Don't Miss!
- News ಲೋಕಸಭೆ ಚುನಾವಣೆ 2024: ಪ್ರಿಯಾಂಕಾ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಕಣಕ್ಕೆ!?
- Lifestyle ದೇಹದಲ್ಲಿ ಈ 7 ಭಾಗದಲ್ಲಿ ಊತ ಉಂಟಾದರೆ ಅದು ಫ್ಯಾಟಿ ಲಿವರ್ನ ಲಕ್ಷಣವಾಗಿದೆ, ನಿರ್ಲಕ್ಷ್ಯ ಮಾಡಬೇಡಿ
- Finance ನೀರಿನ ಬಿಕ್ಕಟ್ಟು: ಬೆಂಗಳೂರು ತೊರೆಯಲು ಮುಂದಾದ ಅನೇಕ ನಿವಾಸಿಗಳು!
- Technology ಇಂದು ಒನ್ಪ್ಲಸ್ನ ಈ ಸ್ಪೆಷಲ್ ಮೊಬೈಲ್ನ ಫಸ್ಟ್ ಸೇಲ್!..ಬೆಲೆ ಎಷ್ಟು ಅಂತೀರಾ?
- Automobiles ಭಾರತದ ರಸ್ತೆಯಲ್ಲಿ ಘರ್ಜಿಸಲು ಬಂದ ಪವರ್ಫುಲ್ ಎಪ್ರಿಲಿಯಾ ಬೈಕ್ ವಿತರಣೆ ಮಾಹಿತಿ ಬಹಿರಂಗ
- Sports ಆರ್ಸಿಬಿ ಸ್ಟಾರ್ ಶ್ರೇಯಾಂಕಾ ಪಾಟೀಲ್ ಬಗ್ಗೆ ನಿಮಗೆಷ್ಟು ಗೊತ್ತು?; ಶಿಕ್ಷಣ, ವಯಸ್ಸು, ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸದ್ಯದಲ್ಲೇ ಕಮಲ್, ರಜನಿ ಜೋಡಿಯ ಕಮಾಲ್!
ನಿರ್ಮಾಪಕ ಎವಿಎಮ್ ಸರವಣನ್ ರಜನಿ ಮತ್ತು ಕಮಲ್ ಇಬ್ಬರನ್ನೂ ಒಂದೇ ಸಿನಿಮಾದಲ್ಲಿ ನಟಿಸವಂತೆ ಮಾಡಲು ಶತಪ್ರಯತ್ನ ನಡೆಸುತ್ತಿದ್ದಾರೆ. ಇತ್ತೀಚಿಗೆ ನಿರ್ಮಾಪಕರ ಮನೆಯಲ್ಲಿ ಈ ಸಂಬಂಧ ರಜನಿಕಾಂತ್, ಕಮಲ್ ಹಾಸನ್ ಜೊತೆ ಮಾತುಕತೆ ನಡೆಸಲಾಗಿದೆ, ನಿರ್ಮಾಪಕ ಸರವಣನ್ ಪ್ರಕಾರ, ಈ ಇಬ್ಬರು ಸೂಪರ್ ಸ್ಟಾರ್ ಗಳನ್ನು ನಿರ್ದೇಶಿಸಲು ಕೆ ಬಾಲಚಂದರ್ ಸಮರ್ಥರು. ಈ ಮೊದಲು ಈ ಮೂವರ ಸಂಗಮದಲ್ಲಿ ತೆರೆಗೆ ಬಂದಿದ್ದ 'ನಿನೈಥಲೆ ಇನಿಕ್ಕುಂ' ಹಾಗೂ 'ತಿಲ್ಲು ಮಲ್ಲು' ಚಿತ್ರಗಳು ಸೂಪರ್ ಹಿಟ್ ದಾಖಲಿಸಿದ್ದವು.
ಈ ಕುರಿತು ಮಾತನಾಡಿರುವ ನಿರ್ದೇಶಕ ಕೆ ಬಾಲಚಂದರ್ ಪುತ್ರಿ ಪುಷ್ಪಾ ಕಂದಸ್ವಾಮಿ, "ಈ ಇಬ್ಬರೂ ಸೂಪರ್ ಸ್ಟಾರ್ ಗಳನ್ನು ಒಂದೇ ಚಿತ್ರದಲ್ಲಿ ನೋಡಲು ತುಂಬಾ ಸಂತೋಷ ಎನಿಸುತ್ತದೆ. ಆದರೆ ನಮ್ಮ ತಂದೆಗೆ ಸದ್ಯಕ್ಕೆ ಅವರಿಬ್ಬರನ್ನೂ ನಿರ್ದೇಶಿಸುವ ಯಾವುದೇ ಐಡಿಯಾ ಇಲ್ಲ. ಈ ಮೊದಲು ರಜನಿ ಹಾಗೂ ಕಮಲ್, 'ಅಪೂರ್ವ ರಾಂಗಂಗಳ್' ಹಾಗೂ 'ವಯಸು ಪಿಲಿಚಿಂದಿ' ಹಾಗೂ 'ಅಂಥುಲೇನಿ ಕಥಾ' ಚಿತ್ರಗಳಲ್ಲಿ ನಟಿಸಿದ್ದರೂ ಈಗ ಈ ಜೋಡಿಯ ಚಿತ್ರ ತರಲು ಇದು ಸಮಯವಲ್ಲ" ಎಂದಿದ್ದಾರೆ.
ಹೀಗಾಗಿ, ಈ ಇಬ್ಬರೂ ಸೂಪರ್ ಸ್ಟಾರ್ ಒಂದಾಗಿ ಬರಲಿರುವ ಚಿತ್ರದ ಬಗ್ಗೆ ಯಾರೂ ನಿರ್ಧಿಷ್ಟವಾಗಿ ಹೇಳಲು ಸಾಧ್ಯವಾಗಿಲ್ಲ. ಸದ್ಯಕ್ಕಂತೂ ತಮ್ಮ 'ಕೊಚಡಯ್ಯಾನ್' ಚಿತ್ರದಲ್ಲಿ ಬಿಜಿಯಾಗಿರುವ ರಜನಿಕಾಂತ್, ನಂತರ ಅದರ ಮುಂದುವರಿದ ಭಾಗವಾದ 'ರಾಣಾ'ಕ್ಕೆ ಸಿದ್ಧರಾಗುತ್ತಿದ್ದಾರೆ. ಇನ್ನು ಕಮಲ್ ಹಾಸನ್, ಬಿಡುಗಡೆಗೆ ಸಿದ್ಧವಾಗಿರುವ ವಿಶ್ವರೂಪಂ ಪ್ರಚಾರಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ, ಜೊತೆಗೆ, ಆಸ್ಕರ್ ರವಿಚಂದ್ರನ್ ನಿರ್ದೇಶನದ ಚಿತ್ರಕ್ಕೆ ರೆಡಿಯಾಗಬೇಕಿದೆ. (ಏಜೆನ್ಸೀಸ್)