Don't Miss!
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Automobiles 20 ವರ್ಷದ ಬಳಿಕ ಲ್ಯಾಂಬೋರ್ಗಿನಿ ಲೋಗೋಗೆ ಹೊಸ ಟಚ್: ಈ ಕಂಪನಿಯ ಕಾರುಗಳು ಯಾಕೆ ಫೇಮಸ್?
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಡುಗಡೆಗೂ ಮುನ್ನವೇ ಪವರ್ ಸ್ಟಾರ್ ಚಿತ್ರ ಲೀಕ್
ಈ ರೀತಿಯ ಅಚ್ಚರಿಗಳು ಸಿನಿಮಾ ಕ್ಷೇತ್ರದಲ್ಲಿ ಬಿಟ್ಟರೆ ಇನ್ನೆಲ್ಲಾದರೂ ಕಂಡರಿಯಲು ಸಾಧ್ಯವೇ? ಬಿಡುಗಡೆಗೂ ಮುನ್ನವೇ ಭಾರಿ ಬಜೆಟ್ ಚಿತ್ರವೊಂದರ ನಕಲಿ ಸಿಡಿಗಳು ಮಾರುಕಟ್ಟೆಗೆ ಬಂದಿವೆ. ಈ ಮೂಲಕ ತೆಲುಗು ಚಿತ್ರರಂಗಕ್ಕಷ್ಟೇ ಅಲ್ಲ ಭಾರತೀಯ ಚಿತ್ರರಂಗಕ್ಕೆ ಹೊಸ ಸವಾಲೊಡ್ಡಿದೆ.
ಇಷ್ಟಕ್ಕೂ ಬಿಡುಗಡೆಗೂ ಮುನ್ನವೇ ಲೀಕ್ ಆಗಿರುವ ಚಿತ್ರ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ 'ಅತ್ತಾರಿಂಟಿಕಿ ದಾರೇದಿ' (ಅತ್ತೆ ಮನೆಗೆ ದಾರಿಯಾವುದು). ಒಟ್ಟು 90 ನಿಮಿಷಗಳ ಕಾಲದ ನಕಲಿ ಸಿಡಿಗಳು ಈಗ ಬಿಡುಗಡೆಯಾಗಿ ತೆಲುಗು ಚಿತ್ರೋದ್ಯಮವನ್ನು ತಲ್ಲಣಗೊಳಿಸಿದೆ.
ಚಿತ್ರದ ನಕಲಿ ಸಿಡಿಗಳು ಎರಡು ವಾರದ ಮುಂಚೆಯೇ ಮಾರುಕಟ್ಟೆಗೆ ಬಂದಿರುವುದು ಅತ್ತ ನಿರ್ಮಾಪಕರು ಇತ್ತ ಅಭಿಮಾನಿಗಳನ್ನು ಕಳವಳಕ್ಕೀಡು ಮಾಡಿದೆ. ಇದರಲ್ಲಿ ಯಾರ ಕೈವಾಡ ಇರಬಹುದು ಎಂಬ ಗುಮಾನಿಗಳು ಸಾಕಷ್ಟು ಹರಿದಾಡುತ್ತಿವೆ.
ಈ ಚಿತ್ರಕ್ಕೆ ಸಂಬಂಧಿಸಿದ ನಕಲಿ ಸಿಡಿಗಳು ವಿಜಯವಾಡದಲ್ಲಿ ಕಾಳಸಂತೆಯಲ್ಲಿ ಬಿಕರಿಯಾಗುತ್ತಿವೆ. ತೆಲುಗು ಚಿತ್ರರಂಗದ ಇತಿಹಾಸದಲ್ಲೇ ಇದೊಂದು ಕಪ್ಪು ಚುಕ್ಕೆ. ಈ ದಿನವನ್ನು ತೆಲುಗು ಚಿತ್ರೋದ್ಯಮ ಬ್ಲ್ಯಾಕ್ ಡೇ ಆಗಿ ಘೋಷಿಸಿದೆ. ನಕಲಿ ಸಿಡಿ ಹಾವಳಿಯನ್ನು ತಡೆಯಲು ಅಭಿಮಾನಿಗಳು ಕೈಜೋಡಿಸಬೇಕು ಎಂದು ಕರೆ ನೀಡಿದ್ದಾರೆ ಚಿತ್ರದ ನಿರ್ಮಾಪಕರು.
