Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೆ ಸಲ್ಮಾನ್ ತೆಕ್ಕೆಗೆ ಕತ್ರಿನಾ, ರಣ್ಬೀರ್ ಔಟ್?
ಬಾಲಿವುಡ್ ನಲ್ಲಿ ಹರಿದಾಡುವ ಸುದ್ದಿಗಳಿಗೆ ಲೆಕ್ಕವೇ ಇಲ್ಲ. ನಮ್ಮ ಗಾಂಧಿನಗರವನ್ನು ಮೀರಿಸುವ ಸುದ್ದಿಗಳು ಹೀಗೆ ಬಂದು ಹಾಗೇ ಅರಬ್ಬಿ ಸಮುದ್ರಗಳ ಅಲೆಗಳ ನಡುವೆ ಮಾಯವಾಗುತ್ತಿರುತ್ತವೆ.
ಈಗ ಬಾಲಿವುಡ್ ಜಗತ್ತಿನ ಹಾಟ್ ಬ್ಯೂಟಿ ಕತ್ರಿನಾ ಕೈಫ್ ಸುತ್ತಮುತ್ತ ಮತ್ತೊಂದು ಗಾಸಿಪ್ ಸುದ್ದಿ ಹರಿದಾಡುತ್ತಿದೆ. ಅದೇನಂದರೆ, ಕತ್ರಿನಾ ಈಗ ಬಾಲಿವುಡ್ ಬ್ಯಾಡ್ ಬಾಯ್ ಮತ್ತು ತನ್ನ ಒಂದು ಕಾಲದ ಲವರ್ ಸಲ್ಮಾನ್ ಖಾನಿಗೆ ಮತ್ತೆ ಹತ್ತಿರವಾಗುತ್ತಿದ್ದಾರಂತೆ.
ಸುದ್ದಿಯೋ, ಗಾಳಿ ಸುದ್ದಿಯೋ ಈ ಸುದ್ದಿಯನ್ನು ಕೇಳಿ ಕಪೂರ್ ಖಾಂದಾನಿನ ಕುಡಿ ಚಾಕೋಲೇಟ್ ಹೀರೋ ರಣ್ಬೀರ್ ಕಪೂರ್ ಅದೆಷ್ಟು ವ್ಯಸನ ಪಟ್ಟಿರಬೇಡ? (ಬಾಲಿವುಡ್ ಪ್ರಣಯ ಪಕ್ಷಿಗಳು ಕೈಕೈ ಹಿಡಿದು ಮತ್ತೆ ಹಾರಿದವು)
ಮಾಧ್ಯಮ ಜಗತ್ತಿನವರ ಪ್ರಶ್ನೆಗೆ ಕತ್ರಿನಾ ಕೈಫ್ ಅವರಿಂದ ನೇರಾನೇರ ಉತ್ತರ ಸಿಗುವುದು ಸಾಮಾನ್ಯವಾಗಿ ಅಪರೂಪ. ಒಂದು ರೀತಿಯಲ್ಲಿ ನಮ್ಮ ಕೋಡಿಮಠದ ಶ್ರೀಗಳ ಹಾಗೆ ಒಗಟಿನ ರೂಪದಲ್ಲಿ ಆಕೆಯ ಉತ್ತರ ಸಿಗುವುದೇ ಹೆಚ್ಚು. (ಈ ಬಾರಿ ವಿಚಿತ್ರ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ)
ಸಂದರ್ಶನವೊಂದರಲ್ಲಿ ಕತ್ರಿನಾ, ಸಲ್ಮಾನ್ ಬಗ್ಗೆ ಹೇಳಿದ್ದೇನು?
