Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂಬರೀಷ್ ತಮ್ಮ ಗೆಳಯನಿಗೇ 'ವಸತಿ' ಮಾಡಿಕೊಡಲಿಲ್ಲ..!
ಅಂಬರೀಷ್ ರನ್ನು ರಾಜ್ಯ ಸರ್ಕಾರದ ಸಚಿವ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ನಿನ್ನೆ ಚಿತ್ರರಂಗದ ನಿರ್ಮಾಪಕರು ಪ್ರತಿಭಟಿಸಿದ್ದಾರೆ. ಸಿನಿಮಾಗೆ ಬಂದರೆ ಅಂಬರೀಷ್ ಕನ್ನಡ ಚಿತ್ರರಂಗದ ಪರಮೋಚ್ಚ ನಾಯಕರೇ ಆದರೆ ರಾಜಕೀಯದಲ್ಲಿ ಅಂಬಿಗಿಂತ ಹಿರಿಯ ತಲೆಗಳಿದ್ದಾರೆ ಮತ್ತು ಅವಕಾಶಕ್ಕಾಗಿ ಕಾದವರಿದ್ದಾರೆ. ಇಷ್ಟಕ್ಕೂ ಅಂಬರೀಷ್ ಗೆ ಮನೋರಂಜನಾ ವಲಯಕ್ಕೆ ಸಂಬಂಧಪಟ್ಟ ಖಾತೆಯನ್ನು ಕೊಟ್ಟು ಈಗ ಕೆಳಗಿಳಿಸಿದರೆ? ಇದ್ದದ್ದು ವಸತಿ ಖಾತೆ.
ಇದಕ್ಕಿಂತ ಹೆಚ್ಚು ಬೇಸರದ ಸಂಗತಿ ಅಂದ್ರೆ ತಮ್ಮ ಕುಚಿಕೂ ಗೆಳೆಯ ಕನ್ನಡಿಗರ ಯಜಮಾನ ವಿಷ್ಣುವರ್ಧನ್ ರಿಗೇ ಒಂದು ವಸತಿ ಮಾಡಿಕೊಡಲಾಗದ ರೆಬೆಲ್ ಸ್ಟಾರ್ ವಿಧಾನಸೌಧದಲ್ಲಿ ವಸತಿ ಖಾತೆ ಪಡೆದು ಏನೇ ಕೆಲಸ ಮಾಡಿದ್ದರೂ ನಮಗೆ ಸಮಾಧಾನ ಇಲ್ಲ ಎನ್ನುತ್ತಿದೆ ವಿಷ್ಣು ಅಭಿಮಾನಿ ಬಳಗ. [ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿಷ್ಣು ಅಭಿಮಾನಿಗಳ ಪತ್ರ]
ಅಂಬರೀಷ್ ಮನಸ್ಸು ಮಾಡಿದರೆ ಭಾರತಿ ವಿಷ್ಣುವರ್ಧನ್ ರನ್ನು ಮನವೋಲಿಸುವುದು ಸರ್ಕಾರದಿಂದ ಸಕಲ ವ್ಯವಸ್ಥೆಯನ್ನು ಮಾಡುವುದು ದೊಡ್ಡ ಕಷ್ಟದ ಕೆಲಸವೇನೂ ಅಲ್ಲ ಎನ್ನುತ್ತಿದ್ದಾರೆ ಸಾಹಸಿಂಹನ ಅಭಿಮಾನಿಗಳು. [ವಿಷ್ಣುವರ್ಧನ್ ಸ್ಮಾರಕದ ಕಥೆ ಹೇಳುವೆ, ನಿನ್ನ ಕಥೆ ಹೇಳುವೆ!]
ಮೂರು ವರ್ಷ ಹಿಂದಕ್ಕೆ ಒಮ್ಮೆ ಯೋಚಿಸಿ, ಅಂಬರೀಷ್ ರಿಗೆ ಸಚಿವಸ್ಥಾನ ಸಿಕ್ಕಾಗ ಎಲ್ಲರಿಗೂ ಮೊದಲು ನೆನಪಾಗಿದ್ದೇ ವಿಷ್ಣು ಸಮಾಧಿಯ ವಿಚಾರ. ಅಂಬಿ ಸಚಿವರಾದ್ರೆ ವಿಷ್ಣು ಸಮಾಧಿ ನಿರ್ಮಾಣವಾದಂತೆಯೇ ಅಂತ ಚಿತ್ರರಂಗದವರು ಮತ್ತು ಚಿತ್ರಪ್ರೇಮಿಗಳು ಅಂದುಕೊಂಡ್ರು.
ಈಗ ಚಿತ್ರರಂಗ ಅಂಬರೀಷ್ ಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಪ್ರತಿಭಟಿಸುತ್ತದೆಯಾ? ಮತ್ತೆ ಅಂಬಿ ಮಂತ್ರಿಯಾಗ್ತಾರಾ? ಗೊತ್ತಿಲ್ಲ. ಆದರೆ ಅದೊಂದು ಕೆಲಸ ಮಾಡಿದ್ರೆ ಅಂಬಿಯನ್ನು ಇಡೀ ಕರ್ನಾಟಕವೇ ಕೃತಜ್ಞತೆಯಿಂದ ಸ್ಮರಿಸುತ್ತೆ.