Don't Miss!
- Sports SRH vs MI IPL Match: ಹೈಲೈಟ್ಸ್ ನಂತೆ ಕಂಡ ಲೈವ್ ಮ್ಯಾಚ್: ಮುತ್ತಿನ ನಗರಿಯಲ್ಲಿ ಆರ್ಭಟಿಸಿ ಇತಿಹಾಸದ ಪುಟ ಸೇರಿದ SRH
- Lifestyle ಬೆಂಗಳೂರಿಗರೇ... ನೀರಿನ ಕೊರತೆ ತಪ್ಪಿಸಲು ಈ ಟ್ರಿಕ್ಸ್ ಹಾಗೂ ಟಿಪ್ಸ್ ತುಂಬಾನೇ ಪ್ರಯೋಜನಕಾರಿಯಾಗಿದೆ ನೋಡಿ
- News Chitradurga Lok Sabha Constituency: ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ರಾಜಕೀಯ ಹಿನ್ನೆಲೆ ತಿಳಿಯಿರಿ-ಮಾಹಿತಿ, ವಿವರ
- Finance ಐಟಿಆರ್ ಸಲ್ಲಿಸಿದ್ದರೂ, ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ಇಮೇಲ್ ಬಂದಿದೆಯೇ?
- Automobiles ಜಿಮ್ನಿಗೆ ಸೆಡ್ಡು ಹೊಡೆಯಲು ಎಂಜಿ ಮಾಸ್ಟರ್ ಪ್ಲಾನ್: ಸದ್ಯದಲ್ಲೇ ಕಾಮೆಟ್ ಆಧರಿಸಿ 5 ಡೋರ್ ಕಾರು ಭಾರತಕ್ಕೆ?
- Technology ರೆಡ್ಮಿಯ ಈ ಮೊಬೈಲ್ಗೆ ಇರುವ ಬಿಗ್ ಆಫರ್ ತಿಳಿದ್ರೆ, ಖಂಡಿತಾ ವಾವ್ ಅಂತೀರಾ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ರಂಭಾ ರು.4 ಕೋಟಿ ಚಿನ್ನಾಭರಣ ಕಳೆದುಕೊಂಡ್ರಾ?
'ಸರ್ವರ್ ಸೋಮಣ್ಣ' (1993) ಚಿತ್ರದ ಮೂಲಕ ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ರಂಭಾ ಒಂದು ಕಾಲದಲ್ಲಿ ಇಡೀ ದಕ್ಷಿಣ ಚಿತ್ರರಂಗವನ್ನು ಆಳಿದವರು. ಇಂದಿರನ್ ಪದ್ಮನಾಭನ್ ಅವರನ್ನು ಮದುವೆಯಾದ ಬಳಿಕ ಬಣ್ಣದ ಜಗತ್ತಿನಿಂದ ದೂರ ಸರಿದಿದ್ದರು. ಇದೀಗ ಮತ್ತೆ ಸುದ್ದಿಗೆ ಆಹಾರವಾಗಿದ್ದಾರೆ.
ರು.4 ಕೋಟಿ ಚಿನ್ನಾಭರಣ ಕಳೆದುಕೊಂಡ ಕೇಸ್ ಒಂದರಲ್ಲಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಈ ಸಂಬಂಧ ನಟಿ ರಂಭಾ ಅವರ ಸೋದರ ಶ್ರೀನಿವಾಸ್ ಅವರು ಹೈದರಾಬಾದಿನ ಬಂಜಾರಾಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. [ಕವಲುದಾರಿಯಲ್ಲಿ ನಟಿ ರಂಭಾ ದಾಂಪತ್ಯ ಜೀವನ?]
