Don't Miss!
- News Gadag: ಕಾಂಗ್ರೆಸ್ ಸರ್ಕಾರದಲ್ಲಿ ಕೊಲೆಗಡುಕರಿಗೆ ರಾಜ ಮರ್ಯಾದೆ: ಮಾಜಿ ಸಿಎಂ
- Automobiles ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿದೆ ಹೋಂಡಾ ಆಕ್ಟಿವಾ: ಎಲೆಕ್ಟ್ರಿಕ್ ಸ್ಕೂಟರ್ಗಳ ರಾಜ ಆಗುತ್ತಾ?
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ಪೂಜಾ ಗಾಂಧಿ ಕಿರಿಕಿರಿ ಪಿರಿಪಿರಿಗೆ ಜೈ ಹಿಂದ್
ಶಾಕ್ ಆದ ಪೂಜಾ ಗಾಂಧಿ ಹೇಳಿದ್ದೇನೆಂದರೆ, "ಶ್ರೀನಿವಾಸ್ ಅವರಿಗೆ ನಾನು ಎಲ್ಲವನ್ನೂ ಸ್ಪಷ್ಟವಾಗಿ ಹೇಳಿದ್ದೆ. ದಂಡುಪಾಳ್ಯ ಚಿತ್ರದ ಪ್ರಚಾರ, ಯೂರೋಪ್, ದುಬೈ, ರಾಜಕೀಯ ಚಟುವಟಿಕೆಗಳು...ಹೀಗೆ ನಾನಾ ಕೆಲಸಗಳ ಕಾರಣ ಅವರಿಗೆ ಸ್ವಲ್ಪ ಸಮಯ ಕೇಳಿದ್ದೆ. ನನ್ನ ಡೇಟ್ಸ್ ನೋಡಿಕೊಂಡು ಪತ್ರಿಕಾಗೋಷ್ಠಿ ನಡೆಸಿ ಎಂದು ಹೇಳಿದ್ದೆ. ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳುವಂತೆ ವಿನಂತಿಸಿಕೊಂಡಿದ್ದೆ".
ಆದರೆ ಈಗ ಏಕಾಏಕಿ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ. ಶ್ರೀನಿವಾಸ್ ಅವರ ಬಗ್ಗೆ ಬಹಳ ಬೇಸರವಾಯಿತು ಎಂದು ತಮ್ಮ ಅಸಮಾಧಾನವನ್ನು 'ಜೈ ಹಿಂದ್' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ತೋಡಿಕೊಂಡರು. ಕನ್ನಡ ಚಿತ್ರರಂಗದಲ್ಲಿ ನನ್ನ ಬಗ್ಗೆ ಇದುವರೆಗೂ ಈ ರೀತಿಯ ದೂರು ಕೇಳಿಬಂದಿಲ್ಲ.
ನಾನು ಮಾಡಿದ ಎಲ್ಲಾ ಚಿತ್ರಗಳ ಪ್ರಚಾರಕ್ಕೆ ಹೋಗಿದ್ದೇನೆ. ಇದು ನನ್ನ ಚಿತ್ರ. ಮುಂದೆಯೂ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗುತ್ತೇನೆ. ಆದರೆ ಸುಮ್ಮನೆ ಹೀಗೆ ನನ್ನ ವಿರುದ್ಧ ದೂರು ಕೊಟ್ಟಿದ್ದು ಸರಿಯಲ್ಲ ಎಂದು ಅವರು ತಮ್ಮ ಬೇಸರ ಹೊರಹಾಕಿದರು.
ಇದೆಲ್ಲಾ ಆಗಿದ್ದು ಒಂದು ಸಣ್ಣ ತಪ್ಪಿನಿಂದ. ನಾನು ಒಂದು ಎಸ್ಎಂಎಸ್ ಕಳುಹಿಸಿದೆ. ಅದಕ್ಕೆ ಪೂಜಾ ಕಡೆಯಿಂದ ಉತ್ತರ ಬರಲಿಲ್ಲ. ಕರೆ ಮಾಡಿದಾಗ ಅವರು ಕೇರಳದಲ್ಲಿದ್ದಾರೆ ಎಂಬ ಉತ್ತರ ಸಿಕ್ಕಿತು. ನಾನು ತಪ್ಪಾಗಿ ಅರ್ಥ ಮಾಡಿಕೊಂಡು ಪ್ರಚಾರಕ್ಕೆ ಅವರು ಕೈಕೊಡುತ್ತಿದ್ದಾರೆ. ನಟಿ ಪೂಜಾಗಾಂಧಿ ನಾಟ್ ರೀಚಬಲ್ ಆಗಿದ್ದಾರೆ ಎಂದು ನಿರ್ಮಾಪಕರ ಸಂಘಕ್ಕೆ ಮೊರೆಹೋದೆ.
ದಯವಿಟ್ಟು ಈ ವಿಷಯವನ್ನು ಇಲ್ಲಿಗೆ ಬಿಟ್ಟುಬಿಡಿ. ಇದೆಲ್ಲಾ ಆಗಿದ್ದು ನನ್ನ ತಪ್ಪಿನಿಂದಲೇ. ಏನೇ ಮಿಸ್ಟೇಕ್ ಆಗಿದ್ದರೂ ಅದು ನನ್ನಿಂದಲೇ ಎಂದು ಮೇಜರ್ ಶ್ರೀನಿವಾಸ್ ಪೂಜಾರ್ ಕೊನೆಯದಾಗಿ ವಿನಂತಿಸಿಕೊಳ್ಳುವ ಮೂಲಕ 'ಜೈ ಹಿಂದ್' ವಿವಾದಕ್ಕೆ ತೆರೆಬಿದ್ದಿದೆ. (ಏಜೆನ್ಸೀಸ್)