Don't Miss!
- News China Floods: ಚೀನಾದಲ್ಲಿ ಭೀಕರ ಪ್ರವಾಹ- ಮಳೆಗೆ ಬೆದರಿದ ಡ್ರ್ಯಾಗನ್
- Finance ಬೆಂಗಳೂರಿನಲ್ಲಿ ಈ ಜಾಗದಲ್ಲಿ ಸೈಟು ಖರೀದಿಸಬೇಡಿ: BDAಯಿಂದ 279 ಅಕ್ರಮ ಬಡಾವಣೆ ಪತ್ತೆ
- Technology Google Chrome: ಗೂಗಲ್ ಕ್ರೋಮ್ ಬಳಕೆದಾರರು ಹ್ಯಾಕಿಂಗ್ ಅಪಾಯದಲ್ಲಿ! ಸುರಕ್ಷಿತವಾಗಿರೋದು ಹೇಗೆ?
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರಿಂಗ್ ವಿರುದ್ಧ ಕೆಂಡಕಾರಿದ ಮೊಹಮ್ಮದ್ ಕೈಫ್!
- Lifestyle ಮನೆಯಲ್ಲಿ ಘಮ ಘಮಿಸುವ ಮಲ್ಲಿಗೆ ಗಿಡ ಬೆಳೆಸೋದು ಹೇಗೆ..? ಇಲ್ಲಿದೆ ಮಾಹಿತಿ
- Automobiles ಹ್ಯುಂಡೈ ವೆರ್ನಾ ಕಾರಿಗೆ ಭಾರೀ ಡಿಸ್ಕೌಂಟ್: ರಾಶಿ ಫೀಚರ್ನ ಕಾರಿಗೆ ಇಷ್ಟು ಆಫರ್ ಯಾಕೆಂದ ನೆಟ್ಟಿಗರು!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಾಹುಬಲಿ'ಯನ್ನ ಕಟ್ಟಪ್ಪ ಯಾಕೆ ಕೊಂದ? ಉಪ್ಪಿ ಬಿಚ್ಚಿಟ್ಟ ರಹಸ್ಯ
ರಿಯಲ್ ಸ್ಟಾರ್ ಉಪೇಂದ್ರ ಅವರ 'ಉಪ್ಪಿಟ್ಟು' ಸವಿಯನ್ನ ನೀವು ಸವಿದಿರಬಹುದು. ಹಾಗಿದ್ಮೇಲೆ 'ನಾನು-ನೀನು-ನೀನು-ನಾನು' ಅಂತ ತಲೆಗೆ ಹುಳ ಬಿಟ್ಟಿರುವ ಉಪೇಂದ್ರ ಅವರ ಬಗ್ಗೆ ನಾವು ಹೆಚ್ಚು ಹೇಳಬೇಕಾಗಿಲ್ಲ ಅಲ್ವಾ?
'ಉಪ್ಪಿ-2' ಕ್ಲೈಮ್ಯಾಕ್ಸ್ ನಿಮ್ಮ ನಿಮ್ಮ ಯೋಚನೆಗೆ ಬಿಟ್ಟಿದ್ದು. ಆದ್ರೆ, 'ಬಾಹುಬಲಿ' ಮೊದಲ ಪಾರ್ಟ್ ನ ಕ್ಲೈಮ್ಯಾಕ್ಸ್ ನಲ್ಲಿ ನಿರ್ದೇಶಕ ಎಸ್.ಎಸ್.ರಾಜಮೌಳಿ ಮಾತ್ರ ಸೂಪರ್ ಟ್ವಿಸ್ಟ್ ಕೊಟ್ಟಿದ್ದಾರೆ.
