Don't Miss!
- News ಬೆಂಗಳೂರಲ್ಲಿ ನಿತ್ಯ 10 mld ಸಂಸ್ಕರಿಸಿದ ನೀರು ಪೂರೈಕೆ: BWSSB
- Sports Rishabh Pant: ಟಿ20 ವಿಶ್ವಕಪ್ಗೆ ರಿಷಭ್ ಪಂತ್ ಭಾರತ ತಂಡದಲ್ಲಿರಬೇಕು
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಭಿಮಾನಿಗಳು ಕೇಳಿದ 2 ಪ್ರಶ್ನೆಗಳಿಗೆ ಕ್ರೇಜಿಸ್ಟಾರ್ ಕೊಟ್ಟ ಉತ್ತರ
ಎಲ್ಲರ ಮೆಚ್ಚಿನ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಬಹುನಿರೀಕ್ಷಿತ 'ಅಪೂರ್ವ' ಸಿನಿಮಾ ಯಾವಾಗ ರಿಲೀಸ್ ಆಗುತ್ತೆ? ಮತ್ತು ರವಿಚಂದ್ರನ್ ಅವರೇ ಈ ಬಾರಿ ಆದ್ರೂ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತೀರಾ? ಅಂತ ಅಭಿಮಾನಿಗಳು 2 ಪ್ರಶ್ನೆ ಹಾಕಿದ್ದು, ಇದೀಗ ಆ ಪ್ರಶ್ನೆಗಳಿಗೆ ರವಿಮಾಮ ಉತ್ತರ ನೀಡಲು ನಿರ್ಧಾರ ಮಾಡಿದ್ದಾರೆ.
ಹೌದು ಇದೇ ತಿಂಗಳು ಮೇ 27 ರಂದು ಬಹುನಿರೀಕ್ಷಿತ ಸಿನಿಮಾ 'ಅಪೂರ್ವ' ಭರ್ಜರಿಯಾಗಿ ಬಿಡುಗಡೆ ಆಗುತ್ತಿದೆಯಂತೆ. ಬಹಳ ಲೇಟ್ ಆಗಿ ಲೇಟೆಸ್ಟ್ ಆಗಿ ಸಿನಿಮಾ ಮೂಡಿಬರುತ್ತಿದ್ದು, ಬರೀ ಒಂದು ಲಿಫ್ಟ್ ನಲ್ಲಿ ಇಡೀ ಸಿನಿಮಾವನ್ನು ಶೂಟ್ ಮಾಡಿರುವುದು ಈ ಚಿತ್ರದ ವಿಶೇಷ.[ಚಕಿತಗೊಳಿಸುವ ರವಿಚಂದ್ರನ್ 'ಅಪೂರ್ವ' ಸಂಗತಿಗಳು]
ಇನ್ನು ಈ ಬಾರಿ ರವಿಮಾಮ ತಮ್ಮ ಹುಟ್ಟುಹಬ್ಬವನ್ನು ಬಹಳ ಗ್ರ್ಯಾಂಡ್ ಆಗಿ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಾರಂತೆ. ಕೆಲವು ವರ್ಷಗಳಿಂದ ತಮ್ಮ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಳ್ಳದೇ ಇದ್ದ ಕ್ರೇಜಿಸ್ಟಾರ್ ಈ ಬಾರಿ ಅಚರಿಸಲು ಪ್ಲ್ಯಾನ್ ಮಾಡುತ್ತಿದ್ದಾರೆ.[ಕನ್ನಡ ರಾಜ್ಯೋತ್ಸವ ಪ್ರಯುಕ್ತ ರವಿಚಂದ್ರನ್ 'ಅಪೂರ್ವ' ಕೊಡುಗೆ]
ಮೇ 27ಕ್ಕೆ ಭಾರಿ ಕುತೂಹಲ ಮೂಡಿಸಿರುವ 'ಅಪೂರ್ವ' ಸಿನಿಮಾ ತೆರೆ ಕಂಡರೆ ಮೇ 31ಕ್ಕೆ ರವಿಚಂದ್ರನ್ ಅವರ ಹುಟ್ಟುಹಬ್ಬವಿದೆ. ಆದ್ದರಿಂದ ಹುಟ್ಟುಹಬ್ಬದ ಎರಡು ದಿನ ಮುಂಚೆ 'ಅಪೂರ್ವ' ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಗಿಫ್ಟ್ ನೀಡಲು ನಿರ್ಧರಿಸಿದ್ದಾರೆ.[ಖಾಕಿ ತೊಟ್ಟು ಖಡಕ್ ಎಸಿಪಿ ಆದ ರವಿಚಂದ್ರನ್]
ಅಂದಹಾಗೆ ಹುಟ್ಟುಹಬ್ಬದ ಸಂದರ್ಭದಲ್ಲಿ ನಟ ಅಥವಾ ನಟಿಯರ ಸಿನಿಮಾ ಬಿಡುಗಡೆಯಾಗುವ ಟ್ರೆಂಡ್ ಇತ್ತೀಚೆಗೆ ಕಡಿಮೆಯಾಗಿದ್ದು, ಆ ಟ್ರೆಂಡ್ ಮತ್ತೆ ಮುಂದುವರಿಸಲು ರವಿಮಾಮ ನಿರ್ಧರಿಸಿದ್ದಾರೆ. ಅಂತೂ ಇಂತೂ ಅಭಿಮಾನಿಗಳಿಗೆ ಈ ತಿಂಗಳಿನ ಕೊನೆಯ ವಾರ ಭರ್ಜರಿ ವಾರ ಆಗೋದು ಗ್ಯಾರೆಂಟಿ.