Don't Miss!
- Sports IPL 2024: ಚಿನ್ನಸ್ವಾಮಿ ಸಾಮ್ರಾಜ್ಯದಲ್ಲಿ ರಾಜ್ಯಭಾರ ಮಾಡಿದ ವಿರಾಟ್; KKRಗೆ ಸವಾಲಿನ ಗುರಿ ನೀಡಿದ RCB
- Lifestyle 10 ವರ್ಷದಿಂದ ನಿರಂತರ ರಕ್ತ ಕುಡಿಯುತ್ತಿರುವ ಯುವತಿ..! ರಕ್ತವೇ ಟೀ, ಅದರಲ್ಲೇ ಊಟ..!
- News Rain Alert: ಕೊಡಗಿನ ವಿವಿಧಡೆ ಮಳೆ ಅಬ್ಬರ: ಮೋಡ ಕವಿದ ವಾತಾವರಣ
- Automobiles Brezza: ಮಾರುತಿ ಸುಜುಕಿ ಬ್ರೆಝಾ ಖರೀದಿಸಬೇಕೇ.. ಆನ್ ರೋಡ್ ಬೆಲೆ ಎಷ್ಟು? EMI ಏನು?
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಲ್ಲೂ ಇಲ್ಲ ಇಲ್ಲೂ ಇಲ್ಲ ಎಂಬ ಸ್ಥಿತಿಯಲ್ಲಿ ನೀತೂ!
ಅವರೀಗ ಹೊಸಬರಂತೆ ಅವಕಾಶ ಅರಸಿ ಹೋಗಬೇಕಾಗಿಲ್ಲ. ಆದರೆ ಬರಬೇಕಾಗಿರುವ ಅವಕಾಶ ಬರುತ್ತಿಲ್ಲ. ಈ ಬಗ್ಗೆ ನೀತು "ಪರಭಾಷೆಯ ಅವಕಾಶಗಳು ಹುಡುಕಿಕೊಂಡು ಬಂದಾಗ ಕನ್ನಡ ಚಿತ್ರರಂಗದ ಮೇಲಿನ ಪ್ರೀತಿ ಅಡ್ಡ ಬಂತು. ಕನ್ನಡ ಚಿತ್ರರಂಗ ನನ್ನನ್ನು ಕಡೆಗಣಿಸುತ್ತಿರುವ ಈ ಸಂದರ್ಭದಲ್ಲಿ ಪರಭಾಷೆಯ ಅವಕಾಶಗಳು ಮುಗಿದುಹೋಗಿವೆ, ಅಲ್ಲಿ ನನಗೆ ಬಾಗಿಲು ಮುಚ್ಚಿಹೋಗಿದೆ" ಎಂದಿದ್ದಾರೆ.
ನೀತೂ ನಟಿಸಿರುವ ಒಂದೇ ಒಂದು ಪರಭಾಷೆಯ ಚಿತ್ರ ಮಲಯಾಳಂನ 'ಫೋಟೋಗ್ರಾಫರ್'. ಆದರೆ ಕನ್ನಡದಲ್ಲಿ ಅವರು ಸುಮಾರು ಹದಿನೇಳು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಯೋಗರಾಜ್ ಭಟ್ಟರ 'ಗಾಳಿಪಟ'ದಲ್ಲಿ ಅವರ 'ರಾಧಾ' ಪಾತ್ರವನ್ನಂತೂ ಪ್ರೇಕ್ಷಕರು ಎಂದೂ ಮರೆಯಲಾರರು. ನೀತೂ 'ಥೂ' ಎಂದು ಉಗಿಯುವ ಡೈಲಾಗಿಗೆ ಸ್ಯಾಂಡಲ್ ವುಡ್ 'ಶಹಬ್ಬಾಸ್' ಎಂದಿತ್ತು.