ಅತ್ತಾರಿಂಟಿಕಿ ದಾರೇದಿ ನಕಲಿ ಸಿಡಿಗಳು ದಾಂಗುಡಿ
'ಅತ್ತಾರಿಂಟಿಕಿ ದಾರೇದಿ' ಚಿತ್ರದ ನಕಲಿ ಸಿಡಿಗಳು ಹಾಗೂ ಇಂಟರ್ನೆಟ್ ಲಿಂಕ್ ಸಿಕ್ಕಿದರೆ ದಯವಿಟ್ಟು ಇವರಿಗೆ ಇ-ಮೇಲ್ ಕಳುಹಿಸಲು ಕೋರಲಾಗಿದೆ.
ಅಭಿಮಾನಿಗಳನ್ನು ವಿನಂತಿಸಿಕೊಂಡ ರಾಜಮೌಳಿ
ಈ ಬಗ್ಗೆ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಖೇದ ವ್ಯಕ್ತಪಡಿಸಿದ್ದು, ನಕಲಿ ಸಿಡಿ, ಅಂತರ್ಜಾಲ ಕೊಂಡಿಗಳನ್ನು ಮೇಲಿನ ಇ-ಮೇಲ್ ಗೆ ಕಳುಹಿಸಿ ಎಂದು ವಿನಂತಿಸಿಕೊಂಡಿದ್ದಾರೆ.
ತ್ರಿವಿಕ್ರಮ್ ಶ್ರೀನಿವಾಸ್ ಆಕ್ಷನ್ ಕಟ್ ಹೇಳಿರುವ ಚಿತ್ರ
ತ್ರಿವಿಕ್ರಮ್ ಶ್ರೀನಿವಾಸ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಬಗ್ಗೆ ಆಂಧ್ರದಲ್ಲಿ ಭಾರಿ ನಿರೀಕ್ಷೆಗಳಿವೆ.
ತೆಲುಗು ಚಿತ್ರೋದ್ಯಮದಲ್ಲಿ ಹೊಸ ಆತಂಕ
ಈಗ ಚಿತ್ರದ ನಕಲಿ ಸಿಡಿಗಳು ಬಂದಿರುವುದು ತೆಲುಗು ಚಿತ್ರೋದ್ಯಮದಲ್ಲಿ ಹೊಸ ಆತಂಕ ಸೃಷ್ಟಿಸಿದೆ.
ರಿಲಯನ್ಸ್ ಎಂಟರ್ ಟೈನ್ ಮೆಂಟ್ ನಿರ್ಮಾಣ
ರಿಲಯನ್ಸ್ ಎಂಟರ್ ಟೈನ್ ಮೆಂಟ್ ಹಾಗೂ ಬಿವಿಎಸ್ಎನ್ ಪ್ರಸಾದ್ ಜಂಟಿಯಾಗಿ ನಿರ್ಮಿಸಿರುವ ಚಿತ್ರ ಇದಾಗಿದೆ.
ಪವನ್ ಜೊತೆ ಇಬ್ಬರು ನಾಯಕಿಯರು
ಪವನ್ ಕಲ್ಯಾಣ್ ಜೊತೆ ಸಮಂತಾ, ಪ್ರಣೀತಾ ನಾಯಕಿಯರು.
ಚಿತ್ರದಲ್ಲಿ ಹೀರೋಯಿನ್ ನಮ್ಮ ಪ್ರಣೀತಾ
ಪವನ್ ಕಲ್ಯಾಣ್ ಅವರಿಗೆ ಅತ್ತೆಯಾಗಿ ನದಿಯಾ ಅಭಿನಯಿಸಿದ್ದಾರೆ. ಚಿತ್ರದಲ್ಲಿ ನಮ್ಮ ಕನ್ನಡದ ಬೆಡಗಿ ಪ್ರಣೀತಾ ಸಹ ನಾಯಕಿ ಎಂಬುದು ವಿಶೇಷ.
ಅಕ್ಟೋಬರ್ 9ರಂದು ಚಿತ್ರ ತೆರೆಗೆ
ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನದ ಚಿತ್ರದ ಆಡಿಯೋಗೆ ಈಗಾಗಲೆ ತೆಲುಗು ಪ್ರೇಕ್ಷಕರು ತಲೆದೂಗಿದ್ದಾರೆ. ಈ ಚಿತ್ರ ಅಕ್ಟೋಬರ್ 9ರಂದು ತೆರೆಗೆ ಅಪ್ಪಳಿಸುತ್ತಿದೆ.