ಅಚ್ಯುತ್ ಕುಮಾರ್
ಅಚ್ಯುತ್ ಕುಮಾರ್ ಜೀವನಚರಿತ್ರೆ
ಅಚ್ಯುತ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನಿತ್ವ ನಟ. ತಮ್ಮ ಕಲಾತ್ಮಕ ನಟನೆಯಿಂದ ಹತ್ತು ಹಲವು ಪಾತ್ರಗಳಿಗೆ ಜೀವ ತುಂಬಿರುವ ಇವರು ಕನ್ನಡ ಬಹುಬೇಡಿಕೆಯ ಕಲಾವಿದರು.
ಅಚ್ಯುತ್ ಕುಮಾರ್ರವರಿಗೆ ಸಂದ ಪ್ರಶಸ್ತಿಗಳು
ತಮ್ಮ ಅಭೂತಪೂರ್ವ ನಟನೆಗಾಗಿ ಎರಡು ಬಾರಿ ರಾಜ್ಯ ಪ್ರಶಸ್ತಿ ಮತ್ತು ಮೂರು ಬಾರಿ ಫಿಲ್ಮ್ಫೇರ್ ಪ್ರಶಸ್ತಿ ಪಡೆದಿದ್ದಾರೆ.ಕನ್ನಡವಲ್ಲದೇ ಇತ್ತೀಚಿಗೆ ತಮಿಳು ಚಿತ್ರಗಳಲ್ಲಿಯೂ ಮಿಂಚುತ್ತಿದ್ದಾರೆ.
1966 ರಲ್ಲಿ ತುಮುಕೂರು ಜಿಲ್ಲೆಯ ತಿಪಟೂರಿನಲ್ಲಿ ಜನಿಸಿದ ಇವರು ಅಭಿನಯದ ಮೇಲಿನ ಆಸಕ್ತಿಯಿಂದಾಗಿ ಇವರು ಶಿವಮೊಗ್ಗದ ನೀನಾಸಂ ಸೇರಿದರು. ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾಗಲೇ ಗಿರೀಶ್ ಕಾಸರವಳ್ಳಿಯವರ `ಎಸ್.ಎಲ್.ಬೈರಪ್ಪನವರ' ಕಾದಂಬರಿ ಆಧಾರಿತ ಧಾರಾವಾಹಿ `ಗೃಹಭಂಗ'ದಲ್ಲಿ ನಟಿಸಿದರು. ನಂತರ `ಮೂಡಲ ಮನೆ',`ಪ್ರೀತಿ ಇಲ್ಲದ ಮೇಲೆ' ಮುಂತಾದ ಸೀರಿಯಲ್ಗಳಲ್ಲಿ ನಟಸಿ ತಮ್ಮ ಅಭಿನಯ ಫ್ರೌಡಿಮೆ ಮೆರೆದರು.
2007 ರಲ್ಲಿ ತೆರೆಕಂಡ `ಆ ದಿನಗಳು' ಚಿತ್ರದ ಆಯಿಲ್ ಕುಮಾರ್ ಪಾತ್ರದಿಂದ ತಮ್ಮ ಸಿನಿಜೀವನ ಆರಂಭಿಸಿದರು. ನಂತರ `ಮೊಗ್ಗಿನ ಮನಸು',`ಜೋಶ್',`ನಾನು ನನ್ನ ಕನಸು' ಮುಂತಾದ ವೈವಿಧ್ಯ ಚಿತ್ರಗಳಲ್ಲಿ ನಟಿಸಿದರು.
2013 ರಲ್ಲಿ ತೆರೆಕಂಡ `ಲೂಸಿಯಾ' ಚಿತ್ರ ಇವರಿಗೆ ಸಾಕಷ್ಟು ಖ್ಯಾತಿ ತಂದು ಕೊಟ್ಟಿತು. ಈ ಚಿತ್ರದ ನಟನೆಗಾಗಿ ಫಿಲ್ಮಫೇರ್ ಪ್ರಶಸ್ತಿ ಕೂಡ ಪಡೆದಿದ್ದಾರೆ. 2011 ರಿಂದ ತಮಿಳು ಚಿತ್ರಗಳಲ್ಲಿ ನಟಿಸಲು ಆರಂಭಿಸಿದ ಇವರು ಸುಮಾರು ಆರು ತಮಿಳು ಮತ್ತು ಒಂದು ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ.