ.
ಆದರೆ, ಅಕ್ಕಿ ಕೂಲಾಗಿ ಇದ್ದಿದ್ದರ ಜೊತೆಗೆ ಇಡೀ ಸೆಟ್ ಗೆ ಜೋಷ್ ತುಂಬಿ, ರೀಟೇಕ್ ಗಳನ್ನ ತೆಗೆದುಕೊಳ್ಳದೇ, ಒಂದೇ ಏಟಿಗೆ ಸೀನ್ ಕಂಪ್ಲೀಟ್ ಮಾಡಿದ್ದಾರೆ. ಹೆಸರಾಂತ ಹಾಲಿವುಡ್ ಸಾಹಸ ನಿರ್ದೇಶಕ ಸೈರಿಲ್ ರಫೇಲಿ ಸಂಯೋಜಿಸುತ್ತಿರುವ ಸಾಹಸ ದೃಶ್ಯಗಳನ್ನ ನೀರು ಕುಡಿದಷ್ಟೇ ಸಲೀಸಾಗಿ ಅಕ್ಷಯ್ ಮಾಡಿದ್ದಾರೆ.[ಮಹಿಳೆಯ ಜೀವ ಉಳಿಸಿದ ಕಿಲಾಡಿ ಅಕ್ಷಯ್ ಕುಮಾರ್]
ನೀರಜ್ ಪಾಂಡೇ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಬರೀ ಇಷ್ಟೇ ಅಲ್ಲ, ರೋಮಾಂಚನಕಾರಿ ವಿಷಯಗಳು ಇನ್ನೂ ಬಹಳಿಷ್ಟಿವೆ. ಎಲ್ಲವೂ ಬಹಿರಂಗ ಆಗಬೇಕಷ್ಟೆ. (ಏಜೆನ್ಸೀಸ್)