Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮರಾಠಿ ರೀಮೇಕ್ ಗೆ ಹೆಗಲು ಕೊಡ್ತಾರಾ ಕಲಾ ಸಾಮ್ರಾಟ್.?
ಮರಾಠಿಯ ಬ್ಲಾಕ್ ಬಸ್ಟರ್ ಹಿಟ್ 'ಸೈರತ್' (ಸೈರಟ್) ಸಿನಿಮಾವನ್ನು ಕನ್ನಡಕ್ಕೆ ತರುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈ ಮೊದಲು ಚಿತ್ರಕ್ಕೆ ನಿರ್ದೇಶನ ಯಾರು ಮಾಡಲಿದ್ದಾರೆ ಅನ್ನೋ ಪ್ರಶ್ನೆಗೆ ಉತ್ತರ ದೊರೆತಿರಲಿಲ್ಲ.
ಇದೀಗ ಚಿತ್ರದ ನಿರ್ದೇಶಕರಾಗಿ ಎಸ್ ನಾರಾಯಣ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮೂಲಕ ಅಂತಿಮ ತೆರೆ ಎಳೆಯಲಾಗಿದೆ. ಸೈರತ್ ರೀಮೇಕ್ ಹಕ್ಕು ಖರೀದಿ ಮಾಡಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಇದೀಗ ಚಿತ್ರಕ್ಕೆ ನಿರ್ದೇಶಕರಾಗಿ ಎಸ್ ನಾರಾಯಣ್ ಅವರನ್ನು ಆಯ್ಕೆ ಮಾಡಿದ್ದಾರೆ.[ಮರಾಠಿ ಚಿತ್ರದ ಮೇಲೆ ರಾಕ್ ಲೈನ್ ವೆಂಕಟೇಶ್ ಕಣ್ಣು ಬಿದ್ದದ್ದು ಹೇಗೆ.?]
'ರೀಮೇಕ್ ಸಿನಿಮಾಗಳನ್ನು ನಿಭಾಯಿಸುವುದಕ್ಕೆ ಎಸ್ ನಾರಾಯಣ್ ಅವರು ಸಮರ್ಥ ವ್ಯಕ್ತಿ. ಈ ಸಿನಿಮಾದ ಬಹುತೇಕ ತಾರಾಗಣ ಹೊಸಬರಾಗಿರುವುದರಿಂದ ಎಸ್ ನಾರಾಯಣ್ ಹೊಸ ನಟರಿಂದ ಒಳ್ಳೆಯ ನಟನೆಯನ್ನು ಸಮರ್ಥವಾಗಿ ಹೊರತೆಗೆಯಬಲ್ಲರು. ಮಾತ್ರವಲ್ಲದೇ ಅವರು ಹೊಸಬರನ್ನು ಬಹಳ ತಾಳ್ಮೆಯಿಂದ ಕಾಣುತ್ತಾರೆ' ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ತಿಳಿಸಿದ್ದಾರೆ.[ಮರಾಠಿ 'ಸೈರಟ್' ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ ರಾಕ್ ಲೈನ್]
ಅಂದಹಾಗೆ ಇನ್ನೂ ಹೆಸರಿಡದ ಈ ಚಿತ್ರದ ಪಾತ್ರವರ್ಗಕ್ಕೆ ಆಡಿಶನ್ ನಡೆಯುತ್ತಿದ್ದು, ನಾಯಕ ನಟನಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಮಗ ವಿಕ್ರಂ ಅವರ ಹೆಸರು ಅಲ್ಲಲ್ಲಿ ಕೇಳಿಬರುತ್ತಿದೆ. ರಾಕ್ ಲೈನ್ ಅವರ ನಿರ್ಮಾಣದಲ್ಲಿ ತೆಲುಗಿನಲ್ಲಿ ಮೂಲ ಮರಾಠಿ ನಿರ್ದೇಶಕ ನಾಗರಾಜ್ ಮಂಜುಳೆ ಅವರು ನಿರ್ದೇಶನ ಮಾಡಲಿದ್ದಾರೆ.
ರಿಂಕು ರಾಜಗುರು, ಆಕಾಶ್ ತೋಸರ್, ತಾನಾಜಿ ಮುಂತಾದವರು ಮಿಂಚಿದ್ದ ಮರಾಠಿ 'ಸೈರತ್' ಸಿನಿಮಾ ಕೋಟಿ ಕೋಟಿ ಬಾಚುವ ಮೂಲಕ ಮರಾಠಿ ಚಿತ್ರರಂಗದಲ್ಲಿ ಸಂಚಲನ ಹುಟ್ಟುಹಾಕಿತ್ತು.