Don't Miss!
- Lifestyle ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿಂಗ್ ಖಾನ್ ಶಾರೂಖ್ ಮಾಡಿದ ಹೊಸ ಕಿರಿಕ್
ಕಿರಿಕ್ ಗೂ, ಶಾರೂಖ್ ಗೂ ಅದೇನೋ ಒಂಥರಾ ನಂಟು. ''ನಾನೇ ಬಾಜೀಗರು'', ''ನನ್ನ ಬಿಟ್ರೆ ಬೇರೆ ಬಾದ್ ಷಾ ಇಲ್ಲ'', ಅಂತ ರೀಲ್ ನಲ್ಲಿ ಖತರ್ನಾಕ್ ಡಾನ್ ಆಗಿ ಮೆರೆಯೋ ಶಾರೂಖ್, ರಿಯಲ್ ಲೈಫಲ್ಲಿ ಮಾಡಿಕೊಂಡ ಎಡವಟ್ಟುಗಳು ನಿಮಗೆ ಗೊತ್ತಿರಲೇಬೇಕು. ಇಲ್ಲಾಂದ್ರೆ ಒಮ್ಮೆ 2012ರ ಐಪಿಎಲ್ ಸೀಸನ್ ಮತ್ತು ವಾಂಖೇಡೆ ಮೈದಾನದಲ್ಲಾದ ಘಟನೆಯನ್ನು ನೆನಪಿಸಿಕೊಳ್ಳಿ.
ಕಿರಿಕ್ ಖಾನ್ ಬಗ್ಗೆ ನಾವೀಗ ಇಷ್ಟೆಲ್ಲಾ ಹೇಳುತ್ತಿರುವುದಕ್ಕೆ ಕಾರಣ ಶಾರೂಖ್ ಮಾಡಿಕೊಂಡಿರುವ ಹೊಸ ರಾದ್ಧಾಂತ. ಇಂದು ಮುಂಜಾನೆ, ಸೂರ್ಯ ಇನ್ನೂ ನೆತ್ತಿಮೇಲೆ ಬರುವುದಕ್ಕೂ ಮುನ್ನವೇ ಶಾರೂಖ್ ಪೊಲೀಸರಿಗೆ ಮತ್ತು ಸೆಕ್ಯೂರಿಟಿ ಗಾರ್ಡ್ ಗಳಿಗೆ ಧಮ್ಕಿ ಹಾಕಿದ್ದಾರೆ.
ಮಾತಿಗೆ ಮಾತು ಬೆಳೆದು ಶಾರೂಖ್ ಕಾಲರ್ ಪಟ್ಟಿಗೆ ಮುಂಬೈ ಪೊಲೀಸರು ಕೈಹಾಕಿದ್ದಾರೆ. ಅಷ್ಟಕ್ಕೂ ಪೊಲೀಸರು ಮತ್ತು ಶಾರೂಖ್ ನಡುವೆ ಈ ಮಟ್ಟಕ್ಕೆ ಜಗಳ ತಲುಪುವುದಕ್ಕೆ ಕಾರಣ, 'ಮನ್ನತ್' ಒಳಗೆ ಶಾರೂಖ್ ಪ್ರವೇಶಿಸಲು ಮುಂದಾದಾಗ ಪೊಲೀಸರು ಅದಕ್ಕೆ ನಿರಾಕರಿಸಿದ್ದು. [ಗೂಗಲ್ ಕಚೇರಿಯಲ್ಲಿ ಹುಚ್ಚೆದ್ದು ಕುಣಿದ ಡಾನ್ ಶಾರೂಖ್ ಖಾನ್]
ಅರೇ,'ಮನ್ನತ್' ಗೆ ಕಿಂಗ್ ಖಾನ್ ಶಾರೂಖ್ ಒಡೆಯ! ಅವರ ಮನೆ ಪ್ರವೇಶಿಸುವುದಕ್ಕೆ ಅವರಿಗೆ ಅಧಿಕಾರವಿಲ್ಲವೇ? ಅನ್ನುವ ಪ್ರಶ್ನೆಗೆ ಉತ್ತರ 'ಇದು ರೀಲ್ ಕಹಾನಿ' ಅಷ್ಟೇ.
