Don't Miss!
- News ಆಕ್ಸಿಸ್ ಬ್ಯಾಂಕ್ಗೆ ಬರೋಬ್ಬರಿ 7,129 ಕೋಟಿ ರೂಪಾಯಿ ಲಾಭ!
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಲ್ಮಾನ್ 'ಜಿಂಕೆ' ಮೇಲೆ ಬಿತ್ತು ಉಸ್ಮಾನ್ ಖಾನ್ ಕಣ್ಣು
ಅದು 2006, ಫೆಬ್ರವರಿ 17. ಅಂದ್ರೆ, ಇಂದಿಗೆ ಸರಿಯಾಗಿ 9 ವರ್ಷಗಳ ಹಿಂದೆ 'ಕೃಷ್ಣ ಮೃಗ ಬೇಟೆ' ಪ್ರಕರಣದಲ್ಲಿ ಸಲ್ಮಾನ್ ಖಾನ್ ದೋಷಿ ಅಂತ ಕೋರ್ಟ್ ಘೋಷಿಸಿತು. ಇದರ ಮೇಲ್ಮನವಿ ವಿಚಾರಣೆ ಇನ್ನೂ ನ್ಯಾಯಾಲಯದ ಅಂಗಳದಲ್ಲಿದೆ.
ಸಲ್ಮಾನ್ ಖಾನ್ ಆರೋಪಿ ಅಥವಾ ಅಪರಾಧಿ ಅನ್ನುವ ತೀರ್ಪನ್ನ ಸದ್ಯದಲ್ಲೇ ಕೋರ್ಟ್ ನೀಡಲಿದೆ. ಅಷ್ಟರೊಳಗೆ ಸಲ್ಮಾನ್ ಖಾನ್ ಭಾಗಿಯಾಗಿದ್ದರು ಎನ್ನಲಾಗಿರುವ 'ಕೃಷ್ಣ ಮೃಗ ಬೇಟೆ' ಪ್ರಕರಣದ ಇಡೀ ಘಟನೆ ಎಳೆ ಎಳೆಯಾಗಿ ಬೆಳ್ಳಿತೆರೆ ಮೇಲೆ ಅನಾವರಣವಾಗಲಿದೆ.
ಹೌದು, ನೈಜ ಘಟನಾಧಾರಿತ ಚಿತ್ರಗಳು ಟ್ರೆಂಡ್ ಆಗಿರುವಾಗಲೇ ನಿರ್ದೇಶಕ ಪ್ರಕಾಶ್ ಝಾ 'ಖೈದಿ ನಂ.210' ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಟೈಟಲ್ಲೇ ಹೇಳುವಂತೆ ಇದು ಓರ್ವ ಅಪರಾಧಿಯ ಕಥೆ. ಇನ್ನೂ ಬಿಡಿಸಿ ಹೇಳಬೇಕಂದ್ರೆ, ಸಲ್ಮಾನ್ ಖಾನ್ ರವರ 'ಕೃಷ್ಣ ಮೃಗ ಬೇಟೆ' ಪ್ರಕರಣದ ಸಂಪೂರ್ಣ ಚಿತ್ರಣವೇ 'ಖೈದಿ ನಂ.210' ಹೂರಣ. [ಸಲ್ಮಾನ್ ಖಾನ್ ಗೆ ಹತ್ತು ವರ್ಷ ಜೈಲು ಶಿಕ್ಷೆ ಸಾಧ್ಯತೆ]
ಪ್ರಕರಣದ ತೀರ್ಪು ಸದ್ಯದಲ್ಲೇ ಹೊರಬರುವ ಸಾಧ್ಯತೆ ಇರುವುದರಿಂದ ನಿನ್ನೆ (ಫೆಬ್ರವರಿ 16) ರಂದು ಮುಂಬೈನ ಫಿಲ್ಮಿಸ್ತಾನ್ ಸ್ಟುಡಿಯೋದಲ್ಲಿ 'ಖೈದಿ ನಂ.210' ಸಿನಿಮಾ ಸೆಟ್ಟೇರಿದೆ.