ತನ್ನ ಸಹೋದರಿ ರಂಭಾ ಅವರಿಗೆ ಸೇರಿದ ರು.4.5 ಕೋಟಿ ಬೆಲೆಬಾಳುವ ಆಭರಣಗಳನ್ನು ತನ್ನ ಪತ್ನಿ ಪಲ್ಲವಿ ಮತ್ತವರ ಕುಟುಂಬಿಕರು ಕದ್ದಿದ್ದಾರೆ ಎಂದು ಶ್ರೀನಿವಾಸ್ ಆರೋಪಿಸಿದ್ದಾರೆ. ರಂಭಾ ಅವರು ಮೂರು ವರ್ಷಗಳ ಹಿಂದೆ ಕೆನಡಾಗೆ ಹೋಗಿದ್ದಾಗ ಈ ಘಟನೆ ನಡೆದಿರುವುದಾಗಿ ಹೇಳಿದ್ದಾರೆ.
ಆಗ ಆಭರಣಗಳನ್ನು ರಂಭಾ ಅವರು ನಮ್ಮ ಮನೆಯಲ್ಲಿ ಇಟ್ಟು ಹೋಗಿದ್ದರು. ತನ್ನ ಪತ್ನಿ ಪಲ್ಲವಿ ಹಾಗೂ ಆಕೆಯ ಸೋದರಿ ಶಾಂತಿ ಸಿಂಗ್ ಚೌಹಾಣ್ ಇನ್ನಿತರರು ಕದ್ದಿದ್ದಾರೆ ಎಂದು ಶ್ರೀನಿವಾಸ್ ಅವರು ದೂರು ನೀಡಿದ್ದಾರೆ. ನನ್ನ ಮಗನನ್ನೂ ಅವರು ನನ್ನಿಂದ ದೂರ ಮಾಡಿದರು. ಇದುವರೆಗೂ ನನ್ನ ಪುತ್ರನನ್ನು ನನಗೆ ತೋರಿಸುತ್ತಿಲ್ಲ ಎಂದು ಅವರು ತಮ್ಮ ದುಗುಡ ತೋಡಿಕೊಂಡಿದ್ದಾರೆ.
ಪಲ್ಲವಿ ಅವರ ಅಕ್ಕ ಮುಂಬೈನಲ್ಲಿ ಗೋಲ್ಡ್ ಬಿಜಿನೆಸ್ ಮಾಡುತ್ತಿದ್ದಾರೆ. ಆ ಮಳಿಗೆಯಲ್ಲಿ ಚಿನ್ನಾಭರಣಗಳನ್ನು ಪ್ರದರ್ಶಿಸಲು ರಂಭಾ ಅವರ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದರು. ಆದರೆ ಬಹಳ ಕಾಲದವರೆಗೂ ವಾಪಸ್ ತಂದುಕೊಟ್ಟಿರಲಿಲ್ಲ. ಬಹಳ ಕಾಲದ ಬಳಿಕ ಆಭರಣಗಳನ್ನು ಮನೆಗೆ ಕಳುಹಿಸಿದರು. ಅವನ್ನು ಪರೀಕ್ಷಿಸಲಾಗಿ ನಕಲಿ ಎಂದು ಗೊತ್ತಾಯಿತು ಎಂದಿದ್ದಾರೆ ಶ್ರೀನಿವಾಸ್.
ಈ ಹಿಂದೊಮ್ಮೆ ಶ್ರೀನಿವಾಸ್ ಅವರ ಪತ್ನಿ ಪಲ್ಲವಿ ಅವರು ರಂಭಾ ಮತ್ತವರ ತಂದೆತಾಯಿ ಹಾಗೂ ತನ್ನ ಪತಿ ಶ್ರೀನಿವಾಸ್ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದರು. ಈ ಸಂಬಂಧ ಹೈದರಾಬಾದಿನ ಬಂಜಾರಾಹಿಲ್ಸ್ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ವಿರೋಧಿ ಕಾಯಿದೆಗಳಡಿ ದೂರು ದಾಖಲಾಗಿದೆ. ಸದ್ಯಕ್ಕೆ ಪಲ್ಲವಿ ಅವರು ಶ್ರೀನಿವಾಸ್ ಜೊತೆ ಇಲ್ಲ.