ಸತೀಶ್ ನೀನಾಸಂ
Born on 20 Jun 1985 (Age 38) ಬೆಂಗಳೂರು
ಸತೀಶ್ ನೀನಾಸಂ ಜೀವನಚರಿತ್ರೆ
ಅಭಿನಯ ಚತುರ ಎಂದೇ ಖ್ಯಾತಿಗಳಿಸಿರುವ ಸತೀಶ್ ನೀನಾಸಂ (ಶಿವಕುಮಾರ್) ಇವರು ಜನಿಸಿದ್ದು ಮಂಡ್ಯ ಜಿಲ್ಲೆಯ ಯಳದಳ್ಳಿಲ್ಲಿ . ಇವರ ಬಾಲ್ಯ ವಿದ್ಯಾಭ್ಯಾಸವೆಲ್ಲ ಮುಗಿಸಿದ್ದು ಸ್ವಂತ ಊರಿನಲ್ಲೇ. ಇವರು ಸಿನಿಮಾರಂಗದಲ್ಲಿ ನಟಿಸಬೇಕೆಂದು ಆಸಕ್ತಿ ಇರುವುದರಿಂದ ಇವರು ಡಿಪ್ಲಮೋ ಇನ್ ಅಕ್ಟಿಂಗ್ ಎಂಬ ಎರಡು ವರ್ಷದ ಕೋರ್ಸ್ ಮುಗಿಸಿದ ನಂತರ ಇವರಿಗೆ ಚಿತ್ರರಂಗದಲ್ಲಿ ಅಭಿನಯಿಸುವ ಅವಕಾಶಗಳು ದೊರೆತವು.
ಗಿರೀಶ್ ಕಾರ್ನಡ್, ಪೂರ್ಣಚಂದ್ರ ತೇಜಸ್ವಿ, ಯು.ಆರ್ ಅನಂತಮೂರ್ತಿ, ಬಿ.ವಿ ಕಾರಂತ್, ಸೇರಿದಂತೆ ಹಲವು ಸಾಹಿತಿಗಳು ಇವರಿಗೆ ಸ್ಫೂರ್ತಿಯಾಗಿದ್ದರು. ನಂತರ ಇವರು 2008ರಲ್ಲಿ ಇವರ ಸಿನಿಮಾ ಜೀವನ ಪ್ರಾರಂಭವಾಯಿತು. "ಲೈಫ್ ಇಷ್ಟೇನೇ", ಪಂಚರಂಗಿ, ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ನಂತರ "ಲುಸಿಯಾ" ಚಿತ್ರದ ಮೂಲಕ ಕನ್ನಡ ಚಿತ್ರ ರಂಗದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ನೀನಾಸಂ ಸತೀಶ್ ಆಗಿ ಹೊರ ಹೊಮ್ಮಿದರು. ರಾಕೆಟ್ ಚಿತ್ರಕ್ಕೆ ನಿರ್ದೇಶನ, ನಿರ್ಮಾಪಕ, ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡರು.
ಸಂಬಂಧಿತ ಸುದ್ದಿ