Don't Miss!
- Finance ಬೆಂಗಳೂರು, ನೋಯ್ಡಾ, ಪುಣೆಯಲ್ಲಿ ಶೀಘ್ರದಲ್ಲೇ ಹೊಸ ಆಪಲ್ ಸ್ಟೋರ್ ಪ್ರಾರಂಭ
- News Dr.Rajkumar: ಹುಟ್ಟೂರಲ್ಲಿ ಮುತ್ತುರಾಜಣ್ಣನ ನೆನಪುಗಳು ನೂರಾರು.. ನಿಮಗೆ ಗೊತ್ತಿರದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Automobiles ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
- Lifestyle ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು.! ಹೇಗೆ ಗೊತ್ತಾ?
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೆಪ್ಟೆಂಬರ್ ನಲ್ಲಿ 'ಮುಂಗಾರು ಮಳೆ 2' ಆರ್ಭಟ ಆರಂಭ.?
2006ರಲ್ಲಿ ಯೋಗರಾಜ್ ಭಟ್ರು 'ಮುಂಗಾರು ಮಳೆ' ಎಂಬ ಅದ್ಭುತ ಪ್ರೇಮಕಾವ್ಯ ಒಂದನ್ನು ತೆರೆ ಮೇಲೆ ತಂದಾಗ ಎಲ್ಲರೂ ಕೂಡ 'ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ' ಅಂತ ಹಾಡಿದ್ದೇ ಹಾಡಿದ್ದು.
ಯಾರ ಬಾಯಲ್ಲಿ ಕೇಳಿದರೂ, 'ಅನಿಸುತಿದೆ ಯಾಕೋ ಇಂದು', 'ಒಂದೇ ಒಂದು ಸಾರಿ', 'ಕುಣಿದು ಕುಣಿದು ಬಾರೆ' ಅನ್ನೋ ಹಾಡುಗಳೇ ಗುನುಗುನಿಸುತ್ತಿದ್ದವು. ಅಷ್ಟರಮಟ್ಟಿಗೆ ಸ್ಯಾಂಡಲ್ ವುಡ್ ನಲ್ಲಿ ಮುಂಗಾರು ಮಳೆ ಆರ್ಭಟ ಜೋರಾಗೇ ಇತ್ತು.['ಮುಂಗಾರು ಮಳೆ 2' ನಲ್ಲಿ ಗಣಿಗೆ ಎಷ್ಟು ಜನ ನಾಯಕಿಯರು.?]
ಇದೀಗ ಅದೇ ಇತಿಹಾಸ ಮತ್ತೆ 'ಮುಂಗಾರು ಮಳೆ 2' ಮೂಲಕ ಮರುಕಳಿಸುತ್ತದಾ ಅಂತ ಸಿನಿ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ. ಭಟ್ರ ಮುಂಗಾರು ಮಳೆ ಸುರಿದು ಭರ್ತಿ ಹತ್ತು ವರ್ಷ ಕಳೆದಿದ್ದು, ಇದೀಗ ಶಶಾಂಕ್ ಅವರ 'ಮಳೆ' ಸದ್ಯದಲ್ಲೇ ಧೋ ಎಂದು ಸುರಿಯಲಿದೆ.
ಅಂದಹಾಗೆ 'ಮುಂಗಾರು ಮಳೆ 2' ಸೆಪ್ಟೆಂಬರ್ 9 ರಂದು ಚಿತ್ರಮಂದಿರಗಳಲ್ಲಿ ಸುರಿಯಲಿದೆ ಎನ್ನಲಾಗುತ್ತಿದೆ. ಆಗಸ್ಟ್ ಮೊದಲ ವಾರದಲ್ಲಿ ಆಡಿಯೋ ಬಿಡುಗಡೆ ಮಾಡಿ, ಸೆಪ್ಟೆಂಬರ್ ನಲ್ಲಿ ಚಿತ್ರವನ್ನು ತೆರೆ ಮೇಲೆ ತರಲು ಚಿತ್ರತಂಡ ಪ್ಲ್ಯಾನ್ ಮಾಡುತ್ತಿದೆ.[ಮುಂಗಾರು ಮಳೆ 2 ಯಲ್ಲಿ ಗಣೇಶ್-ರವಿಚಂದ್ರನ್ ಮಿಂಚು]
ಇನ್ನು ಸೆಪ್ಟೆಂಬರ್ 5 ರಂದು 'ಚೌತಿ' ಹಬ್ಬ ಇರೋದ್ರಿಂದ, ಗಣೇಶನಿಗೆ ಒಂದು ದೀರ್ಘ ದಂಡ ನಮಸ್ಕಾರ ಹಾಕಿ, ಸೆಪ್ಟೆಂಬರ್ 9 ರಂದು 'ಮುಂಗಾರು ಮಳೆ 2' ಚಿತ್ರವನ್ನು ತೆರೆ ಮೇಲೆ ತರಲು ನಿರ್ಮಾಪಕ ಗಂಗಾಧರ್ ಅವರು ತಿರ್ಮಾನ ಮಾಡಿದ್ದಾರಂತೆ.
ಇದೇ ಮೊದಲ ಬಾರಿಗೆ ಮಳೆ ಹುಡುಗ ಗಣೇಶ್ ಅವರಿಗೆ ಕುಡ್ಲದ ಬೆಡಗಿ ನೇಹಾ ಶೆಟ್ಟಿ ಅವರು ಮಳೆ ಹುಡುಗಿಯಾಗಿ ಸಾಥ್ ಕೊಟ್ಟಿದ್ದಾರೆ. ಇನ್ನುಳಿದಂತೆ ನಟಿ ಐಂದ್ರಿತಾ ರೇ, ನಟಿ ಶಿಲ್ಪಾ ಮಂಜುನಾಥ್, ಮತ್ತು ಮಳೆ ಅತಿಥಿಯಾಗಿ 'ಯು-ಟರ್ನ್' ಖ್ಯಾತಿಯ ನಟಿ ಶ್ರದ್ಧಾ ಶ್ರೀನಾಥ್ ಮಿಂಚಿದ್ದಾರೆ.[ಮುಂಗಾರುಮಳೆ 2 ಡಿ.29ಕ್ಕೆ ಬರಬೇಕು, ಯಾಕೆ ಗೊತ್ತಾ?]
ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಗಣೇಶ್ ಅವರು ಅಪ್ಪ-ಮಗನ ಪಾತ್ರದಲ್ಲಿ ಮಿಂಚಿರೋದ್ರಿಂದ ಸಹಜವಾಗಿ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಕೊಂಚ ಕುತೂಹಲ ಹೆಚ್ಚಾಗೇ ಇದೆ.['ಮುಂಗಾರು ಮಳೆ-2' ಚಿತ್ರತಂಡದಿಂದ ಸುವರ್ಣಾವಕಾಶ.! ನಿಮಗಾಗಿ...]
ಒಟ್ನಲ್ಲಿ ಈ ಬಾರಿಯ ಮುಂಗಾರು ಮಳೆ ಆರ್ಭಟಕ್ಕೆ ಬಾಕ್ಸಾಪೀಸ್ ಕೊಚ್ಚಿಕೊಂಡು ಹೋಗುತ್ತೋ, ಏನ್ಕತೆ ಅಂತ ಸೆಪ್ಟೆಂಬರ್ ತಿಂಗಳಲ್ಲಿ ತಿಳಿದು ಬರಲಿದೆ.