Don't Miss!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- News ದಲಿತರ ಅಭಿವೃದ್ಧಿಯನ್ನು ಬಿಜೆಪಿ ಮಾಡಿಲ್ಲ; ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಂಯುಕ್ತ ಪಾಟೀಲ್
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- Sports David Warner: ಊಟನೂ ಬೇಡ, ಹುಡುಗಿನೂ ಬೇಡ; ಆಧಾರ್ ಕಾರ್ಡ್ ಬೇಕೆಂದ ಡೇವಿಡ್ ವಾರ್ನರ್!
- Technology Lava: ಲಾವಾ ಪ್ರೊ ವಾಚ್ Zn ಹಾಗೂ Vn ಸ್ಮಾರ್ಟ್ವಾಚ್ ಲಾಂಚ್! ಸೀಮಿತ ಅವಧಿಯ ಕೊಡುಗೆ ಸಹ ಲಭ್ಯ..
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಶ್ ಚೋಪ್ರಾ 'ಪಾಕಿಸ್ತಾನ ಪ್ರೀತಿ'ಗೆ ಕಾರಣವೇನು?
ಐಎಎನ್ ಎಸ್ ಜೊತೆಗಿನ ತಮ್ಮ ಮಾತುಕತೆಯಲ್ಲಿ ಪಾಕಿಸ್ತಾನದ ನಿರ್ದೇಶಕಿ ಇರಾಮ್ ಪರ್ವೀನ್ ಬಿಲಾಲ್ "ನನಗೆ ಮುಂಬೈ ಜೊತೆ ದೀರ್ಘ ಕಾಲದ ಪ್ರೀತಿ, ಅಭಿಮಾನದ ಸಂಬಂಧವಿದೆ. 2004 ರಲ್ಲಿ ನಾನು ಮೊದಲ ಬಾರಿಗೆ ಮುಂಬೈಗೆ ಬಂದಿದ್ದೆ. ನಂತರ ಪ್ರತಿ ಬಾರಿ ಇಲ್ಲಿಗೆ ಬಂದಾಗಲೂ ನಾನು ಅವರನ್ನು ಭೇಟಿಯಾಗದೇ ಹೋಗುತ್ತಿರಲಿಲ್ಲ. ಆದರೆ ಈಗ ಯಶ್ ಜಿ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಇನ್ನೆಂದೂ ಅವರನ್ನು ನಾನು ಭೇಟಿಯಾಗಲಾರೆ ಎಂಬುದು ನನಗೆ ತೀರಾ ದುಃಖಕರ ಸಂಗತಿ" ಎಂದಿದ್ದಾರೆ.
ಮುಂದುವರಿದ ಇರಾಮ್ ಪರ್ವೀನ್ ಬಿಲಾಲ್ "ಯಶ್ ಚೋಪ್ರಾ ಅವರು ಹುಟ್ಟಿದ್ದು ಪಾಕಿಸ್ತಾನದ ಲಾಹೋರ್ ನಲ್ಲಿ. ಹೀಗಾಗಿ ಯಾವತ್ತೂ ಅವರು ಪಾಕಿಸ್ತಾನದ ಬಗ್ಗೆ ಪ್ರೀತಿ ಹಾಗೂ ಮೃದು ಧೋರಣೆ ಹೊಂದಿದ್ದರು. ಪ್ರತಿಯೊಬ್ಬರೂ ತಮ್ಮ ಹುಟ್ಟೂರಿನ ಬಗ್ಗೆ ಪ್ರೀತಿ, ಮೋಹ ಹೊಂದಿರುವಂತೆ ಚೋಪ್ರಾ ಕೂಡ ಸಹಜವಾಗಿಯೇ ಲಾಹೋರ್ ಬಗ್ಗೆ ಹೆಚ್ಚಿನ ಪ್ರೀತಿ ಹೊಂದಿದ್ದರು. 'ವೀರ್ ಝಾರಾ ಚಿತ್ರದ ಬಿಡುಗಡೆ ವೇಳೆ ನಾನು ಮುಂಬೈನಲ್ಲಿದ್ದೆ. ಆಗ ನನಗೆ ನನ್ನ ಮಿತ್ರರೊಬ್ಬರ ಮೂಲಕ ಯಶ್ ಚೋಪ್ರಾ ಪರಿಚಯವಾಯ್ತು.
ಅವರು ನನ್ನನ್ನು ತಮ್ಮ ಆತ್ಮೀಯರ ಪಟ್ಟಿಯಲ್ಲಿ ಸೇರಿಸಿಕೊಂಡರು. ನಂತರ ಸಾಕಷ್ಟು ಬಾರಿ ನಮ್ಮಿಬ್ಬರ ಭೇಟಿ ನಡೆದಿದೆ. ಜನರು ಯಾವತ್ತೂ ಆಕ್ಟಿವ್ ಆಗಿರಬೇಕೆಂದು ಅವರು ಬಯಸುತ್ತಿದ್ದರು. ರಾಜ್ ಕಪೋರ್ ಶೈಲಿಯಲ್ಲಿ "ಆಟ ನಡೆಯುತ್ತಿರಲೇಬೇಕು..." ಎನ್ನುತ್ತಿದ್ದರು ಯಶ್ ಜಿ. ಅವರು ಈಗ ವಿಧಿವಶರಾಗಿದ್ದಾರೆ. ನನಗೆ ಅವರ ಕುಟುಂಬದಲ್ಲಿ ಬೇರೆ ಯಾರೊಬ್ಬರ ಪರಿಚಯವಿಲ್ಲ. ಆದರೂ ನಾನು ಹೋಗಿ ಅವರಿಗೆ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಲಿದ್ದೇನೆ" ಎಂದಿದ್ದಾರೆ. (ಏಜೆನ್ಸೀಸ್)