Don't Miss!
- News ಕರ್ನಾಟಕದ ಮೇಲೆ ವರುಣನ ಕೃಪೆ: ರಾಜ್ಯದ ಪ್ರಮುಖ ಡ್ಯಾಂಗಳ ಇಂದಿನ ನೀರಿನ ಮಟ್ಟ ಎಷ್ಟು? ಇಲ್ಲಿದೆ ವಿವರ
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಉಳಿದವರು ಕಂಡಂತೆ' ಚಿತ್ರದಲ್ಲಿ ರಾತ್ರಿ ಏನಾಯಿತು?
ಅವರು ಯಾಕೆ ಹಾಗೆ ಮಾಡಿದರು ಅನ್ನೋ ಕುತೂಹಲ ನಿಮ್ಗೂ ಇರುತ್ತೆ. ಇದು 'ಉಳಿದವರು ಕಂಡಂತೆ' ಚಿತ್ರತಂಡದ ಕುಂಬಳಕಾಯಿ ಕಥೆ. ಸಿನಿಮಾದ ಶೂಟಿಂಗ್ ಮುಗಿದ ಮೇಲೆ ಚಿತ್ರತಂಡ ಉಳಿದವರಿಗೂ ಕಾಣುವಂತೆ ಮಾಧ್ಯಮದವರನ್ನು ಕರೆಸಿ ಕುಂಬಳಕಾಯಿ ಒಡೆದು ಶೂಟಿಂಗ್ ಮುಗೀತು ಅಂತಾರೆ.
ಆದರೆ ಉಳಿದವರು ಕಂಡಂತೆ ಚಿತ್ರತಂಡ ಇತ್ತೀಚೆಗೆ ರಾತ್ರಿ 3.30ಕ್ಕೆ ಚಿತ್ರದ ಕುಂಬಳಕಾಯಿ ಒಡೆದಿದೆ. ಅಂದಹಾಗೆ ಇದು 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'ಯ ರಕ್ಷಿತ್ ಶೆಟ್ಟಿ, ಟಿವಿ9 ಕನ್ನಡ ನಿರೂಪಕಿಯಾಗಿದ್ದ ಶೀತಲ್ ಶೆಟ್ಟಿ ಅಭಿನಯದ ಚಿತ್ರದ ಕಥೆ.
ಆಮೇಲೆ ಇಡೀ ಚಿತ್ರತಂಡ ಫೋಟೋ ತೆಗಿಸಿಕೊಂಡು ಎಂಜಾಯ್ ಮಾಡಿ. ಕೊನೆಯ ದಿನವನ್ನ ಖುಷಿಯನ್ನ ಬೆಳ್ಳಂಬೆಳಗ್ಗೆ ಆಚರಿಸಿಕೊಂಡಿದೆ.
ಬಳಿಕ ಚಿತ್ರತಂಡದ ಎಲ್ಲರೂ ಚುಮುಚುಮು ಮುಂಜಾನೆ ಮನೆ ಸೇರಿಕೊಂಡಿದ್ದಾರೆ. ಇಷ್ಟಕ್ಕೂ ಸದ್ಯಕ್ಕೆ ಚಿತ್ರದ ಕಥೆಯ ಬಗ್ಗೆಯೂ ಏನನ್ನೂ ಬಿಟ್ಟುಕೊಡದ ಚಿತ್ರತಂಡ ಈಗ ಬೆಳ್ಳಂಬೆಳಗ್ಗೆ ಕುಂಬಳಕಾಯಿ ಒಡೆದು ಅಲ್ಲೂ ಉಳಿದವರಿಗೆ ಕಾಣದಂತೆ ಶೂಟಿಂಗ್ ಮುಗಿಸಿದೆ.
ಉಳಿದಂತೆ 'ಉಳಿದವರು ಕಂಡಂತೆ' ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವವರು ನಟ ರಕ್ಷಿತ್ ಶೆಟ್ಟಿ. ಕರಮ್ ಚಾವ್ಲಾ ಛಾಯಾಗ್ರಹಣ, ಅಜಿನೀಷ್ ಸಂಗೀತ, ಸಚಿನ್ ಸಂಕಲನ ಈ ಚಿತ್ರಕ್ಕಿದೆ. ರಕ್ಷಿತ್ ಶೆಟ್ಟಿ, ಕಿಶೋರ್, ಯಜ್ಞಾ ಶೆಟ್ಟಿ, ಶೀತಲ್ ಶೆಟ್ಟಿ ಅಚ್ಯುತ್ ಕುಮಾರ್, ತಾರಾ, ಚಿತ್ರಾ, ರಿಷಬ್ ಶೆಟ್ಟಿ ಮತ್ತಿತರರು ಚಿತ್ರದ ತಾರಾಬಳಗದಲ್ಲಿ ಇದ್ದಾರೆ.