Don't Miss!
- Technology WhatsApp: ವಾಟ್ಸಾಪ್ಗೆ ಕೆಲವೇ ದಿನಗಳಲ್ಲಿ ಸೇರಲಿವೆ ಬಹುನಿರೀಕ್ಷಿತ ಈ ಫೀಚರ್ಸ್! ಇವುಗಳಿಂದ ಏನೆಲ್ಲಾ ಲಾಭ?
- News karnataka Rain: ಇಂದಿನಿಂದ ರಾಜ್ಯದಲ್ಲಿ ಜೋರು ಮಳೆ: ಬೆಂಗಳೂರಿನಲ್ಲಿ ಕೆಲವೆಡೆ ಮಾತ್ರ ವರಣ ಕೃಪೆ ತೋರುವ ಸಾಧ್ಯತೆ- ಐಎಂಡಿ ಅಲರ್ಟ್
- Finance ಮೊಮೊಸ್ ಮಾರುವ ಶಾಪ್ನಿಂದ ಜಾಬ್ ಆಫರ್ ಸಖತ್ ವೈರಲ್! ವೇತನವೆಷ್ಟು ಗೊತ್ತಾ?
- Lifestyle ಬೆಂಗಳೂರಲ್ಲಿ ಮರ ತಬ್ಬಿಕೊಳ್ಳಲು ₹1,500 ಶುಲ್ಕ..! ಇದೇನಿದು ಕಬ್ಬನ್ ಪಾರ್ಕ್ ನಡಿಗೆ..?
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ಪ್ರಣೀತಾ ಭಾರೀ ಕಿರಿಕ್ಕು ಎಂಬ ಸುದ್ದಿ ನಿಜವೇ?
ಜರಾಸಂಧ ನಂತರ ಕನ್ನಡದಲ್ಲಿ, ಐವರು ನಾಯಕರಿಗೆ ಒಬ್ಬರೇ ನಾಯಕಿಯಾಗಿ 'ಸ್ನೇಹಿತರು' ಚಿತ್ರದಲ್ಲಿ ಪ್ರಣೀತಾ ಸುಭಾಷ್ ನಟಿಸಿದ್ದಾರೆ. ಅವರಿಗೀಗ ಭಯಂಕರ ಎನ್ನುವಷ್ಟು ಡಿಮ್ಯಾಂಡ ಸೃಷ್ಟಿಯಾಗಿದೆ. ತಮಿಳು ಸ್ಟಾರ್ ಸೂರ್ಯ ತಮ್ಮ ಕಾರ್ತಿ ಜೊತೆ ನಟಿಸಿದ ಚಿತ್ರ ಸಗುನಿ ನಂತರ ಪ್ರಣೀತಾ, ಸೂರ್ಯ ಅವರ ಮುಂದಿನ 'ತುಪ್ಪರಿಯಂ ಆನಂದನ್' ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಕರಾರಿಗೆ ಸಹಿ ಹಾಕುವುದು ಮಾತ್ರ ಬಾಕಿ ಇದೆಯಂತೆ.
ಆದರೆ ಅಷ್ಟರಲ್ಲೇ ಪ್ರಣೀತಾ ಕಿರಿಕ್ಕುಗಳು ಶುರುವಾಗಿದೆ ಎಂಬು ಸುದ್ದಿ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಹೊಸ ನಟರಿಗೆ ನಾಯಕಿಯಾಗಲು ಕಾಲ್ ಶೀಟ್ ಕೇಳಿದರೆ ಕಡ್ಡಿ ಮುರಿದಂತೆ 'ಆಗೊಲ್ಲ' ಎನ್ನುತ್ತಾರೆ ಎಂಬುದು ಸದ್ಯಕ್ಕೆ ಪ್ರಣೀತಾ ಮೇಲಿರುವ ದೂರು. ಹೊಸಬರು ಚಿಲ್ಲರೆ ಹೀರೋಗಳು ಎಂಬ ಮಾತನ್ನು ಪ್ರಣೀತಾ ಹೇಳುತ್ತಾರೆ ಎನ್ನಲಾಗಿದೆ.
