ಡಿ.ಸುಮನ ಕಿತ್ತೂರ್
ಡಿ.ಸುಮನ ಕಿತ್ತೂರ್ ಜೀವನಚರಿತ್ರೆ
ಸುಮನಾ ಕಿತ್ತೂರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕಿ,ಸಾಹಿತಿ ಮತ್ತು ಪತ್ರಿಕೋದ್ಯಮಿ. ಇವರ ಚಿತ್ರಗಳಲ್ಲಿ ಪ್ರಮುಖವಾಗಿ ಸಮಾಜದಲ್ಲಿರುವ ಸಮಾಜಘಾತುಕ ಶಕ್ತಿಗಳ ನೈಜ ವಿವರಣೆ ಇರುತ್ತದೆ.
ಇವರು ಮೈಸೂರಿನ ಪೆರಿಯಾಪಟ್ಟಣದಲ್ಲಿ ಜನಿಸಿದರು. ಇವರು ತಂದೆ ಊರಿನಲ್ಲಿ ಒಂದು ಚಿಕ್ಕ ಥೀಯೇಟರ್ ನೆಡೆಸುತ್ತಿದ್ದರು.ಪದವಿ ನಂತರ ಬೆಂಗಳೂರಿಗೆ ಬಂದ ಇವರು ಖ್ಯಾತ ಪತ್ರಕರ್ತ ಅಗ್ನಿ ಶ್ರೀಧರ್ ಕೆಳೆಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಚಿತ್ರರಂಗದ ಒಳನೋಟಗಳನ್ನು ಅರಿತರು.
2008 ರಲ್ಲಿ ತೆರೆಕಂಡ ` ಸ್ಲಮ್ ಬಾಲ' ಚಿತ್ರದಿಂದ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದರು. ನಂತರ ಯಶ್ ಅಭಿನಯದ `ಕಳ್ಳರ ಸಂತೆ' ನಿರ್ದೇಶಿಸಿದರು. ಈ ಚಿತ್ರಕ್ಕೆ ಕರ್ನಾಟಕ ರಾಜ್ಯ ವಿಶೇಷ ಚಿತ್ರ ಪ್ರಶಸ್ತಿ ಬಂದಿತು.
ನಂತರ ಬೆಂಗಳೂರು ಭೂಗತ ಜಗತ್ತಿನ ಕುರಿತು ಆದಿತ್ಯ ಅಭಿನಯದ `ಎದೆಗಾರಿಕೆ' ಚಿತ್ರ ನಿರ್ದೇಶಿಸಿದರು. ಈ ಚಿತ್ರ ಕೂಡ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆಯಿತು. 2016 ರಲ್ಲಿ ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಆಧಾರಿತ `ಕಿರಿಗೂರಿನ ಗಯ್ಯಾಳಿಗಳು' ಚಿತ್ರವನ್ನು ನಿರ್ದೇಶಿಸಿದರು.