Don't Miss!
- News Kolar Lok Sabha elections: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 'ಸ್ಥಳೀಯ' V/s 'ಹೊರಗಿನವ' ಫೈಟ್!
- Finance bangalore royal challengers ತಂಡದಿಂದ ನಗರದ ಎರಡು ಕೆರೆಗಳ ಪುನರುಜ್ಜೀವನ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನೀರ್ ದೋಸೆ' ಬಿಡಿ, 'ದೊಡ್ಡ ಮೆಣಸಿನಕಾಯಿ' ಬರುತ್ತೆ ನೋಡಿ!
ಕಿವಿ ಮೇಲೆ ದಾಸವಾಳ ಹೂ ಇಟ್ಕೊಂಡು 'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ಬ್ರೇಕಿಂಗ್ ನ್ಯೂಸ್ ಹೇಳ್ತಿದ್ದ ವಿಜಯ ಪ್ರಸಾದ್, ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕ ಅಂತ ಅನಿಸಿಕೊಂಡಿದ್ದು 'ಸಿದ್ಲಿಂಗು' ಚಿತ್ರದ ಮೂಲಕ.
ಪಂಚಿಂಗ್ ಡೈಲಾಗ್ಸ್ ಜೊತೆಗೆ ನವಿರಾದ ಕಥೆಯನ್ನ 'ಸಿದ್ಲಿಂಗು' ಮೂಲಕ ತೆರೆಮೇಲೆ ಕಲಾತ್ಮಕವಾಗಿ ಕಟ್ಟಿಕೊಟ್ಟಿದ್ದ ವಿಜಯ ಪ್ರಸಾದ್, ಕಳೆದ ಎರಡು ವರ್ಷಗಳಿಂದ 'ನೀರ್ ದೋಸೆ' ತಯಾರಿಯಲ್ಲೇ ಇದ್ದಾರೆ.
ಅತ್ತ ರಮ್ಯಾ ಬರ್ಲಿಲ್ಲ, ಇತ್ತ 'ನೀರ್ ದೋಸೆ' ಹ್ಯುಯ್ಯೋಕೆ ಆಗ್ಲಿಲ್ಲ. ಈ ಕಾರಣಕ್ಕೆ ಸದ್ಯಕ್ಕೆ 'ನೀರ್ ದೋಸೆ' ತಂಟೆ ಬಿಟ್ಟು 'ದೊಡ್ಡ ಮೆಣಸಿನಕಾಯಿ' ಹಿಡಿದುಕೊಂಡಿದ್ದಾರೆ ನಿರ್ದೇಶಕ ವಿಜಯ ಪ್ರಸಾದ್. [ವಿಜಯಪ್ರಸಾದ್ ನೀಡಲಿದ್ದಾರೆ ಭಾರಿ 'ನೀರ್ ದೋಸೆ']
ಇದ್ಯಾವ್ದಪ್ಪಾ 'ದೊಡ್ಡ ಮೆಣಸಿನಕಾಯಿ' ಅಂತ ಹುಬ್ಬೇರಿಸ್ಬೇಡಿ. ವಿಜಯ ಪ್ರಸಾದ್ ನಿರ್ದೇಶನ ಮಾಡುವುದಕ್ಕೆ ಹೊರಟಿರುವ ಹೊಚ್ಚ ಹೊಸ ಸಿನಿಮಾದ ಹೆಸರೇ 'ದೊಡ್ಡ ಮೆಣಸಿನಕಾಯಿ'.
ಈಗಾಗಲೇ 'ದೊಡ್ಡ ಮೆಣಸಿನಕಾಯಿ' ಕಥೆಯನ್ನ ನೀಟಾಗಿ ಕಟ್ ಮಾಡಿ ಸಿನಿಮಾ ಮಾಡುವುದಕ್ಕೆ ವಿಜಯ್ ಪ್ರಸಾದ್ ರೆಡಿಯಾಗಿದ್ದಾರೆ. ನಿರ್ಮಾಣ ಮಾಡುವುದಕ್ಕೆ ಕೆ.ಎ.ಸುರೇಶ್ ಕೂಡ ಮುಂದೆ ಬಂದಿದ್ದಾರೆ ಅನ್ನುತ್ತಿವೆ ಮೂಲಗಳು.
ಎಲ್ಲವೂ ಇನ್ನೂ ಮಾತುಕತೆ ಹಂತದಲ್ಲಿರುವುದರಿಂದ ಯಾವುದೂ ಪಕ್ಕಾ ಆಗಿಲ್ಲ. ವಿಜಯ್ ಪ್ರಸಾದ್ ಪ್ಲಾನ್ ಪ್ರಕಾರ ನಡೆದರೆ, ಆದಷ್ಟು ಬೇಗ 'ದೊಡ್ಡ ಮೆಣಸಿನಕಾಯಿ' ಸೆಟ್ಟೇರುವುದು ಖಚಿತ. ಹ್ಹಾ...'ದೊಡ್ಡ ಮೆಣಸಿನಕಾಯಿ' ಕುಯ್ಯೋಕೆ ರಮ್ಯಾ ಇರ್ತಾರಾ ಅಂತ ನಮ್ಮನ್ನ ಕೇಳ್ಬೇಡಿ.