Don't Miss!
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- News ಮಹಾರಾಜರು ಬೆಂಗಳೂರು ಅರಮನೆ ಮೈದಾನ ಜಾಗ ಬಿಟ್ಟು ಕೊಡುವಂತೆ ಎಎಪಿ ಆಗ್ರಹ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಷ್ಣು ಅಭಿಮಾನಿಗಳ ಮೇಲೆ ಗಣೇಶ್ ಕಣ್ಣು?
ಇತ್ತೀಚೆಗಷ್ಟೆ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ಜೆ.ಪಿ.ನಗರದ ಅವರ ಮನೆಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಮಳೆ ಹುಡುಗ ಬರ್ತಡೆ ಸೆಲೆಬ್ರೇಟ್ ಮಾಡಿಕೊಂಡರು.
ಗಣೇಶ್ ಗೆ ವಿಶ್ ಮಾಡೋಣ ಅಂತ ಅವರ ಮನೆಯ ಬಳಿ ತೆರಳಿದ ಕೆಲ ಫ್ಯಾನ್ಸ್ ಗೆ ಅಚ್ಚರಿ ಕೂಡ ಕಾದಿತ್ತು. ಆ ಅಚ್ಚರಿಯನ್ನ ಒಮ್ಮೆ ಈ ಫೋಟೋದಲ್ಲಿ ನೀವೂ ನೋಡಿಬಿಡಿ.
ಗಣೇಶ್ ಗೆ ಜನ್ಮದಿನದ ಶುಭಾಶಯ ಕೋರುವ ದೊಡ್ಡ ದೊಡ್ಡ ಪೋಸ್ಟರ್ ಗಳಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಭಾವಚಿತ್ರ ಕೂಡ ಇತ್ತು. ಹಾಗ್ನೋಡಿದ್ರೆ, ಅಂತಹ ಪೋಸ್ಟರ್ ಮತ್ತು ಬ್ಯಾನರ್ ಗಳನ್ನ ರೆಡಿಮಾಡಿರುವುದು ಗಣೇಶ್ ಅಭಿಮಾನಿ ಸಂಘದವರೇ. [ಚಿನ್ನದ ಹುಡುಗ ಗಣೇಶ್ ಅದೃಷ್ಟವಂತ.! ಯಾಕೆ ಗೊತ್ತಾ?]
'ಅಟೋ ರಾಜ' ಚಿತ್ರದಲ್ಲಿ 'ಕರಾಟೆ ಕಿಂಗ್' ಶಂಕರ್ ನಾಗ್ ಫ್ಯಾನ್ಸ್ ನ ಅಟ್ರ್ಯಾಕ್ಟ್ ಮಾಡಿದ್ದ ಗಣೇಶ್ ಈಗ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿಗಳನ್ನ ಸೆಳೆಯುವ ಪ್ರಯತ್ನ ಮಾಡ್ತಿದ್ದಾರಾ? ಈ ಬ್ಯಾನರ್ ಗಳನ್ನ ನೋಡಿದ್ರೆ, ಇಂತಹ ಅನುಮಾನ ಮೂಡುವುದು ಸಹಜ. [ಗಣೇಶ್ ಬರ್ತಡೆಗೆ 'ಬುಗುರಿ' ಟ್ರೈಲರ್ ಗಿಫ್ಟ್]
ಈಗಾಗಲೇ ಕಿಚ್ಚ ಸುದೀಪ್ 'ವಿಷ್ಣುವರ್ಧನ' ಅಂತ ಸಿನಿಮಾ ಮಾಡಿ ಜೂನಿಯರ್ ವಿಷ್ಣುವರ್ಧನ್ ಪಟ್ಟ ಪಡೆದಿದ್ದಾರೆ. ಇನ್ನೂ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ಅಬ್ಬರಿಸಿ ಯಶ್ ಕೂಡ ವಿಷ್ಣು ದಾದಾ ಗೆಳೆಯರ ಬಳಗಕ್ಕೆ ಅಧಿಕೃತ ಎಂಟ್ರಿ ನೀಡಿದ್ದಾರೆ. ಇದೇ ಹಾದಿಯಲ್ಲಿ ಗಣೇಶ್ ಕೂಡ ಸಾಗಿದ್ರೆ ಅಚ್ಚರಿ ಇಲ್ಲ ಅನ್ನುತ್ತಾರೆ ಗಾಂಧಿನಗರದ ಪಂಡಿತರು.