ಆದರೆ, ಈ ಎಲ್ಲಾ ವಿಷಯಗಳನ್ನು ಪ್ರಣೀತಾ ಅಲ್ಲಗಳೆದಿದ್ದಾರೆ. "ನನಗೆ ನಾಯಕರಾಗಿ ಯಾರು ನಟಿಸುತ್ತಾರೆ ಅನ್ನೋದು ಮುಖ್ಯವಲ್ಲ. ಕಥೆ ಹಾಗೂ ನನ್ನ ಪಾತ್ರವಷ್ಟೇ ಮುಖ್ಯ" ಎಂದಿದ್ದಾರೆ ಪ್ರಣೀತಾ. ಅಷ್ಟೇ ಅಲ್ಲ, "ನಾನೂ ಕೂಡ ಹೊಸಬಳೇ. ಈಗಲೂ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಹೀಗಿರುವಾಗ ಹೊಸಬರ ಜೊತೆ ಮಾಡುವುದಿಲ್ಲವೆಂದು ಹೇಳುವುದು ಹೇಗೆ?" ಎಂದು ಪ್ರಶ್ನಿಸಿದವರನ್ನೇ ತಿರುಗಿ ಪ್ರಶ್ನೆ ಕೇಳುತ್ತಾರೆ.
ತಮಗೆ ಸಗುನಿಯಂತಹ ಸೂಪರ್ ಹಿಟ್ ಚಿತ್ರದಲ್ಲಿ ಅವಕಾಶ ಕೊಟ್ಟ ತಮಿಳು ಚಿತ್ರರಂಗದ ಬಗ್ಗೆ ಪ್ರಣೀತಾರಿಗೆ ಕೃತಜ್ಞತೆಯಿದೆ. ಜೊತೆಗೆ ತಮಿಳು ಚಿತ್ರದಲ್ಲಿ ನಟಿಸಿರುವ ಹೆಮ್ಮೆಯೂ ಇದೆ. ನಿರ್ದೇಶಕ ಶಂಕರ್ ದಯಾಳ್, ನಾಯಕ ಕಾರ್ತಿ ಮುಂತಾದವರನ್ನು ಹೋದಲ್ಲೆಲ್ಲಾ ಬಹಳಷ್ಟು ಹೊಗಳುವ ಈ ನಟಿ ತಮಗೆ ತಮಿಳು ಗೊತ್ತಿಲ್ಲದಿದ್ದರೂ ಚೆನ್ನಾಗಿ ನಡೆಸಿಕೊಂಡರು, ಯಾರೂ ತೊಂದರೆ ಕೊಡಲಿಲ್ಲ ಎಂದಿದ್ದಾರೆ.
ಕನ್ನಡದಲ್ಲಿ ಈಗಷ್ಟೇ ಸ್ನೇಹಿತರು ಚಿತ್ರ ಮುಗಿಸಿರುವ ಪ್ರಣೀತಾ, ಮುಂದೆ ಕಿಚ್ಚ ಸುದೀಪ್ 'ಬಚ್ಚನ್' ಮತ್ತು ಗೋಲ್ಡನ್ ಸ್ಟಾರ್ ಗಣೇಶ್ 'ಮಿಸ್ಟರ್ 420'ಯಲ್ಲಿ ನಟಿಸಬೇಕಿದೆ. ಇನ್ನು ತಮಿಳಿನಲ್ಲಿ ಸೂರ್ಯ ನಾಯಕನಾಗಿರುವ 'ತುಪ್ಪರಿಯಂ ಆನಂದನ್' ಚಿತ್ರ ಪಕ್ಕಾ ಆಗಿ ಅದು ಯಾವಾಗ ಪ್ರಾರಂಭವಾಗಲಿದೆಯೋ, ಕಾದು ನೋಡಬೇಕು. ಆದರೆ ಯಾಕೆ ಪ್ರಣೀತಾ ಹೀಗೆಲ್ಲಾ ಸುದ್ದಿಯಾಗುತ್ತಿದ್ದಾರೆ? ಸುದ್ದಿ ನಿಜವೇ...! (ಒನ್ ಇಂಡಿಯಾ ಕನ್ನಡ)