twitter
    Celebs»Srinath»Biography

    ಶ್ರೀನಾಥ್ ಜೀವನಚರಿತ್ರೆ

    ಪ್ರಣಯ ರಾಜ ಎಂದೇ ಖ್ಯಾತಿ ಗಳಿಸಿರುವ ಶ್ರೀನಾಥ್( ನಾರಾಯಣ ಸ್ವಾಮಿ) ಇವರು ರಾಮಸ್ವಾಮಿ ಶಾಸ್ತ್ರಿ ಮತ್ತು ಲಲಿತಾ ದಂಪತಿಗಳ ಮಗನಾಗಿ 28 ಡಿಸೆಂಬರ್ 1943 ಮೈಸೂರಿನಲ್ಲಿ ಜನಿಸಿದ್ದಾರೆ. ಇವರು ಚಿಕ್ಕ ವಯಸ್ಸಿನಲ್ಲೇ ರಂಗ ಭೂಮಿಯನ್ನು ಪ್ರವೇಶಿಸಿದರು. ಕನ್ನಡ ಚಿತ್ರ ರಂಗದ ಹೆಸರುವಾಸಿ ಪುಟ್ಟಣ್ಣ ಕಣಗಾಲ್ ಅವರ ಗರಡಿಯಲ್ಲಿ ಬೆಳೆದು ಬಂದಿದ್ದಾರೆ.

    "ಲಗ್ನ ಪತ್ರಿಕೆ" ಎಂಬ ಚಿತ್ರದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ನಂತರ ಮಧುರ ಮಿಲನ, ಶುಭ ಮಂಗಳ ಚಿತ್ರಗಳ ಮೂಲಕ ಶ್ರೀನಾಥ್ ವರು ಕನ್ನಡ ಚಿತ್ರ ರಂಗದಲ್ಲಿ ಗುರುತಿಸಿಕೊಂಡು ಪ್ರಣಯ ರಾಜನಾಗಿ ಹೊರ ಹೊಮ್ಮಿದ್ದಾರೆ.. ಶುಭ ಮಂಗಳ ಚಿತ್ರ ಇವರ ಜೀವನದ ಅತ್ಯುತ್ತಮವಾದ ಚಿತ್ರವೆಂದು ಮಾರ್ಪಟ್ಟಿತು. ಇವರೆಗೂ ಇವರು 200ಕ್ಕಿಂತ ಚಿತ್ರಗಳಲ್ಲಿ  ಅಭಿನಹಿಸಿ ಸೈ ಎನಿಸಿಕೊಂಡಿದ್ದಾರೆ.

    ಬೆಸುಗೆ, ಮಾನಸ ಸರೋವರ, ಹೀಗೆ ಅನೇಕ ಚಿತ್ರಗಳಲ್ಲಿ ನಾಯಕರಾಗಿ ಶ್ರೀನಾಥ್ ಅವರು ಹೊರ ಹೊಮ್ಮಿದ್ದಾರೆ. ಕನ್ನಡ ಚಿತ್ರ ರಂಗದಲ್ಲಿ ಶ್ರೀನಾಥ್ ಮಂಜುಳಾ ಅವರು ಒಳ್ಳೆಯ ಜೊಡಿಯಾಗಿ ಹೆಸರು ಮಾಡಿದವರು. ಇವರು ಕೇವಲ ಸಿನಿಮಾಗಳಲ್ಲಿ ಅಷ್ಟೇ ಅಲ್ಲದೆ ಕಿರುತೆರೆ, ಆದರ್ಶ ದಂಪತಿಗಳಲ್ಲಿ ಕಾಣಿಸಿಕೊಂಡು ಜನ ಮನ್ನಣೆಗೆ ಪಾತ್ರರಾಗಿದ್ದಾರೆ.


     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X