Don't Miss!
- News ಲೋಕಸಭಾ ಚುನಾವಣೆ 2ನೇ ಹಂತದ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ; ಮನೆ ಮನೆ ಪ್ರಚಾರಕ್ಕೆ ಅವಕಾಶ
- Lifestyle ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ರೀದೇವಿ, ಬೋನಿ ಕಪೂರ್ ಗೆ ಪೂಜಾರಿ ಬೆದರಿಕೆ
ಬಾಲಿವುಡ್ ನ ಖ್ಯಾತ ಚಿತ್ರ ನಿರ್ಮಾಪಕ ಬೋನಿ ಕಪೂರ್ ಹಾಗೂ ಚಿರ ಯೌವ್ವನೆ ಶ್ರೀದೇವಿಅವರಿಗೆ ಭೂಗತ ಪಾತಕಿ ರವಿ ಪೂಜಾರಿ ಜೀವಬೆದರಿಕೆ ಹಾಕಿದ್ದಾನೆ. ಬೆದರಿಕೆ ಕರೆ ಬಂದಿರುವುದು ರವಿ ಪೂಜಾರಿ ಗ್ಯಾಂಗ್ ನಿಂದ ಎಂಬುದು ದೃಢಪಟ್ಟಿದೆ. ಆದರೆ, ಸ್ವತಃ ರವಿ ಪೂಜಾರಿಯೇ ಕರೆ ಮಾಡಿದ್ದನಾ? ಅಥವಾ ಅವನ ಗ್ಯಾಂಗ್ ನ ಸದಸ್ಯರು ಮಾಡಿದ್ದರಾ? ಇನ್ನೂ ಸ್ಪಷ್ಟವಾಗಬೇಕಿದೆ.
ನಿರ್ಮಾಪಕ ಬೋನಿ ಕಪೂರ್ ಅವರಿಗೆ ಅಂತಾರಾಷ್ಟ್ರೀಯ ಕರೆ ಮಾಡಿರುವ ರವಿ ಪೂಜಾರಿ ತನಗೆ ಹಣ ನೀಡುವಂತೆ ಒತ್ತಾಯ ಮಾಡಿದ್ದಾನೆ. ಒಂದು ವೇಳೆ ಹಣ ನೀಡದಿದ್ದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ ಮೂಲಗಳು ತಿಳಿಸಿವೆ. ಸುಮಾರು ಮೂರು ನಿಮಿಷಕ್ಕೂ ಹೆಚ್ಚು ಕಾಲ ರವಿ ಪೂಜಾರಿ ಬೋನಿ ಕಪೂರ್ ಜತೆ ಮಾತನಾಡಿ, ಹಣ ಬೇಡಿಕೆ ಮುಂದಿಟ್ಟಿದ್ದಾನೆ.
ಹಣ
ನೀಡಲು
ಮೀನಾಮೇಷ
ಎಣಿಸಿದರೆ
ಪತಿ,
ಶ್ರೀದೇವಿ
ಮತ್ತು
ಮಕ್ಕಳನ್ನು
ಕೊಲೆ
ಮಾಡುವುದಾಗಿ
ಬೆದರಿಕೆ
ಹಾಕಿದ್ದಾನಂತೆ.
ಬೆದರಿಕೆ
ಕರೆ
ಮಾಡಿರುವ
ವಿಷಯವನ್ನು
ಪೊಲೀಸರಿಗೆ
ತಿಳಿಸಿದರೆ
ಇಡೀ
ಕುಟುಂಬವೇ
ನಿರ್ನಾಮವಾಗಲಿದೆ.
ಮುಂಬೈನಲ್ಲಿರುವ
ತಮ್ಮ
ಸಹಚರರು
ಯಾವುದೇ
ವೇಳೆ
ದಾಳಿ
ನಡೆಸಲಿದ್ದಾರೆ
ಎಂದು
ಎಚ್ಚರಿಸಿದ್ದಾನೆ.
ಈ ಸಂಬಂಧ ಮುಂಬೈನ ಓಶಿವಾರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಭೂಗತ ಪಾತಕಿಗಳಿಂದ ಕೊಲೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಬೋನಿಕಪೂರ್ ಮತ್ತು ಅವರ ಕುಟುಂಬಕ್ಕೆ ಹೆಚ್ಚಿನ ರಕ್ಷಣೆ ಒದಗಿಸಲು ಪೊಲೀಸರು ತೀರ್ಮಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳುವ ಮುನ್ನ ಕರೆಯ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ಕಳೆದ ವರ್ಷ ಕಪೂರ್ ಮನೆಯಲ್ಲಿ 6 ಲಕ್ಷ ರು.ಗೂ ಅಧಿಕ ಮೌಲ್ಯದ ಬೆಲೆ ಬಾಳುವ ವಸ್ತುಗಳು ಕಳುವಾಗಿತ್ತು. ಈ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಈಗ ಕಳ್ಳರ ಕಡೆಯವರು ಭೂಗತ ಪಾತಕಿಗಳ ನೆರವು ಪಡೆದು ಬೆದರಿಕೆ ಕರೆ ಮಾಡಿರುವ ಶಂಕೆ ಕೂಡಾ ವ್ಯಕ್ತವಾಗಿದೆ. ಒಟ್ಟಾರೆ, ಬಾಲಿವುಡ್ ಗೂ ಭೂಗತ ಜಗತ್ತಿಗೂ ಇರುವ ಅನೈತಿಕ ಸಂಬಂಧ ಹಾಗೂ ಕಿತ್ತಾಟದ ಅಧ್ಯಾಯ ಮತ್ತೆ ಆರಂಭವಾದ ಹಾಗೆ ಕಾಣುತ್ತದೆ.