Don't Miss!
- News Namma Metro: ಬೆಂಗಳೂರಿನ ಮತದಾರರಿಗೆ ಸಿಹಿ ಸುದ್ದಿ ನೀಡಿದ ನಮ್ಮ ಮೆಟ್ರೋ
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಿಮಿಕ್ಕೋ..8ನೇ ಅದ್ಬುತವೋ..ನೀವೇ ನಿರ್ಧರಿಸಿ.!
ಮೆಗಾ ಸೀರಿಯಲ್ ನಂತೆ ನಿರ್ಮಾಪಕ ಕೆ.ಮಂಜು ಮತ್ತು ನಿರ್ಮಾಪಕ ಮುನಿರತ್ನ ಕಿತ್ತಾಡಿಕೊಂಡಿದ್ದ ಎಪಿಸೋಡ್ ನಿಮಗೆ ನೆನಪಿದ್ಯಾ?
ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಮ್ಯಾ ಅಭಿನಯದ 'ಕಠಾರಿವೀರ ಸುರಸುಂದರಾಂಗಿ' ಚಿತ್ರ ಮೊದಲು ಬಿಡುಗಡೆ ಆಗ್ಬೇಕು ಅಂತ ನಿರ್ಮಾಪಕ ಮುನಿರತ್ನ ಒಂದ್ಕಡೆ, 'ಗಾಡ್ ಫಾದರ್' ಚಿತ್ರ ಮೊದಲು ಸೆಟ್ಟೇರಿದ್ದು. ಹೀಗಾಗಿ ಅದೇ ಫಸ್ಟ್ ರಿಲೀಸ್ ಆಗ್ಬೇಕು ಅಂತ ನಿರ್ಮಾಪಕ ಕೆ.ಮಂಜು ಇನ್ನೊಂದ್ಕಡೆ.
ಇಬ್ಬರ ಹಗ್ಗ-ಜಗ್ಗಾಟ ಫಿಲ್ಮ್ ಚೇಂಬರ್ ನಲ್ಲಿ ಬಗೆ ಹರಿಯಲಿಲ್ಲ. ರಿಯಲ್ ಸ್ಟಾರ್ ಉಪೇಂದ್ರ ಫಾರ್ಮುಲಾ ಕೂಡ ವರ್ಕೌಟ್ ಆಗ್ಲಿಲ್ಲ. ಕೊನೆಗೆ 'ಗಾಡ್ ಫಾದರ್' ಸೆನ್ಸಾರ್ ಲೇಟಾಗಿದ್ದಕ್ಕೆ ವಿವಾದ ತಣ್ಣಗಾಗಿತ್ತು. [ಗಾಡ್ ಫಾದರ್, ಕಠಾರಿವೀರ ಕಿತ್ತಾಟ ಪುಕ್ಸಟೆ ಪ್ರಚಾರಕ್ಕೆ?]
ಅಂದು ಹಾವು-ಮುಂಗುಸಿಯಂತೆ ಕಚ್ಚಾಡಿಕೊಂಡಿದ್ದ ನಿರ್ಮಾಪಕ ಮುನಿರತ್ನ ಮತ್ತು ಕೆ.ಮಂಜು ಇಂದು ಫುಲ್ ಗಳಸ್ಯ ಕಂಠಸ್ಯ.! ದುಷ್ಮನಿ ಬಿಟ್ಟು ದೋಸ್ತಿ ಶುರು ಹಚ್ಕೊಂಡಿರುವ ಮುನಿರತ್ನ-ಕೆ.ಮಂಜು ಸ್ನೇಹ ಎಲ್ಲರಿಗೂ ಗೋಚರವಾಗಿದ್ದು 'ಉಪ್ಪಿ-2' ಆಡಿಯೋ ರಿಲೀಸ್ ಫಂಕ್ಷನ್ ನಲ್ಲಿ. [ಮುನಿರತ್ನಗೆ ಕೊಬ್ರಿ-ಸಕ್ಕರೆ; ಕೊಬ್ರಿಗೆ 'ಮುನಿ'ಸು?]
ರುಪ್ಪೀಸ್ ರೆಸಾರ್ಟ್ ನಲ್ಲಿ ನಡೆದ 'ಉಪ್ಪಿ-2' ಆಡಿಯೋ ರಿಲೀಸ್ ಸಮಾರಂಭದಲ್ಲಿ ಮುನಿರತ್ನ ಮತ್ತು ಕೆ.ಮಂಜು ಭಾಗವಹಿಸಿದ್ದರು. ಕಾರ್ಯಕ್ರಮ ನಡೆಯುವಾಗ ಇಬ್ಬರು ಅಕ್ಕ-ಪಕ್ಕದಲ್ಲೇ ಕುಳಿತಿದ್ದರು. ಸಾಲದಕ್ಕೆ ಒಬ್ಬರ ಹೆಗಲಮೇಲೆ ಮತ್ತೊಬ್ಬರು ಕೈ ಹಾಕಿಕೊಂಡು ರೆಸಾರ್ಟ್ ಸುತ್ತ ವಾಕಿಂಗ್ ಮಾಡುತ್ತಾ ಜಾಲಿ ಮಾಡ್ತಿದ್ದರು.
ಇದನ್ನ ನೋಡಿದ ಅಲ್ಲಿನ ಪತ್ರಕರ್ತರಿಗೆ ಆದ ಕಾಂಟ್ರವರ್ಸಿ ಗಿಮ್ಮಿಕ್ಕೋ, ಇಲ್ಲ ಈಗ ನೋಡುತ್ತಿರುವುದು ವಿಶ್ವದ 8ನೇ ಅದ್ಭುತವೋ ಅಂತ ಫುಲ್ ಕನ್ಫ್ಯೂಶನ್ ಆಗ್ಬಿಟ್ಟಿದೆ.