Don't Miss!
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- News 5 ವರ್ಷಗಳಲ್ಲಿ ಕರ್ನಾಟಕ ಸಂಸದರ ಸಾಧನೆ ಏನು? ಅಧ್ಯಯನ ಹೇಳೋದೇನು?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿರ್ದೇಶನಕ್ಕೆ ಸಿದ್ಧರಾಗಿರುವ ಮನದೀಪ್ ರಾಯ್
ಚಿಕ್ಕ ಪಾತ್ರಗಳಾದರೂ ಅದರಲ್ಲಿ ತನ್ನದೊಂದು ಗುರುತು ಉಳಿಸಿಹೋಗುವ ಮನದೀಪ್ ಕನ್ನಡದ ಉತ್ತಮ ಪೋಷಕ ಕಲಾವಿದರಲ್ಲೊಬ್ಬರು. ಅಂಥ ಮನದೀಪ್ ಇತ್ತೀಚೆಗೆ ಒಂದು ಹೊಸ ಸುದ್ದಿ ಸಿಡಿಸಿದ್ದಾರೆ. ಅದೇನೆಂದರೆ ಚಿತ್ರವೊಂದನ್ನ ನಿರ್ದೇಶಿಸಲು ಮಂದೀಪ್ ಸಿದ್ದವಾಗುತ್ತಿದ್ದಾರಂತೆ...!
ಮುತ್ತಿನ ಹನಿ ಎಂಬ ಸಿನಿಮಾ ನಿರ್ಮಾಣ ಮಾಡಿದ್ದ ಗುರುರಾಜ್ ಕವಲೂರು ಮನದೀಪ್ ಅವರ ಹೊಸ ಸಾಹಸಕ್ಕೆ ಹಣ ತೊಡಗಿಸಲಿದ್ದಾರೆ. ಮನದೀಪ್ ಈ ಚಿತ್ರಕ್ಕೆ 'ನಾಯಿ ಬಾಲ ಡೊಂಕೆ' ಎಂದು ಹೆಸರಿಟ್ಟಿದ್ದಾರೆ. ಈಗಾಗಲೇ ಈ ಚಿತ್ರದ ಸ್ಕ್ರಿಪ್ಟ್ ತಯಾರಾಗಿದ್ದು, ಚಿತ್ರದ ಅಧಿಕೃತ ಘೋಷಣೆಯಷ್ಟೇ ಬಾಕಿ.
"ನಮ್ಮ ಸಮಾಜದಲ್ಲಿ ಇಂಥ ಡೊಂಕುಗಳು ಸಾಕಷ್ಟಿವೆ. ಅವ್ಯಾವನ್ನೂ ಸರಿಪಡಿಸಲು ಸಾಧ್ಯವೇ ಇಲ್ಲ ಎಂಬ ಮಟ್ಟಿಗೆ ಅವು ಸ್ಥಿರಗೊಂಡಿವೆ. ಅದನ್ನೇ ತಮಾಷೆಯಾಗಿ ಹೇಳುವ ಕಥೆ ಸಿದ್ಧಪಡಿಸಿದ್ದೇನೆ. ಈ ಕಥೆಯಲ್ಲಿ ಒಂದು ಮರ್ಡರ್ ಮಿಸ್ಟರಿಯನ್ನೂ ಸೇರಿಸಿದ್ದು ಅದು ಪ್ರೇಕ್ಷಕರಿಗೆ ಹಿಡಿಸುತ್ತದೆ ಎಂದು ನಂಬಿದ್ದೇನೆ" ಎಂದಿದ್ದಾರೆ ಮನದೀಪ್. ಗೆಳೆಯರಿಬ್ಬರು ಮನದೀಪ್ ಸ್ಕ್ರಿಪ್ಟ್ ಮಾಡುವಾಗ ಅವರ ಜೊತೆ ಕೈಜೋಡಿಸಿ 'ನಾಯಿ ಬಾಲ ಡೊಂಕೆ'ಗೆ ಇನ್ನಷ್ಟು ಜೀವ ತುಂಬಿದ್ದಾರಂತೆ.
ಈ ಚಿತ್ರದ ಪ್ರಮುಖ ಪಾತ್ರಗಳಿಗೆ ಹೊಸಬರನ್ನೇ ಆಯ್ಕೆ ಮಾಡಿಕೊಳ್ಳುವುದು ಅವರ ಸದ್ಯದ ಯೋಜನೆ. ದಶಕಗಳಿಂದ ಚಿತ್ರರಂಗದಲ್ಲಿರುವ ಮನದೀಪ್ ಅವರಿಗೆ ನಿರ್ದೇಶನ ಕಷ್ಟವಾಗಲಾರದು ಅನ್ನೋದು ಅವರ ಗೆಳೆಯರ ಮಾತು. ಯಾಕೆಂದರೆ ಈ ಮನದೀಪ್, ಶಂಕರ್ ನಾಗ್ ಜೊತೆಯಿದ್ದಾಗ ಅವರ ನಿರ್ದೇಶನಕ್ಕೆ ಸಹಾಯಕರಾಗಿದ್ದವರು. ಜೊತೆಗೆ ಇವರಿಗೆ ಎಡಿಟಿಂಗ್ , ಸೌಂಡ ಬಗ್ಗೆಯೂ ಹೀಗಾಗಿ ನಾಯಿ ಬಾಲ ಡೊಂಕೆ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬಹುದು. (ಒನ್ ಇಂಡಿಯಾ ಕನ್ನಡ)