Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಾರುಖ್ ಖಾನ್ ಬಕ್ರೀದ್ ಹಬ್ಬಕ್ಕೆ ಬೆಂಗಳೂರು ಆಡು
ಕಳೆದ ಎರಡು ವರ್ಷಗಳಿಂದ ಶಾರುಖ್ ಅವರಿಗಾಗಿ ಆಡುಗಳನ್ನು ಬೆಂಗಳೂರಿನಿಂದ ಕಳುಹಿಸುತ್ತಿರುವ ಮೊಹಮ್ಮದ್ ಎಂಡಿ ಇಬ್ರಾಹಿಂ "ನಾನು ಕಳೆದ ವರ್ಷ ಶಾರುಖ್ ಅವರಿಗಾಗಿ ರು. 5 ಲಕ್ಷ ಬೆಲೆಬಾಳುವ ಆಡುಗಳನ್ನು ಕಳಿಸಿದ್ದೆ. ಈ ಬಾರಿ ಕೂಡ ಅವರ ಬಕ್ರೀದ್ ಆರಣೆಗಾಗಿ ಆಡುಗಳನ್ನು ಕಳುಹಿಸಲಿದ್ದೇನೆ. ಈ ಬಾರಿ 22 ಆಡುಗಳನ್ನು ಕಳುಹಿಸುವ ಯೋಜನೆಯಿದ್ದು ಇದರ ಬೆಲೆ ಸುಮಾರು 7 ಲಕ್ಷ ರು. ಆಗಲಿದೆ" ಎಂದಿದ್ದಾರೆ.
ಮೊಹಮ್ಮದ್ ಎಂಡಿ ಇಬ್ರಾಹಿಂ ಬೆಳೆಸುವ ಆಡುಗಳು ತುಂಬಾ ವಿಶೇಷವಾಗಿರುತ್ತವೆಯಂತೆ. ಕಾರಣ, ಅವರು ಆಡುಗಳಿಗೆ ಕಾಶ್ಯು, ಬಾದಾಮಿ ಹಾಗೂ ಪಿಸ್ಟಾಗಳನ್ನು ತಿನ್ನಿಸಿ ಬೆಳೆಸುತ್ತಾರಂತೆ. ಅಷ್ಟೇ ಅಲ್ಲ, ದಿನವೂ ಆ ಆಡುಗಳಿಗೆ ಆಹಾರವಾಗಿ 2 ಮೊಟ್ಟೆ ಹಾಗೂ 2 ಲೀಟರ್ ಹಾಲನ್ನೂ ಕೂಡ ಅವರು ಬಳಸುತ್ತಾರಂತೆ. ಅವರು ಮಾಡುವ ಭಾರೀ ಆರೈಕೆಯಿಂದ ಕೊಬ್ಬಿರುವ ಅವುಗಳು ಮಿಕ್ಕ ಆಡುಗಳಿಗಿಂತ ಗಾತ್ರ ಹಾಗೂ ತೂಕದಲ್ಲಿ ಗಮನಾರ್ಹವಾಗಿ ಹೆಚ್ಚಾಗಿರುತ್ತವೆಯಂತೆ. (ಬಕ್ರೀದ್ ಆಚರಣೆ ಹೇಗೆ?: ಓದಿ...)
ಒಟ್ಟಿನಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರಿಗೆ ಬೆಂಗಳೂರಿನ ಆಡುಗಳ ಮೇಲೆ ಕಣ್ಣು ಬಿದ್ದಿದೆ ಅಂದ ಹಾಗಾಯಿತು. ಕಳೆದ 2 ವರ್ಷಗಳಿಂದ ನಡೆಯುತ್ತಿರುವ ಈ ವ್ಯವಹಾರ ಇದೀಗ 3 ನೇ ವರ್ಷಕ್ಕೆ ಕಾಲಿಟ್ಟಿದೆ. ಬೆಂಗಳೂರು ಏಜೆಂಟ್ ಮೊಹಮ್ಮದ್ ಎಂಡಿ ಇಬ್ರಾಹಿಂ ಈಗ ಶಾರುಖ್ ಅವರಿಗೆ ಕಳುಹಿಸುವ ಆಡುಗಳ ಆರೈಕೆಯಲ್ಲಿ ಭಾರಿ ಬಿಜಿಯಾಗಿದ್ದಾರೆ. ಬೆಂಗಳೂರಿನಿಂದ ಬರಲಿರುವ ಆಡುಗಳಿಗಾಗಿ ಅಲ್ಲಿ ಮುಂಬೈನಲ್ಲಿ ಶಾರುಖ್ ಕಾಯುತ್ತಿದ್ದಾರೆ, ಹೇಗಿದೆ ನೋಡಿ ಶಾರುಖ್ ಬಕ್ರೀದ್ ಸಮಾಚಾರ್...(ಏಜೆನ್ಸೀಸ್)