ಸಲ್ಮಾನ್ ಖಾನ್ ನನಗೆ ಸ್ಪೆಷಲ್ ವ್ಯಕ್ತಿ
ದಿನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಸಲ್ಮಾನ್ ಖಾನ್ ಈಗಲೂ ನನಗೆ ಸ್ಪೆಷಲ್ ವ್ಯಕ್ತಿ. ಈಗಲೂ ನನ್ನ ಹೃದಯದಲ್ಲಿ ಸಲ್ಮಾನಿಗೆ ವಿಶೇಷ ಸ್ಥಾನವಿದೆ ಎಂದು ಹೇಳುವ ಮೂಲಕ ರಣ್ಬೀರ್ ಕಪೂರ್ ಹೃದಯಕ್ಕೆ ಕೊಳ್ಳಿ ಇಟ್ಟಿದ್ದಾರೆ.
ನನಗೆ ಸಂದೇಶದಷ್ಟೇ ದೂರ
ಸಂದರ್ಶನದಲ್ಲಿ ಮಾತನಾಡುತ್ತಾ ಕತ್ರಿನಾ, ಸಲ್ಮಾನ್ ನನಗೆ ಅತ್ಯಂತ ಆಪ್ತ ವ್ಯಕ್ತಿ. ಒಂದು ಮೊಬೈಲ್ ಮೆಸೇಜ್ ನಷ್ಟೇ ಅವರು ನನಗಿಂತ ದೂರ ಎನ್ನುವ ಒಗಟಿನ ಮಾತನ್ನೂ ಆಡಿದ್ದಾರೆ. ಅಲ್ಲದೇ ನಾನು ಈಗಲೂ ಅವರ ಜೊತೆ 'ಟಚ್'ನಲ್ಲಿದ್ದೀನಿ ಎಂದಿದ್ದಾರೆ.
ರಣ್ಬೀರ್ ಬಗ್ಗೆ ಏನಂತೀರಿ ಮೇಡಂ ಕತ್ರಿನಾ?
ಮೇಲಿನ ಪ್ರಶ್ನೆಗೆ, ಈಗಲೇ ಈ ಬಗ್ಗೆ ನಾನು ಏನೂ ಹೇಳುವ ಸ್ಥಿತಿಯಲ್ಲಿಲ್ಲ. ಮುಂದೆ ರಣ್ಬೀರ್ ಜೊತೆ ಬ್ರೇಕ್ - ಅಪ್ ಆದರೂ ಆಗಬಹುದು. ಇವತ್ತಿಲ್ಲಾಂದ್ರೆ, ನಾಳೆ ಬ್ರೇಕ್ ಆದರೂ ಆಗ ಬಹುದು ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೇ ಹೇಳಿದ್ದಾರೆ.
ನಾನು ಏನು ಮಾತನಾಡಿದರೂ ಸುದ್ದಿ
ಹಾಗಾಗಿ, ನಾನು ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. general opinion ನೀಡಿದರೂ ಜನ ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ, ಹಾಗಾಗಿ ಸುಮ್ಮನಿರುವುದನ್ನು ಅಭ್ಯಾಸ ಮಾಡಿ ಕೊಂಡಿದ್ದೇನೆ.
ಕತ್ರಿನಾ ಮರೆಯದ ಸಲ್ಲು ಮಿಯಾ
ಕತ್ರಿನಾ ಹಿಂದೆ ಮುಂದೆ ಏನೇ ಸುದ್ದಿ ಹರಿದಾಡುತ್ತಿದ್ದರೂ ಸಲ್ಮಾನ್ ಮಾತ್ರ ಕತ್ರಿನಾಳನ್ನು ನೆನೆಪಿಸಿ ಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ತಾನು ಆಡಿ 7 ಕಾರು ಖರೀದಿಸಿದ ಸಂದರ್ಭದಲ್ಲೂ, ಕತ್ರಿನಾ ಈ ಕಾರಿನಲ್ಲಿ ಕೂತರೆ ಇನ್ನೂ ಸುಂದರವಾಗಿ ಕಾಣಿಸಿಕೊಳ್ಳುತ್ತಾಳೆಂದು ಹೇಳಿದ್ದರು.