Don't Miss!
- News ಹಾಸನ ಪೆನ್ಡ್ರೈವ್ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಮಹಿಳಾ ಆಯೋಗ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮರ್ಡರ್' ಮಾಡಲು ಬರುತ್ತಿದ್ದಾರೆ ಅದಿತಿ ರಾವ್
ಯುವ ಜನತೆಯನ್ನು ಅಪಾರವಾಗಿ ಸೆಳೆದಿದ್ದ ಈ ಚಿತ್ರದ ಮುಂದುವರಿದ ಭಾಗವಾಗಿ ಕಳೆದ ವರ್ಷ 'ಮರ್ಡರ್ 2' ಚಿತ್ರ ಬಂದಿತ್ತು. ಈ ಚಿತ್ರಕ್ಕೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಈಗ ಅದೇ ಉತ್ಸಾಹದಲ್ಲಿ ಮತ್ತೊಂದು 'ಮರ್ಡರ್' ಚಿತ್ರ ಬರುತ್ತಿದೆ.
ಆದರೆ ಪಾರ್ಟ್ 2 ಚಿತ್ರದಲ್ಲಿ ನಾಯಕಿ ಸ್ಥಾನ ಜಾಕ್ವೆಲಿನ್ ಫರ್ನಾಂಡೀಸ್ಗೆ ಲಭಿಸಿತ್ತು. ಆಕ್ಷನ್ ಕಟ್ ಹೇಳಿದ್ದದ್ದು ಮೋಹಿತ್ ಸೂರಿ. ಈಗ ಇವೆರಡೂ ಚಿತ್ರಗಳನ್ನೂ ಮೀರಿಸುವಂತಹ 'ಮರ್ಡರ್ 3' ಚಿತ್ರ ಸೆಟ್ಟೇರಲು ಸಿದ್ಧವಾಗಿದೆ. ರಣದೀಪ್ ಹೂಡಾ, ಅದಿತಿ ರಾವ್ ಈ ಬಾರಿ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಹಾಕಲಿದ್ದಾರೆ.
ಈ ಬಾರಿ ನಿರ್ದೇಶನದ ಜವಾಬ್ದಾರಿ ಮುಖೇಶ್ ಭಟ್ ಮಗ ವಿಶೇಷ್ ಭಟ್ ಹೊತ್ತಿದ್ದಾರೆ. ವಿಶೇಷ್ ಫಿಲಂಸ್ ಸ್ಥಾಪಿಸಿ 25 ವರ್ಷಗಳು ಪೂರ್ಣವಾಗುತ್ತಿರುವ ಹಿನ್ನೆಲೆಯಲ್ಲಿ ಮುಖೇಶ್ ಭಟ್ ತಮ್ಮ ಪುತ್ರರತ್ನನನ್ನು ನಿರ್ದೇಶಕನಾಗಿ ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ.
ಈ ಸಂದರ್ಭರಲ್ಲಿ ಅವರು ಮಾತನಾಡುತ್ತಾ, "ನನ್ನ ಸಹೋದರ ಮಹೇಶ್ ಭಟ್ ಅವರೊಂದಿಗೆ ಕೈಜೋಡಿಸಿ 25 ವರ್ಷಗಳ ಹಿಂದೆ ವಿಶೇಷ್ ಫಿಲಂಸ್ ಸ್ಥಾಪಿಸಿದೆ. 'ದಿಲ್ ವಾಲೆ ದುಲ್ಹನಿಯಾ ಲೇಜಾಯೇಂಗೆ' ಯಶ್ ಫಿಲಂಸ್ಗೆ, 'ಮೈನೆ ಪ್ಯಾರ್ ಕಿಯಾ' ರಾಜಶ್ರೀ ಸಂಸ್ಥೆಗೆ ಹೇಗೋ ಹಾಗೆ ನಮ್ಮ ಸಂಸ್ಥೆಗೆ 'ಮರ್ಡರ್ 3' ಚಿತ್ರ ಉಳಿಯಲಿದೆ. ಹಾಗಾಗಿಯೇ ಅದ್ದೂರಿಯಾಗಿ ಚಿತ್ರವನ್ನು ನಿರ್ಮಿಸುತ್ತಿದ್ದೇವೆ. ಮುಂದಿನ ತಿಂಗಳ ಕೊನೆಯಲ್ಲಿ ಚಿತ್ರೀಕರಣ ಆರಂಭವಾಗಲಿದೆ" ಎಂದಿದ್ದಾರೆ. (ಏಜೆನ್ಸೀಸ್)