Don't Miss!
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- News ಲೋಕಸಭಾ ಚುನಾವಣೆ 2ನೇ ಹಂತದ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ; ಮನೆ ಮನೆ ಪ್ರಚಾರಕ್ಕೆ ಅವಕಾಶ
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಮಲ್-ವಿಶ್ವರೂಪಂ II ಟ್ರೇಲರ್ ನೋಡಿ
ಅಭಿನಯದ ವಿಶ್ವ ವಿದ್ಯಾಲಯದಂತಿರುವ ಕಮಲ್ ಹಾಸನ್ ಅವರ ಬಹುನಿರೀಕ್ಷಿತ ವಿಶ್ವರೂಪಂ ಚಿತ್ರದ ಎರಡನೇ ಭಾಗದ ಟೀಸರ್ ಬಿಡುಗಡೆಗೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ಸದ್ದು ಮಾಡುತ್ತಿದೆ. ಎಲ್ಲಾ ಅಂದು ಕೊಂಡಂತೆ ಆಗಿದ್ದರೆ ಆಗಸ್ಟ್ ತಿಂಗಳ ಅಂತ್ಯಕ್ಕೆ ಈ ಚಿತ್ರ ತೆರೆ ಕಾಣಬೇಕಿತ್ತು. ಆದರೆ, ಈಗ ಸೆಪ್ಟೆಂಬರ್ ಮೊದಲ ವಾರಕ್ಕೆ ಮುಂದೂಡಲ್ಪಟ್ಟಿದೆ.
ಜುಲೈ ತಿಂಗಳಿನಲ್ಲಿ ವಿಶ್ವರೂಪಂ 2 ಮೊದಲ ಟ್ರೇಲರ್ ಬಿಡುಗಡೆಗೊಂಡಿತ್ತು. ಈಗ ಎರಡನೇ ಟ್ರೇಲರ್ ಕಮ್ ಟೀಸರ್ ಸದ್ದು ಮಾಡಿದೆ. ಬಿಡುಗಡೆಗೆ ಮುನ್ನ ಸಾಕಷ್ಟು ವಿವಾದಗಳನ್ನು ವಿಶ್ವರೂಪಂ ಚಿತ್ರ ಸೃಷ್ಟಿಸಿತ್ತು. ಅದರೆ, ತೆರೆ ಕಂಡ ನಂತರ ಪ್ರೇಕ್ಷಕರು, ವಿಮರ್ಶಕರಿಂದ ಮುಕ್ತಕಂಠದ ಹೊಗಳಿಕೆ ಸಿಕ್ಕಿತು. ಜತೆ ಬಾಕ್ಸಾಫೀಸ್ ನಲ್ಲೂ ಭರ್ಜರಿ ಗಳಿಕೆ ಸಿಕ್ಕಿತ್ತು. ಈಗ ವಿಶ್ವರೂಪಂ 2 ಟ್ರೇಲರ್ ಬಿಡುಗಡೆಯಾಗಿದ್ದು, ಕೆಳಗಿನ ಚಿತ್ರವನ್ನು ಕ್ಲಿಕ್ ಮಾಡಿ ನೋಡಿ
ಐಐಎಫ್ಎ 2013 ಸಮಾರಂಭದಲ್ಲಿ ವಿಶ್ವರೂಪಂ 2 ರ ಟ್ರೇಲರ್ ಅನ್ನು ಮೊದಲ ಬಾರಿಗೆ ಕಮಲ್ ಅವರು ಕಳೆದ ಜುಲೈನಲ್ಲಿ ಬಿಡುಗಡೆ ಮಾಡಿದರು. ಐಐಎಫ್ಎ ನಂಥ ಜಾಗತಿಕ ವೇದಿಕೆ ಸಿಕ್ಕಿದ್ದು ಹಾಗೂ ವಿಶ್ವರೂಪಂ ಎರಡನೇ ಭಾಗದ ಟ್ರೇಲರ್ ನೋಡಿ ಬಾಲಿವುಡ್ ಮಂದಿ ಮೆಚ್ಚಿದ್ದು ನೋಡಿ ಕಮಲ್ ಖುಷಿಯಾಗಿದ್ದರು.
ವಿಶ್ವರೂಪಂ II ಸೆಪ್ಟೆಂಬರ್ ಮೊದಲ ವಾರ ತೆರೆ ಕಾಣುವುದು ಬಹುತೇಕ ಖಚಿತವಾಗಿದೆ. ಅದರೆ, ಮೊದಲ ಆವೃತ್ತಿ ತೆರೆ ಕಾಣಲು ಉಂಟಾಗಿದ್ದ ಅಡ್ಡಿ ಆತಂಕಗಳು ಎರಡನೇ ಭಾಗಕ್ಕೂ ಎದುರಾಗುವ ಭೀತಿ ಕಾಡುತ್ತಿದೆ. ವಿಶ್ವರೂಪಂ 2 ಇನ್ನೂ ಶೇ 10 ರಷ್ಟು ಕೆಲಸ ಬಾಕಿಯಿದೆಯಂತೆ ಮುಂದಿನ ದೀಪಾವಳಿ ವೇಳೆಗಾದರೂ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.
ಕಮಲ್ ಹಾಸನ್, ಪೂಜಾ ಕುಮಾರ್, ಆಂಡ್ರಿಯಾ ಜೆರೆಮಿಯಾ, ರಾಹುಲ್ ಬೋಸ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ್ರ ಭಾರತದ ಗುಪ್ತಚರ ಅಧಿಕಾರಿ ಹಾಗೂ ಉಗ್ರರ ನಡುವಿನ ಹೋರಾಟದ ಕಥೆ ಹೊಂದಿದೆ. ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪಕ್ಕೆ ಕಮಲ್ ತಕ್ಕ ಉತ್ತರ ನೀಡಿದ್ದರು.