Don't Miss!
- News ಡಾ.ಮಂಜುನಾಥ್ ಅವರಿಗೆ ಕೇಂದ್ರ ಸಚಿವ ಸ್ಥಾನ: ಸುಳಿವು ಕೊಟ್ಟ ಹೆಚ್ ಡಿ ದೇವೇಗೌಡ
- Automobiles Maruti Suzuki: 1 ವರ್ಷದಲ್ಲಿಯೇ ಹೊಸ ದಾಖಲೆ.. 134,735 ಫ್ರಾಂಕ್ಸ್ ಕಾರುಗಳು ಮಾರಾಟ, ಬೆಲೆ ರೂ.7.51 ಲಕ್ಷ
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Lifestyle ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಾಲೆಜಿಂಗ್ ಸ್ಟಾರ್ ದರ್ಶನ್ ಗೆ ಸುದೀಪ್ ಆಕ್ಷನ್ ಕಟ್?
ಈಗಾಗಲೇ ಅವರು ದರ್ಶನ್ಗೆ ಹೊಂದುವಂಥ ಕತೆಯ ಹುಡುಕಾಟದಲ್ಲಿದ್ದಾರೆ. ಇದರ ಜೊತೆಗೆ ಅವರು ಬಚ್ಚನ್ ಚಿತ್ರ ಮುಗಿಸಿಕೊಡಬೇಕಿದೆ. ಬಹುಶಃ ಡಿಸೆಂಬರ್ ಮೊದಲನೇ ವಾರದಲ್ಲಿ ಬಚ್ಚನ್ ಶೂಟಿಂಗ್ ಮುಗಿಯಬಹುದು.
ಅದಾದ ನಂತರ ಸುದೀಪ್ ಏನು ಮಾಡುತ್ತಾರೆ ಎಂಬ ಕುತೂಹಲ ಹಲವರಿಗಿತ್ತು. ಸಾಕಷ್ಟು ನಿರ್ಮಾಪಕರು ಸೂಟ್ಕೇಸ್ ಹಿಡಿದು ಸುದೀಪ್ ಮನೆ ಎದುರು ನಿಂತಿದ್ದಾರೆ. ಹೀಗಿದ್ದೂ ಕಿಚ್ಚ ನಿರ್ದೇಶನಕ್ಕಿಳಿಯುವ ಯೋಚನೆಯಲ್ಲಿದ್ದಾರೆ.
ಅದರ ನಡುವೆ ಸಿಸಿಎಲ್ ಕ್ರಿಕೆಟ್ ಬರಲಿದೆ. ಇನ್ನು ಅವರ ಅಸಿಸ್ಟೆಂಟ್ಗಳು ರೆಡಿಮಾಡಿರುವ ಶಾರ್ಟ್ ಫಿಲಂಗಾಗಿ ಒಂದಷ್ಟು ಸಮಯ ಮೀಸಲಿಡಬೇಕಿದೆ. ಹೀಗಿರುವಾಗ ಕಿಚ್ಚನನ್ನು ಕಾಯುತ್ತಿರುವ ನಿರ್ಮಾಪಕರಿಗೆ ಸುದೀಪ್ ಏನು ಉತ್ತರ ಕೊಡುತ್ತಾರೆ..? ಅಷ್ಟಕ್ಕೂ ದರ್ಶನ್ ಒಪ್ಪಿಕೊಂಡಿದ್ದಾರಾ... ಎಂದು ಹುಡುಕ ತೊಡಗಿದರೆ, ಸದ್ಯಕ್ಕೆ ದರ್ಶನ್ ಔಟ್ ಆಫ್ ಸ್ಟೇಷನ್!
ಬುಲ್ಬುಲ್ ಚಿತ್ರದ ಚಿತ್ರೀಕರಣಕ್ಕಾಗಿ ದರ್ಶನ್ ವಿದೇಶಕ್ಕೆ ಹಾರಿದ್ದಾರೆ. ಅಕ್ಟೋಬರ್ 16ನೇ ತಾರೀಕಿನವರೆಗೂ ದರ್ಶನ್ ನಾಟ್ ರೀಚಬಲ್!! ಅಲ್ಲಿಂದ ವಾಪಸ್ ಬಂದ ನಂತರ ಸಂಗೊಳ್ಳಿ ರಾಯಣ್ಣ ಚಿತ್ರದ ಪ್ರಮೋಷನ್ನಲ್ಲಿ ಪಾಲ್ಗೊಳ್ಳಬೇಕು.
ಅದು ಮುಗಿಯುತ್ತಿದ್ದಂತೇ, ವಿರಾಟ್ ಚಿತ್ರದ ಉಳಿದ ಭಾಗದ ಚಿತ್ರೀಕರಣ ಮುಗಿಸಿಕೊಡಬೇಕು. ನಂತರ ಬುಲ್ಬುಲ್ ಅಂತಿಮ ಹಂತದ ಶೂಟಿಂಗ್. ಅದರ ಬೆನ್ನಲ್ಲೇ ಅಗ್ರಜ ಚಿತ್ರಕ್ಕೆ ಒಂದು ವಾರ ಬಣ್ಣ ಹಚ್ಚಬೇಕಿದೆ.
ಹುಸ್ಸಪ್ಪ... ಇಷ್ಟು ಮುಗಿಸುವಷ್ಟರಲ್ಲಿ ಹೊಸ ವರ್ಷ ಬಂದಿರುತ್ತದೆ. ಆಗ ದರ್ಶನ್ ಇನ್ನೆಷ್ಟು ಚಿತ್ರಕ್ಕೆ ಸೈನ್ ಮಾಡಿರುತ್ತಾರೋ ಕಾದು ನೋಡಬೇಕು.