Don't Miss!
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- News ಬೆಂಗಳೂರಿನ ಜನತೆಗೆ ಬಾಂಬು..ಮತಾಂಧರಿಗೆ ಕೊಂಬು: ಚೊಂಬು ಜಾಹೀರಾತಿಗೆ ಆರ್.ಅಶೋಕ್ ಗುಡುಗು
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Automobiles Bangaluru: ನಮ್ಮ ಯಾತ್ರಿ ಕ್ಯಾಬ್ ಸೇವೆ ಆರಂಭ.. ಎಷ್ಟಿದೆ ದರ?
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಏನು ಮಾಯವೋ ಏನೋ ಕಿರುತೆರೆಗೆ ಚಿರಂಜೀವಿ
ಇದು ಏನು ಮಾಯವೋ ಏನು ಮರ್ಮವೋ ಗೊತ್ತಿಲ್ಲ ಕಿರುತೆರೆಗೆ ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಎಂಟ್ರಿ ಕೊಡುತ್ತಿದ್ದಾರೆ. ಕೇಂದ್ರ ಪ್ರವಾಸೋದ್ಯಮ ಸಚಿವರಾಗಿ ಕಾಂಗ್ರೆಸ್ ಪಕ್ಷಕ್ಕೆ ಸ್ಟಾರ್ ಮೆರುಗನ್ನು ತಂದಂತಹ ಹೀರೋ ಈಗ ಜೀರೋ. ಸದ್ಯಕ್ಕೆ ಅವರು ರಾಜ್ಯಸಭಾ ಸದಸ್ಯರಾಗಿ ಮುಂದುವರಿಯಲಿದ್ದಾರೆ.
ಚಿರಂಜೀವಿ ಇಮೇಜನ್ನು ನಂಬಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ಸೀಮಾಂಧ್ರದಲ್ಲಿ ಸಿಕ್ಕಿದ್ದು ಸೀರುಂಡೆ. ಅತ್ತ ರಾಜಕೀಯ ಭವಿಷ್ಯವೂ ಇಲ್ಲದೆ ಇತ್ತ ಚಿತ್ರಗಳು ಇಲ್ಲದೆ ಚಿರಂಜೀವಿ ಸದ್ಯಕ್ಕೆ ಖಾಲಿ ಕುಳಿತಿದ್ದಾರಂತೆ. ಈಗ ಅವರಿಗೆ ಇದ್ದಕ್ಕಿದ್ದಂತೆ ತಮ್ಮ 150ನೇ ಚಿತ್ರ ನೆನಪಿಗೆ ಬಂದಂತಿದೆ. [ಚುನಾವಣೆಯಲ್ಲಿ ಗೆದ್ದ ಮತ್ತು ಬಿದ್ದ ಸೆಲೆಬ್ರಿಟಿಗಳು]
ಖಾಸಗಿ ಟಿವಿ ವಾಹಿನಿಯೊಂದು ಚಿರಂಜೀವಿ ಅವರನ್ನು ಈಗಾಗಲೆ ಸಂಪರ್ಕಿಸಿದ್ದು ಶೋ ನಿರ್ವಹಿಸಲು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಿದೆಯಂತೆ. ಆಗಸ್ಟ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಚಿರಂಜೀವಿ ತನ್ನ 150ನೇ ಚಿತ್ರವನ್ನೂ ಪ್ರಕಟಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಇಲ್ಲಿ ವಿಶೇಷ ಎಂದರೆ ಅಪ್ಪನ ಚಿತ್ರವನ್ನು ಮಗ ನಿರ್ಮಿಸಲಿರುವುದು. ಚಿರಂಜೀವಿ ಪುತ್ರ ರಾಮ್ ಚರಣ್ ಅಪ್ಪನ 150ನೇ ಚಿತ್ರವನ್ನು ನಿರ್ಮಿಸಲಿದ್ದಾರಂತೆ. ರಾಜಕೀಯಕ್ಕೆ ಅಡಿಯಿಟ್ಟ ಮೇಲೆ ಚಿರಂಜೀವಿ ದೇಹದ ತೂಕವೂ ಸಿಕ್ಕಾಪಟ್ಟೆ ಬದಲಾಗಿದೆ. ಇನ್ನು ಅವರು ಮುಂಚಿನಂತೆ ಸ್ಟೆಪ್ ಹಾಕುವುದು ಕಷ್ಟ.
ಇನ್ನು ಅವರು ತಮ್ಮ 150ನೇ ಚಿತ್ರದ ಕಥೆಯನ್ನು ತಮ್ಮ ಮುಂದಿನ ರಾಜಕೀಯ ಭವಿಷ್ಯತ್ತಿಗೆ ಅನುವಾಗುವಂತೆ ತೆರೆಗೆ ತರಲಾಗುತ್ತಿದೆಯಂತೆ. ತಮ್ಮ ರಾಜಕೀಯ ಜೀವನಕ್ಕೆ ಪ್ಲಸ್ ಪಾಯಿಂಟ್ ಆಗುವಂತೆ ಇದೊಂದು ಸಂದೇಶಾತ್ಮಕ ಚಿತ್ರ ಎನ್ನುತ್ತವೆ ಮೂಲಗಳು.