ಹೌದು, ಶಾರೂಖ್ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದದ್ದು ಶೂಟಿಂಗ್ ಗಾಗಿ. ಶಾರೂಖ್ ಮನೆ 'ಮನ್ನತ್' ಮುಂದೆ ನಡೀತಾಯಿದದ್ದು 'ಫ್ಯಾನ್' ಚಿತ್ರದ ಚಿತ್ರೀಕರಣ. 'ಫ್ಯಾನ್' ಚಿತ್ರದಲ್ಲಿ ಸೂಪರ್ ಸ್ಟಾರ್ ಅಭಿಮಾನಿಯಾಗಿ ಅಭಿನಯಿಸುತ್ತಿರುವ ಶಾರೂಖ್, ಸೂಪರ್ ಸ್ಟಾರ್ ನ ಭೇಟಿ ಮಾಡೋಕ್ಕಂತ 'ಮನ್ನತ್'ಗೆ ಬರ್ತಾರೆ. ಆದ್ರೆ ಅಲ್ಲಿನ ಸೆಕ್ಯೂರಿಟಿ, ಅದಕ್ಕೆ ನಿರಾಕರಿಸುವ ಸಂದರ್ಭದಲ್ಲಿ ಶಾರೂಖ್ ಮತ್ತು ಪೊಲೀಸರ ನಡುವೆ ವಾಕ್ಸಮರವಾಗುತ್ತೆ.
ಈ ದೃಶ್ಯದ ಚಿತ್ರೀಕರಣವನ್ನು ನೋಡೋಕೆ ಶಾರೂಖ್ ನಿವಾಸ 'ಮನ್ನತ್' ಮುಂದೆ ಜನಸ್ತೋಮವೇ ಹರಿದುಬಂದಿತ್ತು. ವಿಶೇಷ ಅಂದ್ರೆ, ಶಾರೂಖ್ ರವರ ಈ ಶೂಟಿಂಗ್ ಗೆ ಅವರ ಕಿರಿಯ ಪುತ್ರ ಅಬ್ರಂ ಖಾನ್ ಸಾಕ್ಷಿಯಾಗಿದ್ದು. [ಚೆನ್ನೈನಲ್ಲಿ ಶಾರೂಖ್ ಖಾನ್ ಕನ್ನಡ ಮಾತನಾಡಿದಾಗ!]
ಯಶ್ ರಾಜ್ ಬ್ಯಾನರ್ ನಲ್ಲಿ ರೆಡಿಯಾಗುತ್ತಿರುವ 'ಫ್ಯಾನ್' ಚಿತ್ರಕ್ಕೆ ಮನೀಶ್ ಶರ್ಮ ಆಕ್ಷನ್ ಕಟ್ ಹೇಳ್ತಿದ್ದಾರೆ. ಸ್ಟಾರ್ ಒಬ್ಬರ ಕಟ್ಟಾ ಅಭಿಮಾನಿಯಾಗಿ ಮಿಂಚುವ ಶಾರುಖ್ ಗೆ ನಾಯಕಿ ಯಾರು ಅಂತ ಚಿತ್ರತಂಡ ರಿವೀಲ್ ಮಾಡಿಲ್ಲ. ಹಾಗೇ ಇದು ಶಾರೂಖ್ ಖಾನ್ ರವರ ಅಸಲಿ ಸ್ಟೋರಿ ಅನ್ನುವ ಗುಮಾನಿಗೂ ಚಿತ್ರತಂಡ ಮೌನಮುರಿದಿಲ್ಲ. ಎಲ್ಲದಕ್ಕೂ ತೆರೆ ಬೀಳೋವರೆಗೂ ಕುತೂಹಲ ಇದ್ದಿದ್ದೆ. (ಏಜೆನ್ಸೀಸ್)