Don't Miss!
- News Yaduveer Wadiyar: ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ಗೆ ಶಾಕ್ ಕೊಟ್ಟ ಒಕ್ಕಲಿಗರು!
- Automobiles ದೊಡ್ಡ ಸಿಗ್ನಲ್ ಕೊಟ್ಟ ಫೋರ್ಡ್: ಭಾರತಕ್ಕೆ ಬರುತ್ತಿದೆ ಹೊಸ ಎಸ್ಯುವಿ... ಟಾಟಾಗೆ ಆತಂಕ ಶುರು
- Finance Gold rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬ್ರೇಕಿಂಗ್ ನ್ಯೂಸ್; ಕಟ್ಟಾ ಪಾತ್ರದಲ್ಲಿ ರಂಗಾಯಣ ರಘು
ರಂಗಾಯಣ ರಘು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಆಗಿದ್ದಾರಾ? ಈ ಪ್ರಶ್ನೆಗೆ ಹೌದೆನ್ನುತ್ತಿವೆ ಬ್ರೇಕಿಂಗ್ ನ್ಯೂಸ್ ಸುದ್ದಿಮೂಲಗಳು. ಬ್ರೇಕಿಂಗ್ ನ್ಯೂಸ್ ಚಿತ್ರದಲ್ಲಿ ರಂಗಾಯಣ ರಘು ಕಟ್ಟಾರನ್ನು ಹೋಲುವ ಪಾತ್ರ ಮಾಡಿದ್ದಾರಂತೆ. ಅವರ ಪೋಷಾಕು, ವೇಷ-ಭೂಷಣ ಎಲ್ಲವೂ ಥೇಟ್ ಕಟ್ಟಾರಂತೆಯೇ ಇದೆ. ರಂಗಾಯಣ ರಘು ಈ ಮೊದಲು 'ಧಮ್' ಹಾಗೂ 'ಕಳ್ಳರ ಸಂತೆ'ಯಲ್ಲೂ ಕೂಡ ರಾಜಕಾರಣಿ ಪಾತ್ರ ಮಾಡಿದ್ದಾರೆ. ಆದರೆ ಅದು ಯಾರನ್ನೂ ಹೋಲುತ್ತಿರಲಿಲ್ಲ.
"ನನ್ನ
ಚಿತ್ರದಲ್ಲೊಬ್ಬ
ಭ್ರಷ್ಟ
ರಾಜಕಾರಣಿಯಿದ್ದಾರೆ.
ಆ
ಪಾತ್ರವನ್ನು
ರಂಗಾಯಣ
ರಘು
ಪೋಷಿಸಿದ್ದಾರೆ.
ಅದು
ಕೇವಲ
ಒಬ್ಬ
ರಾಜಕಾರಣಿ
ಪಾತ್ರ.
ಅದಕ್ಕೆ
ಕಟ್ಟಾ
ಹೋಲಿಕೆಯಿದ್ದರೆ
ಅದು
ಆಕಸ್ಮಿಕ"
ಎಂದು
ಆ
ಚಿತ್ರದ
ನಿರ್ದೇಶಕ
ನಾಗತಿಹಳ್ಳಿ
ಹೇಳಿದ್ದಾರೆ.
ಆದರೆ
ಚಿತ್ರತಂಡದ
ಹಲವರ
ಅಭಿಪ್ರಾಯದ
ಪ್ರಕಾರ
ಅದು
ಕಟ್ಟಾರನ್ನು
ಹೋಲುವ
ಪಾತ್ರ
ಎಂಬುದು
ಸುಳ್ಳಲ್ಲ.
ಅಂದಹಾಗೆ,
ಈ
ಚಿತ್ರದ
ನಾಯಕ
ಅಜಯ್
ರಾವ್
ಹಾಗೂ
ನಾಯಕಿ
ರಾಧಿಕಾ
ಪಂಡಿತ್.
ಅಷ್ಟೇ ಅಲ್ಲ, ಬ್ರೇಕಿಂಗ್ ನ್ಯೂಸ್ ನಲ್ಲಿ ಅನಂತ್ ನಾಗ್ ಪಾತ್ರ ಯೋಕಾಯುಕ್ತರದು. ಅದೂ ಕೂಡ ಮಾಜಿ ಲೋಕಾಯುಕ್ತ ಸಂತೋಷ ಹೆಗಡೆಯವರನ್ನು ಹೋಲುತ್ತದೆಯಂತೆ. ನಾಗತಿಹಳ್ಳಿ ಹೇಳಿಕೊಂಡಂತೆ ಸಂಪೂರ್ಣ ವಿಡಂಬನಾತ್ಮಕ ಚಿತ್ರವಾದ ಬ್ರೇಕಿಂಗ್ ನ್ಯೂಸ್ ನಲ್ಲಿ ವರ್ತಮಾನದ ಘಟನೆಗಳಾದ ಭೂಕಬಳಿಕೆ, ಜೈಲುವಾಸ ಮುಂತಾದವುಗಳ ಸುತ್ತಲೇ ಕಥೆ ಸುತ್ತುತ್ತದೆಯಂತೆ. ಒಟ್ಟಿನಲ್ಲಿ ನಿಜವಾಗಿಯೂ ಚಿತ್ರದಲ್ಲೇನಿದೆ ಎಂದು ತಿಳಿಯಲು ಮೇ 18, 2012ರವೆರೆಗೆ ಕಾಯಲೇಬೇಕು. (ಒನ್ ಇಂಡಿಯಾ ಕನ್ನಡ)