ಕೆ.ಎಂ.ಚೈತನ್ಯ ಜೀವನಚರಿತ್ರೆ
ಕೆ.ಎಂ.ಚೈತನ್ಯ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ , ಸಾಕ್ಷ್ಯಚಿತ್ರ ನಿರ್ದೇಶಕ ಮತ್ತು ರಂಗಕರ್ಮಿ. ಇವರು ಮೊದಲ ಬಾರಿಗೆ ನಿರ್ದೇಶಿಸಿದ `ಆ ದಿನಗಳು' ಚಿತ್ರಕ್ಕೆ ಫಿಲ್ಮ್ ಫೇರ್ ಅತ್ತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು.
2010 ರಲ್ಲಿ ತೆರೆಕಂಡ `ಸೂರ್ಯಕಾಂತಿ' ಚಿತ್ರವನ್ನು ಉಜ್ಬೇಕಿಸ್ತಾನ್ ಚಿತ್ರದಲ್ಲಿ ಚಿತ್ರೀಕರಿಸಿದ್ದರು. ಇವರು ನಿರ್ದೇಶಿಸಿದ `ಬ್ಯಾಕ್ ಟು ದಿ ಫ್ಲೂರ್' ಬಿಬಿಸಿ ಟಿವಿಯಲ್ಲಿ ಪ್ರಸಾರವಾಯಿತು. ಕನ್ನಡದಲ್ಲಿ ತಮ್ಮ ಮಾರ್ಗದರ್ಶಕ ಗಿರೀಶ್ ಕಾರ್ನಾಡ್ `ನೆಡೆದು ಬಂದ ದಾರಿ' ಎಂಬ ಡಾಕುಮೆಂಟರಿಯನ್ನು ಮಾಡಿದ್ದಾರೆ.
ಕಿರುತೆರೆಯಲ್ಲಿ ಕೂಡ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿರುವ ಚೈತನ್ಯ ರಂಗಭೂಮಿಯಲ್ಲಿ ಕೆಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ.
ಸಂಬಂಧಿತ ಸುದ್ದಿ