Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸದ್ಯದಲ್ಲೇ ಕಮಲ್, ರಜನಿ ಜೋಡಿಯ ಕಮಾಲ್!
ನಿರ್ಮಾಪಕ ಎವಿಎಮ್ ಸರವಣನ್ ರಜನಿ ಮತ್ತು ಕಮಲ್ ಇಬ್ಬರನ್ನೂ ಒಂದೇ ಸಿನಿಮಾದಲ್ಲಿ ನಟಿಸವಂತೆ ಮಾಡಲು ಶತಪ್ರಯತ್ನ ನಡೆಸುತ್ತಿದ್ದಾರೆ. ಇತ್ತೀಚಿಗೆ ನಿರ್ಮಾಪಕರ ಮನೆಯಲ್ಲಿ ಈ ಸಂಬಂಧ ರಜನಿಕಾಂತ್, ಕಮಲ್ ಹಾಸನ್ ಜೊತೆ ಮಾತುಕತೆ ನಡೆಸಲಾಗಿದೆ, ನಿರ್ಮಾಪಕ ಸರವಣನ್ ಪ್ರಕಾರ, ಈ ಇಬ್ಬರು ಸೂಪರ್ ಸ್ಟಾರ್ ಗಳನ್ನು ನಿರ್ದೇಶಿಸಲು ಕೆ ಬಾಲಚಂದರ್ ಸಮರ್ಥರು. ಈ ಮೊದಲು ಈ ಮೂವರ ಸಂಗಮದಲ್ಲಿ ತೆರೆಗೆ ಬಂದಿದ್ದ 'ನಿನೈಥಲೆ ಇನಿಕ್ಕುಂ' ಹಾಗೂ 'ತಿಲ್ಲು ಮಲ್ಲು' ಚಿತ್ರಗಳು ಸೂಪರ್ ಹಿಟ್ ದಾಖಲಿಸಿದ್ದವು.
ಈ ಕುರಿತು ಮಾತನಾಡಿರುವ ನಿರ್ದೇಶಕ ಕೆ ಬಾಲಚಂದರ್ ಪುತ್ರಿ ಪುಷ್ಪಾ ಕಂದಸ್ವಾಮಿ, "ಈ ಇಬ್ಬರೂ ಸೂಪರ್ ಸ್ಟಾರ್ ಗಳನ್ನು ಒಂದೇ ಚಿತ್ರದಲ್ಲಿ ನೋಡಲು ತುಂಬಾ ಸಂತೋಷ ಎನಿಸುತ್ತದೆ. ಆದರೆ ನಮ್ಮ ತಂದೆಗೆ ಸದ್ಯಕ್ಕೆ ಅವರಿಬ್ಬರನ್ನೂ ನಿರ್ದೇಶಿಸುವ ಯಾವುದೇ ಐಡಿಯಾ ಇಲ್ಲ. ಈ ಮೊದಲು ರಜನಿ ಹಾಗೂ ಕಮಲ್, 'ಅಪೂರ್ವ ರಾಂಗಂಗಳ್' ಹಾಗೂ 'ವಯಸು ಪಿಲಿಚಿಂದಿ' ಹಾಗೂ 'ಅಂಥುಲೇನಿ ಕಥಾ' ಚಿತ್ರಗಳಲ್ಲಿ ನಟಿಸಿದ್ದರೂ ಈಗ ಈ ಜೋಡಿಯ ಚಿತ್ರ ತರಲು ಇದು ಸಮಯವಲ್ಲ" ಎಂದಿದ್ದಾರೆ.
ಹೀಗಾಗಿ, ಈ ಇಬ್ಬರೂ ಸೂಪರ್ ಸ್ಟಾರ್ ಒಂದಾಗಿ ಬರಲಿರುವ ಚಿತ್ರದ ಬಗ್ಗೆ ಯಾರೂ ನಿರ್ಧಿಷ್ಟವಾಗಿ ಹೇಳಲು ಸಾಧ್ಯವಾಗಿಲ್ಲ. ಸದ್ಯಕ್ಕಂತೂ ತಮ್ಮ 'ಕೊಚಡಯ್ಯಾನ್' ಚಿತ್ರದಲ್ಲಿ ಬಿಜಿಯಾಗಿರುವ ರಜನಿಕಾಂತ್, ನಂತರ ಅದರ ಮುಂದುವರಿದ ಭಾಗವಾದ 'ರಾಣಾ'ಕ್ಕೆ ಸಿದ್ಧರಾಗುತ್ತಿದ್ದಾರೆ. ಇನ್ನು ಕಮಲ್ ಹಾಸನ್, ಬಿಡುಗಡೆಗೆ ಸಿದ್ಧವಾಗಿರುವ ವಿಶ್ವರೂಪಂ ಪ್ರಚಾರಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ, ಜೊತೆಗೆ, ಆಸ್ಕರ್ ರವಿಚಂದ್ರನ್ ನಿರ್ದೇಶನದ ಚಿತ್ರಕ್ಕೆ ರೆಡಿಯಾಗಬೇಕಿದೆ. (ಏಜೆನ್ಸೀಸ್)