Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಚ್ಛೇದಿತೆಗೆ ಗುಟ್ಟಾಗಿ ತಾಳಿಭಾಗ್ಯ ಕಲ್ಪಿಸಿದ ನಟರತ್ನ
ಈ ವಿವಾಹಕ್ಕೆ ತಾರಕರತ್ನ ಕುಟುಂಬಿಕರು ಯಾರೂ ಬಂದು ಆಶೀರ್ವದಿಸಿಲ್ಲ. ಕೇವಲ ಕೆಲವೇ ಕೆಲವು ಸ್ನೇಹಿತರ ಸಮ್ಮುಖದಲ್ಲಿ ಮದುವೆ ನಡೆದಿದೆ. ಅನಂತಪುರಂ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದ ಸಾರಿಗೆ ಇಲಾಖೆಯ ಮಾಜಿ ಉದ್ಯೋಗಿ ಅಲೇಖ್ಯಾ ಅವರ ಕೈಹಿಡಿದಿದ್ದಾರೆ ತಾರಕರತ್ನ.
ಪ್ರಸ್ತುತ ಈಕೆ ಹೈದರಾಬಾದಿನಲ್ಲೇ ನೆಲೆಸಿದ್ದಾರೆ. ಇವರಿಬ್ಬರೂ ಸುದೀರ್ಘ ಸಮಯದಿಂದ ಒಬ್ಬರನ್ನು ಪ್ರೀತಿಸಿಕೊಳ್ಳುತ್ತಿದ್ದರಂತೆ. ತಾರಕರತ್ನ ಮುಖ್ಯಭೂಮಿಕೆಯಲ್ಲಿದ್ದ 'ನಂದೀಶ್ವರಡು' ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದರು. ಆಗಲೇ ಇವರಿಬ್ಬರ ನಡುವೆ ಪ್ರೇಮ ಚಿಗುರೊಡೆದಿತ್ತು ಎನ್ನುತ್ತವೆ ಟಾಲಿವುಡ್ ಮೂಲಗಳು.
'ಒಕಟೋ ನಂಬರ್ ಕುರ್ರೋಡು' ಎಂಬ ಚಿತ್ರದ ಮೂಲಕ ತೆಲುಗು ಬೆಳ್ಳಿತೆರೆಗೆ ಅಡಿಯಿಟ್ಟ ಈ ನಟ ಬಳಿಕ ಒಮ್ಮೆಲೆ 9 ಚಿತ್ರಗಳಿಗೆ ಸಹಿ ಹಾಕಿ ಹೊಸ ದಾಖಲೆ ನಿರ್ಮಿಸಿದ್ದರು. ಈತನ ತಿಕ್ಕಲಾಟ ನೋಡಿದ ಪ್ರೇಕ್ಷಕರು ಮೂಲೆಗೆ ತಳ್ಳಿದ್ದರು. ಈತ ಅಭಿನಯಿಸಿದ ಯಾವೊಂದು ಚಿತ್ರವೂ ಬಾಕ್ಸಾಫೀಸರಲ್ಲಿ ಗಟ್ಟಿಯಾಗಿ ಕಚ್ಚಿಕೊಳ್ಳದೆ ಎಲ್ಲವೂ ತೋಪೆದ್ದು ಹೋಗಿದ್ದವು.
ಎನ್ಟಿಆರ್ ಕುಟುಂಬದ ಕುಡಿಗಳಾದ ಬಾಲಕೃಷ್ಣ, ಹರಿಕೃಷ್ಣ, ನಂದಮೂರಿ ಕಲ್ಯಾಣರಾಮ್, ಜೂ.ಎನ್ಟಿಆರ್ ಇವರೆಲ್ಲಾ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಆದರೆ ತಾರಕರತ್ನ ಮಾತ್ರ ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ. ಈಗ ಕುಟುಂಬಿಕರ ಕಣ್ಣು ತಪ್ಪಿಸಿ ಗುಟ್ಟಾಗಿ ಮದುವೆಯಾಗಿದ್ದಾನೆ. (ಏಜೆನ್ಸೀಸ್)