Don't Miss!
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಾರುಖ್ ಖಾನ್ ವಿರುದ್ಧ ವರ್ಣಮಯ ದೂರು
ನಿಮ್ಮ ತ್ವಚೆಗೆ ಗೌರವರ್ಣ ಬೇಕೆ? ಈ ಕ್ರಿಮ್ ಹಚ್ಚಿಕೊಳ್ಳಿ ಎಂದು ಪುರುಷರ ಮುಖರಾವಿಂದವನ್ನು ಬೆಳಗುವ ಟಿಪ್ಸ್ ನೀಡುತ್ತಿದ್ದ ಕಿಂಗ್ ಖಾನ್ ಶಾರುಖ್ ವಿರುದ್ಧ ಆನ್ ಲೈನ್ ಪಿಟೀಷನ್ ಗೆ ಚಾಲನೆ ನೀಡಲಾಗಿದೆ. ಟಿವಿಗಳಲ್ಲಿ ಶಾರುಖ್ ಖಾನ್ ಅವರು ಗೌರವರ್ಣದ ಬಗ್ಗೆ ಕೊಡುವ ಸಲಹೆ ಈಗ ಶ್ವೇತ ವರ್ಣ ಹಾಗೂ ಕೃಷ್ಣ ವರ್ಣೀಯರ ನಡುವಿನ ಕದಂಕ ಹೆಚ್ಚಿಸಿದೆ.
Dark
is
Beautiful
ಎಂದು
ಹೇಳಿ
ಶಾರುಖ್
ಖಾನ್
ವಿರುದ್ಧ
ಕೇಸು
ದಾಖಲಿಸಲಾಗಿದೆ.
ಇಮಾಮಿ
ಸಮೂಹದ
ಉತ್ಪನ್ನ
ಫೇರ್
ಅಂಡ್
ಹ್ಯಾಂಡ್
ಸಮ್
ನ
ಉತ್ಪನ್ನದ
ಪರವಾಗಿ
ಪ್ರಚಾರ
ಮಾಡುತ್ತಾ
ಕಪ್ಪು
ವರ್ಣಕ್ಕಿಂತ
ಶ್ವೇತವರ್ಣ
ಶ್ರೇಷ್ಠ
ಅದಕ್ಕಾಗಿ
ನೀವು
ಈ
ಕ್ರೀಮ್
ಬಳಸಿ
ಮುಜುಗರ
ಅನುಭವಿಸಬೇಡಿ
ಎಂದು
ಶಾರುಖ್
ಹೇಳುತ್ತಾರೆ.
ಶಾರುಖ್ ಪ್ರಚಾರ ಹೇಳಿಕೆ ಖಂಡಿಸಿ www.change.org ನಲ್ಲಿ ಹಾಕಿರುವ ಆನ್ ಲೈನ್ ಪಿಟೀಷನ್ ಗೆ ಈಗಾಗಲೇ 13,000ಕ್ಕೂ ಹೆಚ್ಚು ಜನರ ಸಹಿ ಬಿದ್ದಿದೆ. ಶ್ವೇತ ಶುಭ್ರ ಮುಖವಿದ್ದರೆ ಮಾತ್ರ ಯಶಸ್ಸು ಸಾಧ್ಯ ಎಂದು ಪ್ರಚಾರ ಮಾಡುವುದ್ದು ಎಷ್ಟು ಸರಿ ಇದು ವರ್ಣ ಬೇಧ ನೀತಿ ಅನುಸರಿಸಿದ್ದಂತೆ. ಹೀಗಾಗಿ ಜಾಹೀರಾತಿನಲ್ಲಿರುವ 'zyada' ಎಂಬ ಪದ ಬಳಕೆ ಆಕ್ಷೇಪಾರ್ಹ ಎಂದು ದೂರುದಾರರು ಹೇಳಿದ್ದಾರೆ.
ಶ್ವೇತ ಶುಭ್ರ ಮುಖವಿದ್ದರೆ ಮಾತ್ರ ಯಶಸ್ಸು ಸಾಧ್ಯ ಎಂದು ಪ್ರಚಾರ ಮಾಡುವುದ್ದು ಎಷ್ಟು ಸರಿ ಇದು ವರ್ಣ ಬೇಧ ನೀತಿ ಅನುಸರಿಸಿದ್ದಂತೆ. ಹೀಗಾಗಿ ಜಾಹೀರಾತಿನಲ್ಲಿರುವ 'zyada' ಎಂಬ ಪದ ಬಳಕೆ ಆಕ್ಷೇಪಾರ್ಹ ಎಂದು ದೂರು ದಾರರು ಹೇಳಿದ್ದಾರೆ.
ಬಾಲಿವುಡ್ ನಟಿ, ಸಾಮಾಜಿಕ ಕಾರ್ಯಕರ್ತೆ ನಂದಿತಾ ದಾಸ್ ಅವರು ಕೂಡಾ ಈ ದೂರಿಗೆ ಸಹಿ ಹಾಕಿ, ಈ ರೀತಿ ತಾರತಮ್ಯದ ಹೇಳಿಕೆ ಇರುವ ಜಾಹೀರಾತಿಗೆ ಕಡಿವಾಣ ಅಗತ್ಯ ಎಂದಿದ್ದಾರೆ. ಇಮಾನಿ ಕಂಪನಿ ಉತ್ಪನ್ನದ ಜಾಹೀರಾತು ನಿರ್ದೇಶಿಸಿದ ರಾಜ್ ಕುಮಾರ್ ಹಿರಾನಿ ವಿರುದ್ಧ ಕೂಡಾ ದೂರು ಬಂದಿದೆ. ಕ್ಯಾನ್ವಸ್ ಫಿಲಂ ಅಡಿಯಲ್ಲಿ ಈ ಜಾಹೀರಾತು ನಿರ್ಮಾಣಗೊಂಡಿದೆ.
Actiogenನ ಚಂದಾ ಝವೇರಿ, ಕ್ಯಾನ್ವಸ್ ಫಿಲಂನ ಶಾಕುನ್ ಬಾತ್ರ, ಇಮಾನಿ ಸಮೂಹದ ನಿರ್ದೇಶಕ ಮೋಹನ್ ಗೋಯೆಂಕಾ, ಸಿಚುಯೇಷನ್ ಅಡ್ವರ್ಟೈಸ್ಮೆಂಟ್ ನ ಕ್ರಿಯಾಶೀಲ ನಿರ್ದೇಶಕ ಮಿಲಿಂದ್ ನಬಾರ್ ವಿರುದ್ಧ ಕೂಡಾ ಆನ್ ಲೈನ್ ದೂರು, ಟೀಕೆಗಳು ಕೇಳಿ ಬಂದಿದೆ. ಈ ದೂರಿಗೆ ಸಹಿ ಹಾಕಿದ ಮೇಲೆ ಇದನ್ನು ಆಧಾರವಾಗಿಟ್ಟುಕೊಂಡು ಪೊಲೀಸರಿಗೆ ದೂರು ಸಲ್ಲಿಸುವ ಆಲೋಚನೆ ಇದೆ ಎಂದು ದೂರುದಾರರು ಹೇಳಿದ್ದಾರೆ.