Don't Miss!
- Sports ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ನಡೆಯುವುದು ಯಾವಾಗ? ಎಲ್ಲಿ ನಡೆಯಲಿದೆ ಈ ಬಾರಿಯ ಸರಣಿ
- News Election: ಈ ಮತದಾರರಿಗೆ ಅಂಚೆ ಮತದಾನ ಸೌಲಭ್ಯ: ಯಾರೆಲ್ಲ ಅರ್ಹರು?
- Technology Airtel & Noise: ಇನ್ಮುಂದೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಸ್ಮಾರ್ಟ್ವಾಚ್ನದ್ದೇ ಹವಾ! ಟ್ಯಾಪ್-ಟು-ಪೇ ಫೀಚರ್ಸ್..
- Finance ಬಾಬಾ ರಾಮ್ದೇವ್ಗೆ ಖುದ್ದು ಹಾಜರಾಗುವಂತೆ ಖಡಕ್ ಸೂಚನೆ ನೀಡಿದ ಸುಪ್ರೀಂ ಕೋರ್ಟ್
- Lifestyle ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- Automobiles ಭರ್ಜರಿ ಮೈಲೇಜ್, ಬಹುಬೇಡಿಕೆಯ ಮಾರುತಿ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಹಿಳೆಯರಿಗೆ ಅಗೌರವ ತೋರಿದರೆ ತಲೆ ಕತ್ತರಿಸುತ್ತೇನೆ': ಶಾರುಖ್
ಬಾಲಿವುಡ್ ಹೊಸ ವರ್ಷದ ದಿನದಂದು ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಲೈಂಗಿಕ ಕಿರುಕುಳ ಘಟನೆಗಳಿಗೆ ನೊಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ ' ಪೋಷಕರು, ತಮ್ಮ ಗಂಡು ಮಕ್ಕಳಿಗೆ ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಕಲಿಸಬೇಕು' ಎಂದು ಹೇಳಿದ್ದರು. ಮಹಿಳೆಯರ ಗೌರವಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವ ಶಾರುಖ್, ಈಗ ತಮ್ಮ ಮಕ್ಕಳಿಗೆ ಮೊತ್ತೊಮ್ಮೆ ವಿಶೇಷ ಎಚ್ಚರಿಕೆ ಕೊಟ್ಟಿದ್ದಾರೆ.[ಬೆಂಗಳೂರಿನ ದೌರ್ಜನ್ಯ ಘಟನೆಗಳಿಗೆ ಬಾಲಿವುಡ್ ಬಾದ್ ಶಾ ಹೇಳಿದ್ದೇನು?]
ಫೆಮಿನಾಗೆ ನೀಡಿರುವ ಸಂದರ್ಶನದಲ್ಲಿ, ಬೆಂಗಳೂರಿನಲ್ಲಿ ನಡೆದ ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ಪ್ರತಿಕ್ರಿಯೆ ನೀಡಿ "ನನ್ನ ಮಕ್ಕಳಾದ ಆರ್ಯನ್ ಮತ್ತು ಅಬ್ರಾಂಗೆ ಮಹಿಳೆಯರನ್ನು ಎಂದಿಗೂ ನೋಯಿಸಬೇಡಿ. ಅಗೌರವ ನೀಡಿದಲ್ಲಿ ನಿಮ್ಮ ತಲೆ ಕತ್ತರಿಸುತ್ತೇನೆ. ಸಮಯ ಇನ್ನೂ ಬದಲಾಗಿಲ್ಲ. ಹುಡುಗಿಯೊಬ್ಬಳು ನಿಮ್ಮ ಚಡ್ಡಿ-ಬಡ್ಡಿ ಅಲ್ಲ. ಸೋ ಗೌರವ ನೀಡಿ" ಎಂದು ಹೇಳಿರುವುದಾಗಿ ಉತ್ತರಿಸಿದ್ದಾರೆ.
ಪ್ರತಿಯೊಬ್ಬರೂ ಮಹಿಳೆಯರಿಗೆ ಗೌರವ ಕೊಡಬೇಕು. ನನ್ನ ಮಕ್ಕಳ ವಿಚಾರ ಬಂದರೂ ಸರಿ ನನ್ನ ಮಕ್ಕಳು ಮಹಿಳೆಯರಿಗೆ ಅಗೌರವ ತೋರಿದ್ದೇ ಆದರೆ, ಅವರ ತಲೆಯನ್ನೂ ಕತ್ತರಿಸುತ್ತೇನೆ ಎಂದು ವಾರ್ನ್ ಮಾಡಿದ್ದಾರೆ.[ಬೆಂಗಳೂರಿನ ಘಟನೆಗೆ ಬಾಲಿವುಡ್ ನವರು ಹೀಗೆಲ್ಲಾ ಹೇಳಿದರು..]
ಮಹಿಳಾ ದೌರ್ಜನ್ಯ ಕುರಿತಂತೆ ಬಾಲಿವುಡ್ ಸೆಲೆಬ್ರಿಟಿಗಳಾದ ನಟಿ ಅನುಷ್ಕಾ ಶರ್ಮಾ, ಅಕ್ಷಯ್ ಕುಮಾರ್, ಅಮಿರ್ ಖಾನ್ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.