Don't Miss!
- News ಕ್ವಿಟ್ ಎನ್ಡಿಎ ಮತ್ತು ಸೇವ್ ಇಂಡಿಯಾ: ಪ್ರೊ. ಮಹೇಶ್ಚಂದ್ರಗುರು
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಐಶ್ವರ್ಯ ಮೇಲೆ ಬಚ್ಚನ್ ಫ್ಯಾಮಿಲಿಗ್ಯಾಕೆ ಅಷ್ಟೊಂದು ಕೋಪ
ಬಾಲಿವುಡ್ ನ ಆದರ್ಶ ದಂಪತಿಗಳಾದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ನಡುವೆ ಏನೋ ಸರಿ ಇಲ್ವಂತೆ, ಹಾಗೆ-ಹೀಗೆ ಅಂತ ಮೊನ್ನೆ-ಮೊನ್ನೆ ಬಾಲಿವುಡ್ ಅಂಗಳದಲ್ಲಿ ಗುಸು-ಗುಸು ಕೂಡ ಶುರುವಾಗಿತ್ತು.
ಇದೀಗ ಅದಕ್ಕೆ ತಕ್ಕಂತೆ ಮತ್ತೊಂದು ಸುದ್ದಿ ಬಂದಿದೆ. ಬಚ್ಚನ್ ಕುಟುಂಬದ ಸೊಸೆ ನಟಿ ಐಶ್ವರ್ಯ ರೈ ಅವರ ಮೇಲೆ ಬಿಗ್ ಬಿ ಫ್ಯಾಮಿಲಿಯವರಿಗೆ ಒಂಥರಾ ಅಸಮಾಧಾನ ಇದೆ ಅನ್ನೋ ಗುಮಾನಿ ಬಿಟೌನ್ ನಲ್ಲಿ ಅಲ್ಲಲ್ಲಿ ಕೇಳಿಬರುತ್ತಿದೆ.[ವಿಸ್ಮಯ: ಐಶ್ ಗೆ ಅಭಿ ಮೇಲೆ ಯಾವತ್ತೂ ಕ್ರಷ್ ಆಗಿಲ್ವಂತೆ.!]
ಮದುವೆ-ಮಗು ಅಂತಾದ ಮೇಲೆ ಐಶ್ವರ್ಯ ರೈ ಅವರು 'ಜಸ್ಬಾ' ಸಿನಿಮಾ ಮಾಡಿದರು. ತದನಂತರ ಒಪ್ಪಿಕೊಂಡಿದ್ದು, ರಣಬೀರ್ ಕಪೂರ್ ಅವರ ಜೊತೆ 'ಏ ದಿಲ್ ಹೈ ಮುಷ್ಕಿಲ್'.
ಈ ಚಿತ್ರಕ್ಕೆ ನಿರ್ದೇಶಕ ಕರಣ್ ಜೋಹರ್ ಅವರು ಆಕ್ಷನ್-ಕಟ್ ಹೇಳಿದ್ದು, ನಟಿ ಅನುಷ್ಕಾ ಶರ್ಮಾ ಅವರು ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ.[ದಾಂಪತ್ಯದ ಬಿರುಕಿನ ಬಗ್ಗೆ ಸ್ಪಷ್ಟನೆ ನೀಡಿದ ಅಭಿಷೇಕ್ ಬಚ್ಚನ್]
ಅಂದಹಾಗೆ ಐಶ್ ಅವರ ಹೊಸ ಸಿನಿಮಾಗೂ ಇವರಿಬ್ಬರ ಸಂಸಾರದಲ್ಲಿ ಅಪಸ್ವರ ಏಳೋದಕ್ಕೂ ಒಂದು ಕಾರಣ ಇದೆ. 'ಏ ದಿಲ್ ಹೈ ಮುಷ್ಕಿಲ್' ಚಿತ್ರದಲ್ಲಿ ಐಶ್ ಅವರು ನಟಿಸುತ್ತಿದ್ದು, ಈ ಚಿತ್ರದಲ್ಲಿ ಕೊಂಚ ಹಸಿ-ಬಿಸಿ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ಬಿಗ್ ಫ್ಯಾಮಿಲಿಯ ಕಣ್ಣು ಕೆಂಪಾಗಿಸಿದೆ.[ರಣಬೀರ್ ಜೊತೆ ಲಿಪ್ ಲಾಕ್ ನೋ ಎಂದ ಐಶ್ ಗೆ ಕರಣ್ ಮಾಡಿದ್ದೇನು?]
ಈ ಚಿತ್ರದಲ್ಲಿ ಐಶ್ವರ್ಯ ಮತ್ತು ರಣಬೀರ್ ಕಪೂರ್ ಅವರ ನಡುವೆ ಲಿಪ್ ಲಾಕ್ ದೃಶ್ಯವನ್ನು ಕರಣ್ ಜೋಹರ್ ಕ್ರಿಯೇಟ್ ಮಾಡಿದ್ದರು. ಆದರೆ ಅದಕ್ಕೆ ಐಶ್ ಒಪ್ಪದ ಕಾರಣ, ರೋಮ್ಯಾಂಟಿಕ್ ಆಗಿ ಚಾಕಲೇಟು ತಿನ್ನುವ ದೃಶ್ಯವನ್ನು ಸೇರಿಸಿದ್ದರು. ಇದೀಗ ಆ ದೃಶ್ಯ ಕೂಡ ಐಶ್ ಫ್ಯಾಮಿಲಿಗೆ ಹಿಡಿಸಲಿಲ್ಲವಂತೆ.[ಛೇ ಮುದ್ದು ಪತ್ನಿ ಐಶ್ವರ್ಯ ರೈಗೆ ಅಭಿಷೇಕ್ ಹೀಗೆ ಮಾಡಬಾರದಿತ್ತು]
ಯಾಕೋ ಆ ದೃಶ್ಯ ಕೂಡ ಸರಿ ಕಾಣುತ್ತಿಲ್ಲ ಎಂಬ ಕಾರಣಕ್ಕೆ ಕರಣ್ ಜೋಹರ್ ಅವರ ಬಳಿ ಆ ದೃಶ್ಯಕ್ಕೆ ಕತ್ತರಿ ಹಾಕುವಂತೆ ಬಚ್ಚನ್ ಫ್ಯಾಮಿಲಿ ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಮೊದಲು ಒಪ್ಪದ ಕರಣ್ ನಂತರ ಬಿಗ್ ಬಿ ಅಮಿತಾಭ್ ಅವರ ಮಾತಿನ ಮೇರೆಗೆ ಆ ದೃಶ್ಯಕ್ಕೆ ಕತ್ತರಿ ಪ್ರಯೋಗ ಮಾಡಿದ್ದಾರೆ.