ಅಕುಲ್ ಬಾಲಾಜಿ
ಅಕುಲ್ ಬಾಲಾಜಿ ಜೀವನಚರಿತ್ರೆ
ಅಕುಲ್ ಬಾಲಾಜಿ ಕನ್ನಡ ಕಿರುತೆರೆಯ ಖ್ಯಾತ ನಿರೂಪಕ ಮತ್ತು ಚಿತ್ರನಟ. ಹಲವು ಯಶಸ್ವಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿರುವ ಇವರು ಬಿಗ್ಬಾಸ್ ಕನ್ನಡ ಸೀಸನ್ 2 ರ ವಿಜೇತರು.ಸರಿಸುಮಾರು 30 ಯಶಸ್ವಿ ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
1979 ಫೆಬ್ರವರಿ 23 ರಂದು ಆಂಧ್ರಪ್ರದೇಶದ ಕಡಪ ಜಿಲ್ಲೆಯ ರೇಲ್ವೆ ಕೋಡೂರಿನಲ್ಲಿ ಜನಿಸಿದರು. ತಮ್ಮ ಹದಿನಾರನೇ ವಯಸ್ಸಿನಲ್ಲಿಯೇ ಬೆಂಗಳೂರಿಗೆ ಬಂದ ಅಕುಲ್ ಶ್ರೀಮತಿ ಉಷಾ ದತ್ತರ್ ಅವರಿಂದ ಭರತನಾಟ್ಯ ಕಲಿತರು. ನಂತರ ಮಧು ನಟರಾಜ್ ಎಂಬುವವರಿಂದ ಕಟೆಂಪರರಿ ಮತ್ತು ಮಾಯಾ ರಾವ್ ಎಂಬುವವರಿಂದ ಕಥಕ್ ಡ್ಯಾನ್ಸ್ ಕಲಿತರು.
ಕೆಲ ಕಾಲ ರಂಗಭೂಮಿಯಲ್ಲಿ ಕೂಡ ನಟಿಸಿದ ಅಕುಲ್ ನಂತರ ನಟನಾ ತರಬೇತಿ ಪಡೆದರು. 2007 ರಲ್ಲಿ ತೆರೆಕಂಡ `ಮಿಲನ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ಸಿನಿಪಯಣ ಆರಂಭಿಸಿದರು. 2008 ರಲ್ಲಿ ತೆರೆಕಂಡ `ಆತ್ಮೀಯ' ಚಿತ್ರದ ಮೂಲಕ ನಾಯಕ ನಟನಾಗಿ ಗುರುತಿಸಿಕೊಂಡರು.
ಅಕುಲ್ ಅವರಿಗೆ ಹೆಸರು ತಂದುಕೊಟ್ಟಿದ್ದು `ಪ್ಯಾಟೆ ಹುಡಗೀರ್ ಹಳ್ಳಿ ಲೈಫ್' ರಿಯಾಲಿಟಿ ಶೋ. ಈ ಶೋದ ನಿರೂಪಕರಾಗಿ ಕರ್ನಾಟಕದಾದ್ಯಂತ ಮನೆಮಾತಾದರು. 2010 ರಲ್ಲಿ ಬಿಗ್ ಎಫ್.ಎಂ ನಿಂದ ಜನಪ್ರಿಯ ನಿರೂಪಕ ಪ್ರಶಸ್ತಿ ಪಡೆದರು.
2014 ರಲ್ಲಿ ಕನ್ನಡ ಬಿಗ್ಬಾಸ್ ಸೀಸನ್ 2 ರಲ್ಲಿ ಭಾಗವಹಿಸಿ ವಿಜೇತರಾದರು.ಕನ್ನಡ ಎಲ್ಲಾ ಪ್ರಮುಖ ವಾಹಿನಿಗಳಲ್ಲಿ ಇವರು ನಿರೂಪಕರಾಗಿ ಕೆಲಸ ಮಾಡಿದ್ದು ವಿಶೇಷ. 2008 ರಲ್ಲಿ ಜ್ಯೋತಿ ಸಮರ್ಥಿ ಎಂಬುವವರನ್ನು ಕೈಹಿಡಿದ ಅಕುಲ್ ಗೆ ಒಬ್ಬ ಪುತ್ರನಿದ್ದಾನೆ.
ಅಕುಲ್ ನಾಯಕನಟರಾಗಿ ನಟಿಸಿದ ಚಿತ್ರಗಳು
ಆತ್ಮೀಯ
ಬನ್ನಿ
ನೆರಮು ಶಿಕ್ಷಾ (ತೆಲುಗು)
ಲೂಸ್ಗಳು
ಗಗನ ಚುಕ್ಕಿ