Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯೋಗರಾಜ್ ಭಟ್ರ ಸಾಲುಗಳೇ ರಿಜೆಕ್ಟ್ ಆದಾಗ.!
ನಿರ್ದೇಶನಕ್ಕಿಂತ ಗೀತ ಸಾಹಿತ್ಯದಲ್ಲೇ ಯೋಗರಾಜ್ ಭಟ್ ಫೇಮಸ್. 'ಕತ್ತಲಲ್ಲಿ ಕರಡಿಗೆ ಜಾಮೂನು' ತಿನ್ನಿಸುವ ಭಟ್ರು 'ಹಳೆ ಪಾತ್ರೆ, ಹಳೆ ಕಬ್ಣ'ದಂತಹ 'ಎಬಡ ತಬಡ' ಲಿರಿಕ್ಸ್ ಬರೆಯೋದ್ರಲ್ಲಿ ಎತ್ತಿದ ಕೈ.
ಈ ಕಾರಣಕ್ಕೆ ಭಟ್ರ ಪೆನ್ನಿಗೆ ಡಿಮ್ಯಾಂಡ್ ಜಾಸ್ತಿ. ಸಿನಿಮಾದಲ್ಲಿ ಒಂದು ಹಾಡನ್ನಾದರೂ ಭಟ್ರ ಕೈಲಿ ಬರೆಯಿಸಲೇಬೇಕು ಅಂತ ಎಷ್ಟೋ ನಿರ್ಮಾಪಕರು ಮತ್ತು ನಿರ್ದೇಶಕರು ಯೋಗರಾಜ್ ಭಟ್ ಬೆನ್ನ ಹಿಂದೆ ಬಿದ್ದಿದ್ದಾರೆ. ಅಂಥದ್ರಲ್ಲಿ ಇಲ್ಲೊಬ್ಬರು ಭಟ್ರ ಹಾಡನ್ನೇ ರಿಜೆಕ್ಟ್ ಮಾಡಿದ್ದಾರೆ.!
ಯೆಸ್...ದುನಿಯಾ ವಿಜಿ ಅಭಿನಯಿಸುತ್ತಿರುವ 'RX ಸೂರಿ' ಚಿತ್ರದಲ್ಲಿ ಯೋಗರಾಜ್ ಭಟ್ ಬರೆದ ಸಾಹಿತ್ಯ ತಿರಸ್ಕೃತವಾಗಿದೆ. 'RX ಸೂರಿ' ಚಿತ್ರದ ಟೈಟಲ್ ಸಾಂಗ್ ನ ಭಟ್ರು ಕೊಂಚ ಡಿಫರೆಂಟ್ ಆಗಿ ಬರೆದಿದ್ದರು. [ಆಸ್ತ್ರದುಲಯಕೋ ಮಿನಸೋಮಾ ಕಾಯಮಿಕ ಮುನಾಸೋ!]
ಅಷ್ಟು ಡಿಫರೆಂಟ್ ಆಗಿರುವ ಸಾಹಿತ್ಯ ನಿರ್ದೇಶಕ ಶ್ರೀ ಜೈಗೆ ಹಿಡಿಸಲಿಲ್ಲವೇನೋ. ಅದಕ್ಕೆ ಆ ಹಾಡನ್ನ ರಿಜೆಕ್ಟ್ ಮಾಡಿ ವಿ.ನಾಗೇಂದ್ರ ಪ್ರಸಾದ್ ಅವರ ಕೈಲಿ ಹೊಸ ಹಾಡು ಬರೆಸಿದರಂತೆ.
ಎಲ್ಲೆಲ್ಲೂ ಭಟ್ಟರ ಪದಗಳೇ ಮೊಳಗುತ್ತಿರುವ ಈಗಿನ ಕಾಲದಲ್ಲಿ ಭಟ್ಟರ ಸಾಲು ಬೇಡ ಅಂದವರಲ್ಲಿ ಬಹುಶಃ ಮೊದಲಿಗರು ಇವರೇ ಇರಬೇಕು.!! ಭಟ್ರ ಪದಪುಂಜ ಇಲ್ಲದೆ 'RX ಸೂರಿ' ಆಡಿಯೋ ಕ್ಲಿಕ್ ಆದ್ರೆ, ಟ್ರೆಂಡ್ ಚೇಂಜ್ ಆಗಬಹುದಾ..??