ಆ ವೇಳೆ ಬಹಳಷ್ಟು ಪರಭಾಷೆಯ ನಿರ್ಮಾಪಕರು ಹಾಗೂ ನಿರ್ದೇಶಕರು ನೀತೂ ಕಾಲ್ ಶೀಟ್ ಕೇಳಿದ್ದರು. ಆದರೆ ಆಗ ನೀತೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅದಕ್ಕೆ ಕಾರಣ, ಅವರೇ ಹೇಳಿಕೊಂಡಂತೇ ಅವರಿಗೆ ಕನ್ನಡ ಚಿತ್ರರಂಗದ ಮೇಲಿದ್ದ ಪ್ರೀತಿ. ಆಗ ಅದೇ ಸರಿ ಅನ್ನಿಸಿತ್ತಂತೆ. ಆದರೆ ಈಗ ನೀತೂಗೆ ಅಂದು ಮಾಡಿರುವ ತಪ್ಪಿನ ಅರಿವಾಗಿದೆಯಂತೆ.
ಇಂದು ಕನ್ನಡ ಚಿತ್ರರಂಗ ನೀತೂರನ್ನು ಕಡೆಗಣಿಸುತ್ತಿದೆ. ಯಾವ್ಯಾವುದೋ ಪ್ರಯೋಜನಕ್ಕೆ ಬಾರದ ಪಾತ್ರಗಳೇ ಅವರನ್ನು ಹುಡುಕಿಕೊಂಡು ಬರುತ್ತಿವೆ. ದೊಡ್ಡ ನಿರ್ದೇಶಕರು, ದೊಡ್ಡ ಬ್ಯಾನರುಗಳು ನೀತೂಗೆ ಆಫರ್ ನೀಡುತ್ತಿಲ್ಲ. ನೀತೂ ಈಗ ಕನ್ನಡದಲ್ಲಿ ಆಟಕ್ಕಿರುವ ಲೆಕ್ಕಕ್ಕಿಲ್ಲದ ನಾಯಕಿನಟಿ. ಹೊಸಬರು ಅವರನ್ನು ಹುಡುಕಿಕೊಂಡು ಬರುತ್ತಾರೆ. ಆದರೆ ಚಿತ್ರಗಳು ಗೆಲ್ಲುತ್ತಿಲ್ಲ.
ನೀತೂ ಈಗ ಪರಭಾಷೆಯ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ. ಆದರೆ ಸದ್ಯಕ್ಕೆ ಯಾರೂ ಕರೆದಿಲ್ಲ. ಅವರ ಕೈಯಲ್ಲೀಗ ಕೇವಲ ಎರಡು ಕನ್ನಡ ಚಿತ್ರಗಳಿವೆ. ಒಂದು '90' ಖ್ಯಾತಿಯ ಲಕ್ಕಿ ಶಂಕರ್ ನಿರ್ದೇಶನ ಹಾಗೂ ರವಿಶಂಕರ್ ನಾಯಕತ್ವದ 'ದೇವರಾಣೆ'. ಇನ್ನೊಂದು ಸುನಿಲ್ ಹುಬ್ಬಳ್ಳಿ ನಿರ್ದೇಶನದ 'ಪಾರು ಐ ಲವ್ ಯೂ'.
ಪಾರು ಐ ಲವ್ ಯೂ ಚಿತ್ರದ ಪಾತ್ರ ನೀತೂಗೆ ತುಂಬಾ ಇಷ್ಟವಾಗಿದೆಯಂತೆ. ಇದು ಯೋಗರಾಜ್ ಭಟ್ಟರ 'ಗಾಳಿಪಟ'ದ ರಾಧಾಳ ಪಾತ್ರವನ್ನೂ ಮೀರಿಸುವಂತಿದೆ ಎಂಬುದು ಸ್ವತಃ ನೀತೂ ಹೇಳಿಕೆ. ಆದರೆ ಚಿತ್ರ ಗೆದ್ದರೆ ಮಾತ್ರ ಇದರಿಂದ ಅವರಿಗೆ ಲಾಭ ಎಂಬ ಅರಿವು ನೀತೂಗೆ ಸ್ಪಷ್ಟವಾಗಿದೆ. ಮುಂದಕ್ಕೆ ಏನೋ ಎಂಬ ಗಾಬರಿ ನೀತೂ ಮುಖ ಹಾಗೂ ಮಾತಿನಲ್ಲಿದೆ. ಆಲ್ ದಿ ಬೆಸ್ಟ್ ನೀತೂ... (ಒನ್ ಇಂಡಿಯಾ ಕನ್ನಡ)