ಶೀತಲ್ ಶೆಟ್ಟಿ ಜೀವನಚರಿತ್ರೆ
ಶೀತಲ್ ಶೆಟ್ಟಿ ಕನ್ನಡ ಚಿತ್ರರಂಗದ ಪ್ರತಿಭಾವಂತ ಸ್ಫುರದ್ರೂಪಿ ನಟಿ. ಚಿತ್ರರಂಗಕ್ಕೆ ಬರುವ ಮುನ್ನ `ಟವಿ 9' ಕನ್ನಡ ವಾಹಿನಿಯಲ್ಲಿ ವಾರ್ತಾ ವಿಶ್ಲೇಷಕರಾಗಿದ್ದರು. ಸುಮಾರು 6 ವರ್ಷಗಳ ಕಾಲ ನ್ಯೂಸ್ ಚಾನೆಲ್ನಲ್ಲಿ ಕೆಲಸ ಮಾಡಿದ ಇವರು ನಂತರ ಅನಾರೋಗ್ಯದ ನಿಮಿತ್ತ ಈ ವೃತ್ತಿಗೆ ಕೆಲಕಾಲ ವಿದಾಯ ಹೇಳಿದರು. ನಂತರ ರಕ್ಷಿತ್ ಶೆಟ್ಟಿ ನಿರ್ದೇಶನದ `ಉಳಿದವರು ಕಂಡಂತೆ' ಚಿತ್ರದಲ್ಲಿನ ಅಭಿನಯದ ಕರೆಗೆ ಓಗೊಟ್ಟ ಇವರು ಮುಂದೆ `ಅರ್ಜುನ',`ಕೆಂಡಸಂಪಿಗೆ',`ಪ್ರೇಮ ಗೀಮ ಜಾನೆ ದೋ' ,`ಪತಿಬೇಕು.ಕಾಮ್' ಚಿತ್ರಗಳಲ್ಲಿ ನಟಿಸಿದ್ದಾರೆ.
ಇವರು ಬಿಗ್ ಬಾಸ್ ಕನ್ನಡದ ನಾಲ್ಕನೇ ಅವೃತ್ತಿಯಲ್ಲಿ ಭಾಗವಹಿಸಿದ್ದರು.
ಸಂಬಂಧಿತ ಸುದ್ದಿ