Don't Miss!
- News Voter Guide: ಮತದಾನ ಮಾಡುವ ಮುನ್ನ ಈ ಅಂಶಗಳ ಬಗ್ಗೆ ಗಮನವಿರಲಿ
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೋಟ್ಯಾಧಿಪತಿಗೆ ನಿರೂಪಕನಾಗಿ ಕನ್ನಡದ ಪ್ರಕಾಶ್ ರೈ?
'ಕನ್ನಡದ ಕೋಟ್ಯಾಧಿಪತಿ' ಎಂದು ಪುನೀತ್ ರಾಜಕುಮಾರ್ ಸುವರ್ಣ ಟಿವಿಯಲ್ಲಿ, 'ನೀನ್ಗಲಂ ವೆಲ್ಲಲಾಂ ಒರು ಕೋಟಿ' ಎಂದು ತಮಿಳಿನಲ್ಲಿ ನಟ ಸೂರ್ಯ ವಿಜಯ್ ಟಿವಿಯಲ್ಲಿ ಮತ್ತು ಮಲಯಾಳಂನಲ್ಲಿ 'ನಿನ್ಗಲ್ಕಕುಂ ಆಕಾಂ ಕೊಡೇಶ್ವರನ್' ಎನ್ನುವ ಹೆಸರಿನಲ್ಲಿ ನಟ ಸುರೇಶ್ ಗೋಪಿ ಏಷ್ಯಾ ನೆಟ್ ವಾಹಿನಿಯಲ್ಲಿ ಈ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.
ಆದರೆ ತಮಿಳು ಚಿತ್ರರಂಗದಲ್ಲಿ ನಟ ಸೂರ್ಯನಿಗೆ ಅಪಾರ ಜನಪ್ರಿಯತೆ ಇದ್ದರೂ ಈ ರಿಯಾಲಿಟಿ ಶೋ ಮೂಲಕ ವಿಜಯ್ ಟಿವಿಯ TRP ಹೆಚ್ಚಿಸುವಲ್ಲಿ ಸೂರ್ಯ ವಿಫಲರಾಗಿದ್ದರು.
ಹಾಗಾಗಿ, ತಮಿಳಿನಲ್ಲಿ ಮತ್ತೆ ಶುರುವಾಗಲಿರುವ ಕೋಟ್ಯಾಧಿಪತಿ ಶೋ ನಡೆಸಿಕೊಡಲು ಕನ್ನಡದ ಪ್ರಕಾಶ್ ರೈ ಬರಲಿದ್ದಾರೆ ಎನ್ನುವುದು ಲೇಟೆಸ್ಟ್ ಸುದ್ದಿ.
ವಿಜಯ್ ಟಿವಿಯವರು ಮುಂದಿನ ಸೀಸನ್ ನಡೆಸಿಕೊಡಲು ಪ್ರಕಾಶ್ ರೈ ಅವರನ್ನು ಸಂಪರ್ಕಿಸಿದ್ದಾರೆ ಎನ್ನುವ ಸುದ್ದಿ ತಮಿಳು ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದೆ.
ಪ್ರಕಾಶ್ ರೈಗಿರುವ ಸದ್ಯದ ಟೈಟ್ ಸೆಡ್ಯೂಲ್ ಮಧ್ಯೆ ಈ ಕಾರ್ಯಕ್ರಮ ಒಪ್ಪಿಕೊಳ್ಳಲು ಅವರು ಕೊಂಚ ಬಿಡುವು ಮಾಡಿಕೊಳ್ಳಬೇಕಾಗುತ್ತದೆ. ಅದು ಏನಾಗುತ್ತೋ ಎನ್ನುವುದು ಪ್ರಕಾಶ್ ರೈಗೆ ಬಿಟ್ಟ ವಿಚಾರ.
ಬಿಗ್ ಸಿನರ್ಜಿ ಪ್ರೊಡಕ್ಷನ್ ಹೌಸ್ ಮೂಲಕ ಮೂಡಿ ಬಂದ ಈ ರಿಯಾಲಿಟಿ ಶೋ ಕನ್ನಡದಲ್ಲಂತೂ ಭಾರೀ ಜನಪ್ರಿಯಗೊಂಡಿತ್ತು ಅಲ್ಲದೆ ನಿರೂಪಕರಾಗಿದ್ದ ಪುನೀತ್ ರಾಜಕುಮಾರ್ ಅವರ ಸ್ಟಾರ್ ವ್ಯಾಲ್ಯೂ ಮತ್ತಷ್ಟು ಮೇಲಕ್ಕೇರಿತ್ತು.