Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬದುಕಿನಲ್ಲಿ ಫೇಲ್ ಆದ 'ಬಿಎ ಪಾಸ್' ಚಿತ್ರನಟಿ!
ಹಿಂದಿ ಚಿತ್ರರಂಗದಲ್ಲಿ ಅಸ್ತಿತ್ವ ಕಂಡುಕೊಳ್ಳಲು ಪರದಾಡುತ್ತಿದ್ದ, ಸರಿಯಾಗಿ ಉದ್ಯೋಗವಿಲ್ಲದೆ ಕಂಗಾಲಾಗಿದ್ದ ಮಾಡೆಲ್ ಕಂ ನಟಿ ಶಿಖಾ ಜೋಶಿ ಅವರು ಕತ್ತು ಸೀಳಿಕೊಂಡು ಮುಂಬೈನ ಅಪಾರ್ಟ್ಮೆಂಟೊಂದರಲ್ಲಿ ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ಆತ್ಮಹತ್ಯೆ ಅಂತ ಪ್ರಾಥಮಿಕವಾಗಿ ಕಂಡುಬಂದಿದ್ದರೂ ಕೊಲೆಯೂ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮುಂಬೈನ ಅಂಧೇರಿ ಪಶ್ಚಿಮದಲ್ಲಿ ಮಹದಾ ಕಾಲೋನಿಯಲ್ಲಿ ತನ್ನ ಸ್ನೇಹಿತೆ ಮಧು ಭಾರತಿಯೊಂದಿಗೆ 40 ವರ್ಷದ ಶಿಖಾ ಜೋಶಿ ವಾಸಿಸುತ್ತಿದ್ದರು. ಬಚ್ಚಲು ಮನೆಯಲ್ಲಿ ಶಿಖಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರನ್ನು ಕೂಡಲೆ ಕೋಕಿಲಾ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ವರ್ಸೋವಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಅಂತ ಕಂಡುಬಂದಿದ್ದರೂ, ತನ್ನ ಕತ್ತನ್ನು ತಾನೇ ಕತ್ತರಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲದ್ದರಿಂದ ಕೊಲೆಯ ಪ್ರಮೇಯವನ್ನು ಪೊಲೀಸರು ತಳ್ಳಿಹಾಕುತ್ತಿಲ್ಲ. [ಶವವಾಗಿ ಮಲಗಿರುವ ಜಿಯಾ ಖಾನ್ ಚಿತ್ರಗಳು]
ಸ್ನೇಹಿತೆ ಭಾರತಿ ಹೇಳುವ ಪ್ರಕಾರ, ಶಿಖಾ ಸಂಜೆ 7 ಗಂಟೆಯ ಸುಮಾರಿಗೆ ಮದ್ಯ ಸೇವಿಸಿ ಬಚ್ಚಲುಮನೆಯೊಳಗೆ ಚಿಲುಕ ಹಾಕಿಕೊಂಡಿದ್ದಾರೆ. ಸುಮಾರು ಹೊತ್ತಾದರೂ ಬರದಿದ್ದರಿಂದ ಭಾರತಿ ಬಾಗಿಲು ಬಡಿದಿದ್ದಾರೆ. ಸ್ವಲ್ಪ ಸಮಯದ ನಂತರ ಬಾಗಿಲು ತೆರೆದಾಗ ಅವರ ಕತ್ತು ಸೀಳಿತ್ತು, ಮೈಯೆಲ್ಲ ರಕ್ತಸಿಕ್ತವಾಗಿತ್ತು ಮತ್ತು ಅಡುಗೆಮನೆಯಲ್ಲಿದ್ದ ಚಾಕು ಅಲ್ಲಿ ಬಿದ್ದಿತ್ತು.
2012ರಲ್ಲಿ ಬಿಡುಗಡೆಯಾಗಿದ್ದ 'ಬಿಎ ಪಾಸ್' ಎಂಬ ಹಿಂದಿ ಚಿತ್ರದಲ್ಲಿ ಶಿಖಾ ಜೋಶಿ ಅವರು ನಟಿಸಿದ್ದರು. ಆದರೆ, ಪಾತ್ರಗಳು ಸಿಗದೆ ಖಿನ್ನರಾಗಿದ್ದರು. ಕತ್ತು ಕತ್ತರಿಸಿಕೊಂಡ ನಂತರವೂ, ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಶಿಖಾ ಮಾತನಾಡುತ್ತಿದ್ದರು, ಏಕೆ ಹೀಗೆ ಮಾಡಿಕೊಂಡಿ ಅಂತ ಕೇಳಿದಾಗ, ಪಾತ್ರಗಳು ಸಿಗದೆ ಆತಂಕಗೊಂಡಿದ್ದೆ ಎಂದು ಹೇಳಿದ್ದಾಗಿ ಭಾರತಿ ಪೊಲೀಸರಿಗೆ ತಿಳಿಸಿದ್ದಾರೆ.
ಚಿತ್ರರಂಗದಲ್ಲಿ ಸಣ್ಣ ಪ್ರಮಾಣದ ಕಲಾವಿದರು ಎದುರಿಸುವ ಅತಂತ್ರತೆ, ಖಿನ್ನತೆಗೆ ಈ ಪ್ರಕರಣ ಕನ್ನಡಿ ಹಿಡಿದಿದೆ. ಗುಂಡಿಗೆ ಗಟ್ಟಿ ಇರುವವರು, ಪಾತ್ರಗಳಿಗಾಗಿ ಎಂಥದೇ ಕಾಂಪ್ರಮೈಸಿಗೂ ಸಿದ್ಧರಿರುವವರು ಹೇಗೋ ಬದುಕಿಕೊಳ್ಳುತ್ತಾರೆ, ದುರ್ಬಲರು ಇಂಥ ಕ್ರಮಕ್ಕೆ ಮುಂದಾಗುತ್ತಾರೆ. ಬಿಎ ಪಾಸ್ ನಟಿ ಶಿಖಾ ಜೋಶಿ ಬದುಕಿನಲ್ಲಿ ಫೇಲಾಗಿದ್ದು ನಿಜಕ್ಕೂ ದುರಂತ. [ನಟಿ ವಿಂಧ್ಯಾ 'ಮನದ ಮರೆಯಲ್ಲಿ' ಏನು ನಡೀತು?]