Don't Miss!
- News ಡಿಕೆ ಸುರೇಶ್ ಆಪ್ತರಿಗೆ ಐಟಿ ಶಾಕ್; ಬಿಜೆಪಿ ದುಡ್ಡು ಹಂಚುತ್ತಿರುವುದು ಗೊತ್ತಿಲ್ಲವೆ? : ಡಿ ಕೆ ಶಿವಕುಮಾರ್ ಹೇಳಿದ್ದೇನು?
- Finance Bengaluru Suburban Rail Project: ದೊಡ್ಡಜಾಲದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ, ವಿವರ
- Automobiles Maruti: ಜಪಾನ್ನಲ್ಲಿ ಗರಿಷ್ಟ ಗುಣಮಟ್ಟದ ಸ್ವಿಫ್ಟ್ ಕಾರು! ಭಾರತಕ್ಕೆ ಮಾತ್ರ ಕಳಪೆ ಗುಣಮಟ್ಟ ಏಕೆ?
- Technology Jio: ಅಗ್ಗದ ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಘೋಷಣೆ! 29 ರೂ.ಗಳಿಂದ ಪ್ರಾರಂಭ..
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಮೇಷ್ಟ್ರು ನಾಗತಿಹಳ್ಳಿಯ ಇಂಗ್ಲಿಷ್ ಪ್ರಣಯ
ವೃತ್ತಿಯಲ್ಲಿ ಕನ್ನಡ ಮೇಷ್ಟ್ರು ಹಾಗೂ ಪ್ರವೃತ್ತಿಯಲ್ಲಿ ಚಲನಚಿತ್ರ ನಿರ್ದೇಶಕರೂ ಆಗಿರುವ ನಾಗತಿಹಳ್ಳಿ ಚಂದ್ರಶೇಖರ್ ಹೊಸ ವಿವಾದವೊಂದನ್ನು ತಾವೇ ತಮ್ಮ ಕೈಯಾರೆ ಮೈಮೇಲೆ ಎಳೆದುಕೊಂಡಿದ್ದಾರೆ. ನಾಗತಿಹಳ್ಳಿ ಅವರಿಗೆ ಕನ್ನಡದ ಬಗ್ಗೆ ಅಸಡ್ಡೆಯೋ ಅಥವಾ ನಿರ್ಲಕ್ಷ್ಯವೋ ಗೊತ್ತಿಲ್ಲ. ತಮ್ಮ ಹೊಚ್ಚಹೊಸ ಚಿತ್ರಕ್ಕೆ 'ಬ್ರೇಕಿಂಗ್ ನ್ಯೂಸ್' ಎಂದು ಹೆಸರಿಟ್ಟಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
'ಬ್ರೇಕಿಂಗ್ ನ್ಯೂಸ್' ಚಿತ್ರ ಸೆಟ್ಟೇರಿದ ಸಂದರ್ಭದಲ್ಲಿ ಮಾಧ್ಯಮಗಳು ನಾಗತಿಹಳ್ಳಿ ಅವರನ್ನು ತಮ್ಮ ಚಿತ್ರಕ್ಕೆ ಇಂಗ್ಲಿಷ್ ಶೀರ್ಷಿಕೆ ಯಾಕೆ ಇಟ್ಟಿದ್ದೀರಿ ಎಂದು ಪ್ರಶ್ನಿಸಿದರು. ಅದಕ್ಕೆ ಒಂಚೂರು ಬೇಸರದಲ್ಲೆ ಪ್ರತಿಕ್ರಿಯಿಸಿದ ನಾಗತಿಹಳ್ಳಿ, ಅದರಲ್ಲೇನು ತಪ್ಪಿದೆ. ಸ್ಕೂಲು, ಕಾಲೇಜು, ಬ್ಯಾಂಕು ಎಂದು ಕರೆದಂತೆ ತಮ್ಮ ಚಿತ್ರಕ್ಕೂ ಬ್ರೇಕಿಂಗ್ ನ್ಯೂಸ್ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದರು.
ಇಷ್ಟೇ ಆಗಿದ್ದರೆ ಏನೂ ಆಗುತ್ತಿರಲಿಲ್ಲ. ಅವರು ಮುಂದುವರಿದು ಹೇಳಿದ್ದೇನೆಂದರೆ, ನಾನು ಕನ್ನಡ ಭಾಷೆಯ ಕುರುಡು ಅಭಿಮಾನಿಯಲ್ಲ. ಕನ್ನಡ ಭಾಷೆಯ ಅಗತ್ಯತೆ ಬಗ್ಗೆ ನನಗೆ ಒಲವಿಲ್ಲ ಎಂಬರ್ಥದ ಮಾತುಗಳನ್ನು ಆಡಿದ್ದಾರೆ. ಅವರ ಈ ಹೇಳಿಕೆ ಬಿಸಿಬಿಸಿ ವಾದ ವಿವಾದ ಚರ್ಚೆಗೆ ಎಡೆಮಾಡಿಕೊಟ್ಟಿತು.
ತಮ್ಮ ಹೊಸ ಭವ್ಯಗೃಹಕ್ಕೆ ನಾಗತಿಹಳ್ಳಿ 'ಲಿರಿಕ್ಸ್' ಎಂದು ಹೆಸರಿಟ್ಟಿರುವ ಬಗ್ಗೆಯೂ ಮಾಧ್ಯಮಗಳು ಪ್ರಶ್ನಿಸಿದವು. ನಿತ್ಯಜೀವನದಲ್ಲಿ ತಾವು ಬಳಸುವ ಇಂಗ್ಲಿಷ್ ಪದಗಳಂತೆ ತಮ್ಮ ಮನೆಗೂ ಹೆಸರಿಟ್ಟಿದ್ದೇನೆ. ತಮಿಳರಂತೆ ನಾನೇನು ಭಾಷೆಯ ಅಂಧಾಭಿಮಾನಿಯಲ್ಲ ಎಂದಿದ್ದಾರೆ. ಕನ್ನಡ ಮೇಷ್ಟ್ರು ಈ ರೀತಿ ಮಾತನಾಡಿರುವುದು ಕನ್ನಡ ಪ್ರೇಮಿಗಳ ಮನಸ್ಸಿಗೆ ಕಸಿವಿಸಿ ಉಂಟು ಮಾಡಿದೆ. (ಏಜೆನ್ಸೀಸ್)