Don't Miss!
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- News ಮತ ಹಾಕದಿದ್ದರೆ ನನ್ನ ಅಂತ್ಯಸಂಸ್ಕಾರಕ್ಕಾದರೂ ಬನ್ನಿ. ಮಲ್ಲಿಕಾರ್ಜುನ್ ಖರ್ಗೆ ಭಾವನಾತ್ಮಕ ಮಾತು
- Sports 2024ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಒಲಿಂಪಿಕ್ ಐಕಾನ್ ಉಸೇನ್ ಬೋಲ್ಟ್ ನೇಮಕ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರ್ ಚಂದ್ರು ಚಿತ್ರದಲ್ಲಿ 'ರಾಜ್ ಕುಮಾರ್ ಫ್ಯಾನ್' ಯಾರು ಗೊತ್ತಾ?
ಸ್ಟಾರ್ ನಿರ್ದೇಶಕ ಆರ್ ಚಂದ್ರು, 'ಡಾ.ರಾಜ್ ಕುಮಾರ್ ಅಭಿಮಾನಿ' ಕುರಿತು ಒಂದು ಹೊಸ ಸಿನಿಮಾ ಮಾಡಲಿದ್ದಾರೆ, ಈ ಚಿತ್ರದಲ್ಲಿ ಕನ್ನಡದ ಸ್ಟಾರ್ ನಟನೊಬ್ಬ 'ಡಾ.ರಾಜ್ ಅಭಿಮಾನಿ'ಯಾಗಿ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿಯನ್ನ ನಾವೇ ಫಿಲ್ಮಿ ಬೀಟ್ ನಲ್ಲಿ ನೀಡಿದ್ವಿ. ಈಗ ಆ ಚಿತ್ರಕ್ಕೆ ನಾಯಕನ ಹೆಸರು ಅಂತಿಮವಾಗಿದೆಯಂತೆ.['ಡಾ.ರಾಜ್ ಕುಮಾರ್ ಅಭಿಮಾನಿ' ಕುರಿತು ಆರ್ ಚಂದ್ರು ಹೊಸ ಸಿನಿಮಾ]
ಹೌದು, 'ಲಕ್ಷ್ಮಣ' ಚಿತ್ರದ ಯಶಸ್ಸಿನಲ್ಲಿದ್ದ ಆರ್ ಚಂದ್ರು, ಈಗ 'ಕನಕ' ಎಂಬ ಹೊಸ ಚಿತ್ರದ ತಯಾರಿಯಲ್ಲಿದ್ದಾರೆ. ಮೂಲಗಳ ಪ್ರಕಾರ ಈ ಚಿತ್ರಕ್ಕೆ ನಾಯಕನಾಗಿ ದುನಿಯಾ ವಿಜಯ್ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೇ, ಇಷ್ಟೋತ್ತಿಗಾಗಲೇ ಈ ಚಿತ್ರವನ್ನ ಶುರು ಮಾಡಬೇಕಿತ್ತಂತೆ. ಆದ್ರೆ, ಅಷ್ಟರಲ್ಲಿ 'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ದುರಂತ ನಡೆದುಹೋಯಿತು.['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]
ಫಿಲ್ಮ್ ಚೇಂಬರ್ ತೀರ್ಮಾನದ ಪ್ರಕಾರ ಮುಂದಿನ ಆದೇಶದವರೆಗೂ ದುನಿಯಾ ವಿಜಯ್ ಯಾವುದೇ ಚಿತ್ರದಲ್ಲಿ ಅಭಿನಯಿಸುವಂತಿಲ್ಲ. ಅದೇ ಕಾರಣಕ್ಕೆ ಆರ್ ಚಂದ್ರು ಅವರು ಈ ಚಿತ್ರವನ್ನ ಇನ್ನು ಶುರು ಮಾಡುವುದಾಗಲಿ, ಅಥವಾ ನಾಯಕನ ಹೆಸರನ್ನ ಘೋಷಣೆ ಮಾಡುವುದಾಗಲಿ ಮಾಡಿಲ್ಲವಂತೆ.[ದುನಿಯಾ ವಿಜಯ್, ನಾಗಶೇಖರ್, ರವಿವರ್ಮಗೆ ತಾತ್ಕಾಲಿಕ ನಿಷೇಧ]
ಅಂದ್ಹಾಗೆ, 'ಕನಕ' ಆರ್ ಚಂದ್ರು ಅವರ ಹೋಮ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಸಿನಿಮಾ. ಅಲ್ಲದೇ, 'ಕನಕ' ಚಿತ್ರಕ್ಕೆ 'ರಾಜ್ ಕುಮಾರ್ ಫ್ಯಾನ್' ಎಂಬ ಅಡಿ ಬರಹವಿದೆ. ಇದೊಂದು ಒಬ್ಬ ಆಟೋ ಡ್ರೈವರ್ ಕಥೆಯಂತೆ. ಡಿಗ್ರಿ ಮಾಡದ ಈ ವ್ಯಕ್ತಿ ಅಪ್ಪಟ ಡಾ.ರಾಜ್ ಕುಮಾರ್ ಅವರ ಅಭಿಮಾನಿಯಾಗಿರುತ್ತಾರೆ. ಇಂತಹ ವ್ಯಕ್ತಿಯದೊಂದು ಲವ್ ಸ್ಟೋರಿಯ, ಜೊತೆಗೆ ಕೆಲವು ಇಂಟ್ರಸ್ಟಿಂಗ್ ವಿಷಯಗಳನ್ನಿಟ್ಟು ಸಿನಿಮಾ ರೂಪ ಕೊಡುತ್ತಿದ್ದಾರೆ ಆರ್ ಚಂದ್ರು.