ಬಾಹುಬಲಿಗೆ ಅತ್ಯಾಪ್ತರಾಗಿದ್ದ ಕಟ್ಟಪ್ಪ, ಬಾಹುಬಲಿಯನ್ನ ಕೊಲ್ಲೋದು ಯಾಕೆ ಅನ್ನುವ ಬಗ್ಗೆ ಸಿನಿಮಾ ನೋಡಿರುವವರು ಚರ್ಚೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಾಹುಬಲಿಯನ್ನ ಕಟ್ಟಪ್ಪ ಕೊಂದಿದ್ದು ಯಾಕೆ ಅನ್ನುವ ಬಗ್ಗೆ ಅನೇಕ ಜೋಕ್ ಗಳು ಹುಟ್ಟಿಕೊಂಡಿವೆ. [ಮೋದಿಗೂ ಕಾಡಿದ ಬಾಹುಬಲಿ' ಮಿಲಿಯನ್ ಡಾಲರ್ ಪ್ರಶ್ನೆ ! ]
ಅದ್ರಲ್ಲಿ, ಎಲ್ಲಕ್ಕಿಂತ ಮಜವಾಗಿರುವುದು ನಮ್ಮ ಉಪ್ಪಿ ಜೋಕ್. ಉಪೇಂದ್ರ ಅವರ ಪ್ರಕಾರ ಬಾಹುಬಲಿಯನ್ನ ಕಟ್ಟಪ್ಪ ಕೊಂದದ್ದು ಈ ಕಾರಣಕ್ಕೆ -
'ಬಾಹುಬಲಿ'ಯಿಂದಾಗಿ ಮದುವೆಗೂ ಮುನ್ನವೇ ದೇವಸೇನಾ (ಅನುಷ್ಕಾ ಶೆಟ್ಟಿ) ಗರ್ಭಿಣಿಯಾಗಿರುತ್ತಾರೆ. ಈ ವಿಷಯ ಕಟ್ಟಪ್ಪಗೆ ಗೊತ್ತಾಗುತ್ತದೆ. ಆಗ 'ಬಾಹುಬಲಿ' ಜೊತೆ ಕಟ್ಟಪ್ಪ ನಡೆಸುವ ಸಂವಾದ -
ಕಟ್ಟಪ್ಪ
-
ತಾಳಿ
ಕಟ್ಟಪ್ಪ
(Tie
the
taali)
ಬಾಹುಬಲಿ
-
ತಾಳಿ
ಕಟ್ಟಪ್ಪ
(Wait
Kattappa)
ಕಟ್ಟಪ್ಪ
(ಗೊಂದಲದಿಂದ)
-
ತಾಳಿ
ಕಟ್ಟಪ್ಪ
(Tie
the
taali)
ಬಾಹುಬಲಿ
-
'ತಾಳಿ'
ಕಟ್ಟಪ್ಪ?
(Give
me
taali)
ತಮ್ಮ ಮಾತನ್ನ ತಮಗೆ ತಿರುಗಿಸಿ ಬಾಹುಬಲಿ ವ್ಯಂಗ್ಯ ಮಾಡುತ್ತಿದ್ದಾನೆ ಅಂತ ತಿಳಿದು ಕಟ್ಟಪ್ಪ ಕೋಪಗೊಳ್ಳುತ್ತಾರೆ.
ಕಟ್ಟಪ್ಪ
(ಕೋಪದಿಂದ)
-
ನೀನು
ಕಟ್ಟಪ್ಪ
(You
tie
the
taali)
ಬಾಹುಬಲಿ
(ಗೊಂದಲದಿಂದ)
-
ನೀನು
ಕಟ್ಟಪ್ಪ
(You
are
Kattappa
not
me)
ಇದರಿಂದ ರೊಚ್ಚಿಗೆದ್ದ ಕಟ್ಟಪ್ಪ ಬಾಹುಬಲಿಯನ್ನು ಕೊಂದ..!! [ಬಾಹುಬಲಿಯನ್ನು ಕಟ್ಟಪ್ಪ ಕೊಂದ ರಹಸ್ಯ ಬಹಿರಂಗ]
ಹೀಗೊಂದು ಜೋಕ್ ಫೇಸ್ ಬುಕ್ ಮತ್ತು ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿದೆ. 'ನೀನು' ಹವಾ ಟಾಲಿವುಡ್ ನಲ್ಲೂ ಜೋರಾಗಿದೆ ಅನ್ನೋದಕ್ಕೆ ಇದು ಸಣ್ಣ ಉದಾಹರಣೆ ಅಷ್ಟೆ.