Don't Miss!
- Automobiles ಹ್ಯುಂಡೈ ವೆರ್ನಾ ಕಾರಿಗೆ ಭಾರೀ ಡಿಸ್ಕೌಂಟ್: ರಾಶಿ ಫೀಚರ್ನ ಕಾರಿಗೆ ಇಷ್ಟು ಆಫರ್ ಯಾಕೆಂದ ನೆಟ್ಟಿಗರು!
- News Rain Death: ಬೀದರ್ನಲ್ಲಿ ಭರ್ಜರಿ ಮಳೆ, ಸಿಡಿಲು ಬಡಿದು ಕಾರ್ಮಿಕ ಸಾವು
- Finance ಎವರೆಸ್ಟ್ ಮಾತ್ರವಲ್ಲ ಎಂಡಿಎಚ್ನ ಉತ್ಪನ್ನದಲ್ಲೂ ಕೀಟನಾಟಕ ಪತ್ತೆ
- Sports ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಕ್ರಮಾಂಕ ನೀಡಿದ ಆರೋನ್ ಫಿಂಚ್
- Lifestyle ರಾಜ್ಯದಲ್ಲಿ ಮುಂದಿನ 1 ವಾರ ಹವಾಮಾನ ಹೇಗಿರಲಿದೆ? ಎಲ್ಲೆಲ್ಲಿ ಮಳೆಯಾಗಲಿದೆ?
- Technology ಲಾವಾ ಅಗ್ನಿ 2 5G ಮೊಬೈಲ್ ಬೆಲೆಯಲ್ಲಿ ದಿಢೀರ್ ಇಳಿಕೆ; ಗ್ರಾಹಕರಿಗೆ ಖುಷಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ ಜತೆ ಬಳುಕುವ ಬಳ್ಳಿ ಸೋನಮ್ ಕಪೂರ್
ಅದೇನೆ ಇರಲಿ, ನಿರ್ದೇಶಕ ಮಹೇಶ್ ಸುಖಧರೆ ಈಗ ಹೇಳುತ್ತಿರುವ ಪ್ರಕಾರ, ಸೋನಮ್ ಬಂದೇ ಬರುತ್ತಾರೆ. ಆ ಕಾಲ ಸದ್ಯದಲ್ಲೇ ಕೂಡಿ ಬರಲಿದೆ. ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ನಾಯಕರು ಎಂಬುದು ಇನ್ನೊಂದು ವಿಶೇಷವೇ ಸರಿ. ಹಾಗಿದ್ದರೆ ಚಿತ್ರ ಯಾವಾಗ ಪ್ರಾರಂಭ? ಅದಕ್ಕೆ ಸದ್ಯಕ್ಕೆ ಮಹೇಶ್ ಸುಖಧರೆ ಬಳಿ ಉತ್ತರವಿಲ್ಲ. ಕಾರಣ, ಅವರಿಷ್ಟದ ನಾಯಕ-ನಾಯಕಿ ಇಬ್ಬರೂ ಬಿಜಿಯಿರುವ ಕಾರಣ ಸ್ವಲ್ಪ ಲೇಟಾಗಬಹುದು ಅಷ್ಟೇ.
ಅಂದಹಾಗೆ, ದರ್ಶನ್ ಬಹುನಿರೀಕ್ಷಿತ ಚಿತ್ರ 'ಸಂಗೊಳ್ಳಿ ರಾಯಣ್ಣ' ಆಡಿಯೋ ಬಿಡುಗಡೆ ಸಮಾರಂಭ ಮಗಿಸಿ ಬಿಡುಗಡೆಗೆ ಸಜ್ಜಾಗಿದೆ. ದರ್ಶನ್ ಹಾಗೂ ನಿಖಿತಾ ಜೋಡಿಯ ಈ ಚಿತ್ರದಲ್ಲಿ ಹಿರಿಯ ನಟಿ ಜಯಪ್ರದಾ ಕೂಡ ಪ್ರಮುಖ ಪಾತ್ರ ಪೋಷಿಸಿದ್ದಾರೆ. ಬರೋಬ್ಬರಿ ಮೂವತ್ತು ಕೋಟಿ ರು. ಬಜೆಟ್ ಚಿತ್ರವಾಗಿರುವ ಇಉ ಕನ್ನಡದ ಮಟ್ಟಿಗೆ ದಾಖಲೆ ನಿರ್ಮಿಸಲಿದೆ.
ಒಟ್ಟಿನಲ್ಲಿ ದರ್ಶನ್ 'ಬುಲ್ ಬುಲ್' ನಂತರ ಬರಲಿರುವ 'ಭೈರವ' ಚಿತ್ರಕ್ಕೆ ಸೋನಮ್ ಕಪೂರ್ ಬರಲಿದ್ದಾರೆ ಎಂಬ ಮಾತು ನಿರ್ದೇಶಕ ಮಹೇಶ್ ಸುಖಧರೆ ಬಾಯಿಂದ ಮತ್ತೆ ಬಂದಿದೆ. ಆದರೆ ಸೋನಮ್ ಬಾಯಿಂದ 'ಓಕೆ' ಪದ ಬಂದಿಲ್ಲ. ಹೀಗಿರುವಾಗ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿರುವ ಕನ್ನಡದ ಪಡ್ಡೆಗಳಿಗೆ ಸೋನಮ್ ಬಂದರೆ ಖುಷಿ. ಇಲ್ಲದಿದ್ದರೆ... ಕಾದಿರುವ ಖುಷಿಯಷ್ಟೇ ಗತಿ! (ಒನ್ ಇಂಡಿಯಾ ಕನ್ನಡ)