ಯುವ ಪ್ರತಿಭೆ ಉಸ್ಮಾನ್ ಖಾನ್ ಚಿತ್ರದ ಪ್ರಮುಖ ಪಾತ್ರ, ಅಂದ್ರೆ ಸಲ್ಮಾನ್ ಖಾನ್ ಆಗಿ ಅಭಿನಯಿಸಲಿದ್ದಾರೆ. ವಿಶೇಷ ಅಂದ್ರೆ, ಜೋಧ್ ಪುರ ಜೈಲಿನಲ್ಲಿ ಸಲ್ಮಾನ್ ಖಾನ್ ಸೆಲ್ ಮೇಟ್ ಆಗಿದ್ದ ಮಹೇಶ್ ಸೈನಿ ಕೂಡ ತಮ್ಮದೇ 'ರಿಯಲ್' ಪಾತ್ರ ಪೋಷಿಸುತ್ತಿದ್ದಾರೆ.
ಹೇಳಿ ಕೇಳಿ ಇದು ನೈಜ ಘಟನೆ ಆಧಾರಿತ ಚಿತ್ರವಾದ್ದರಿಂದ ಸಲ್ಮಾನ್ ಖಾನ್ ಶಿಕ್ಷೆಗೆ ಒಳಗಾಗಿದ್ದ ಜೋಧ್ ಪುರ ಕಾರಾಗೃಹ, ಸಲ್ಲು ಇದ್ದ ಸೆಲ್, ಬ್ಯಾಡ್ ಬಾಯ್ ಬಳಸಿದ್ದ ವಾಹನದಲ್ಲೇ ಶೂಟ್ ಮಾಡುವುದಕ್ಕೆ ನಿರ್ದೇಶಕರು ನಿರ್ಧರಿಸಿದ್ದಾರೆ. [ಸಲ್ಮಾನ್ ಖಾನಿಗೆ ಜೈಲಾದರೆ, ಲಾಭ ನಷ್ಟ ಯಾರಿಗೆ?]
ಹಾಗಂತ ಚಿತ್ರದಲ್ಲಿ ಸಲ್ಮಾನ್ ಖಾನ್ ರನ್ನ 'ವಿಲನ್' ರೂಪದಲ್ಲಿ ತೋರಿಸಲ್ಲ. ಪ್ರಕರಣದ ಒಳ-ಹೊರ ಅಳೆದು ತೂಗಿ ಚಿತ್ರಕಥೆಯನ್ನ ರೆಡಿಮಾಡಿದ್ದಾರಂತೆ ನಿರ್ದೇಶಕ ಪ್ರಕಾಶ್ ಝಾ. ಸೆಲೆಬ್ರಿಟಿಗಳ ಕಷ್ಟ-ನಷ್ಟ, ಸಾಮಾಜಿಕ ಹೊಣೆಗಾರಿಕೆ ಸೇರಿದಂತೆ ಸಲ್ಮಾನ್ ಖಾನ್ ರ 'ಬಿಯಿಂಗ್ ಹ್ಯೂಮನ್' ತತ್ವ 'ಖೈದಿ ನಂ.210' ಚಿತ್ರದಲ್ಲಿರಲಿದೆ.
ನಿನ್ನೆಯಷ್ಟೇ ಚಿತ್ರ ಮುಹೂರ್ತ ಸಮಾರಂಭ ಮುಗಿಸಿದ್ದು, ಇಂದಿನಿಂದ ಶೂಟಿಂಗ್ ಶುರುವಾಗಿದೆ. ಅನೇಕ ಗೊಂದಲಗಳ ಗೂಡಾಗಿರುವ 'ಕೃಷ್ಣ ಮೃಗ ಬೇಟೆ' ಪ್ರಕರಣ 'ಖೈದಿ ನಂ.210' ಚಿತ್ರದ ಮೂಲಕ ಕ್ಲಿಯರ್ ಪಿಕ್ಚರ್ ಸಿಗಲಿದ್ಯಾ ಅನ್ನೋದು ಸದ್ಯದ ಕುತೂಹಲ. (ಏಜೆನ್ಸೀಸ್)