Don't Miss!
- Finance ಎರಡು ದಿನ ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ, 144 ಸೆಕ್ಷನ್ ಜಾರಿ, ದಿನಾಂಕ ವಿವರ
- Technology ವಿವೋ T3x 5G ಫೋನಿನ ಫಸ್ಟ್ ಸೇಲ್ ಯಾವಾಗ?..ಆಫರ್ ಬೆಲೆ ಎಷ್ಟು?
- News ₹8 Lakh Gold: ಆಟೋದಲ್ಲೇ ಬಿಟ್ಟಿದ್ದ 8 ಲಕ್ಷ ರೂ. ಚಿನ್ನಾಭರಣವಿದ್ದ ಬ್ಯಾಗ್ ಮರಳಿ ಸಿಕ್ಕಿದ್ದೆ ರೋಚಕ
- Lifestyle ಮೊದಲ ಯತ್ನದಲ್ಲೇ ಯುಪಿಎಸ್ಸಿ ಪಾಸ್..! ಸ್ಫೂರ್ತಿಯಾಗಿದ್ದು ವಿರಾಟ್..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Automobiles ವಂದೇ ಭಾರತ್ ಸ್ಲೀಪರ್, ಸೂಪರ್ ಆಪ್.. ರೈಲ್ವೆಯಿಂದ ಬಿಗ್ ಪ್ಲ್ಯಾನ್: ನೀವು ತಿಳಿಯಬೇಕಾದ ವಿಚಾರಗಳಿವು!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕಿರಾತಕ' ನಿರ್ದೇಶಕ ಪ್ರದೀಪ್ ರಾಜ್ ಕಿರಿಕ್ ಸುದ್ದಿ
ರಾಕಿಂಗ್ ಸ್ಟಾರ್ ಯಶ್ ಗೆ ಮೊದಲಿಗೆ ಒಂದು ಭರ್ಜರಿ ಯಶಸ್ವಿ ಸಿನಿಮಾ ಕೊಟ್ಟ ನಿರ್ದೇಶಕ ಅಂದ್ರೆ ಪ್ರದೀಪ್ ರಾಜ್. ಹಾಗಂತ ಅದೇನು ಪ್ರದೀಪ್ ರಾಜ್ ಮಾಡಿದ ಅದ್ಭುತ ಪ್ರಯತ್ನ ಅಲ್ಲ, ಯಾಕಂದ್ರೆ ಅದು ತಮಿಳಿನ ರೀಮೇಕ್ ಚಿತ್ರ.
ಅದಾದ ನಂತರ ದುನಿಯಾ ವಿಜಯ್ ಗೆ 'ರಜನಿಕಾಂತ' ಮಾಡಿ ಸೋತ ಪ್ರದೀಪ್ ರಾಜ್ ಬಳಿಕ 'ಲೂಸಿಯಾ' ನಾಯಕ ನೀನಾಸಂ ಸತೀಶ್ ಗೆ ತಮಿಳಿಂದ ಮತ್ತೊಂದು ರೀಮೇಕ್ ಚಿತ್ರ ತಂದು 'ಅಂಜಂದ ಗಂಡು' ಅಂತ ಟೈಟಲ್ ಇಟ್ಟು ಡೈರೆಕ್ಟ್ ಮಾಡಿದ್ರು ಅದೂ ಕೂಡ ಯಶಸ್ಸು ಕಾಣಲಿಲ್ಲ.
ಸದ್ಯ 'ಬೆಂಗಳೂರು 560023' ಅನ್ನೋ ಕ್ರಿಕೆಟ್ ಗೆ ಸಂಬಂಧಪಟ್ಟ ಚಿತ್ರವನ್ನ ತೆರೆಗೆ ತರೋಕೆ ತಯಾರಿ ಮಾಡಿಕೊಳ್ತಿದ್ದಾರೆ. ಚಿತ್ರ ಕಳೆದ ವರ್ಷವೇ ಮುಗಿದ್ರೂ ರಿಲೀಸಾಗೋಕೆ ತಿಣುಕಾಡ್ತಿರೋದು ನಿರ್ದೇಶಕ ಮತ್ತು ನಿರ್ಮಾಪಕರಾಗಿರೋ ಪ್ರದೀಪ್ ರಾಜ್ ಬ್ರದರ್ಸ್ ಮಾಡಿರೋ 'ಕಿರಾತಕ' ಕೆಲಸದಿಂದ ಅಂತಿದೆ ಗಾಸಿಪ್ ಗಾಳಿ.
ಚಿತ್ರಕ್ಕಾಗಿ ಕೆಲಸ ಮಾಡಿದ ಹಲವು ಜನರಿಗೆ ಕೊಡೋ ಕಾಸನ್ನ ಕೊಡದೇ ಕಾಡಿಸ್ತಿರೋ ನಿರ್ಮಾಪಕ ಕಮ್ ನಿರ್ದೇಶಕರು ಸಿನಿಮಾ ರಿಲೀಸ್ ಮಾಡೋಕೂ ಕಾಸಿಲ್ಲದೆ. ಹೊರಬಂದಿರೋ ಹಾಡುಗಳೂ ಹಿಟ್ಟಾಗದೇ ಒದ್ದಾಡ್ತಿದ್ದಾರೆ ಅಂತಿದೆ ಗಲ್ಲಿಮೂಲ.
ಸಿನಿಮಾ ರಿಲೀಸ್ ಮಾಡ್ಲಿ ಬಿಡ್ಲಿ ನಮ್ ಕಾಸು ನಮ್ಗೆ ಬರ್ಲಿ ಅಂತಿದ್ದಾರೆ ಕೆಲಸ ಮಾಡಿದವ್ರು. ಆದ್ರೆ ಇದೆಲ್ಲಾ ನಿಜಾನಾ ಅಂತ ಸ್ವತಃ ನಿರ್ಮಾಪಕ ಕಮ್ ನಿರ್ದೇಶಕ 'ಕಿರಾತಕ' ಪ್ರದೀಪ್ ರಾಜ್ ಅವರೇ ಹೇಳಬೇಕು.