Don't Miss!
- News ರಾಜ್ಯದ ವಿವಿಧೆಡೆ ಮಳೆರಾಯನ ಆರ್ಭಟ; ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟು ? ಇಲ್ಲಿದೆ ಸಂಪೂರ್ಣ ವಿವರ
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೋಳಿ ಜಗಳಕ್ಕೆ ಮಂಗಳ ಹಾಡಿದ ಜಂಬದ ಕೋಳಿಗಳು
ಕನ್ನಡದ ಇಬ್ಬರು ನಟಿಯರು ಮತ್ತೆ ಒಂದಾಗಿದ್ದಾರೆ. ಬೇರೆಯಾಗಿದ್ದವರು ಯಾರು ಎಂದು ಪ್ರಶ್ನಿಸುವ ಮೊದಲು ಒಮ್ಮೆ ಯೋಚಿಸಿ ನೋಡಿ. ರಮ್ಯಾ ಮತ್ತು ಐಂದ್ರಿತಾ ರೇ ಎಂಬುದು ನೆನಪಾಗುತ್ತದೆ. ಹಿಂದೊಮ್ಮೆ ಅತ್ಯಾಪ್ತ ಗೆಳತಿಯರಂತಿದ್ದ ಈ ಇಬ್ಬರು ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಐಂದ್ರಿತಾ 'ಕಪಾಳ ಮೋಕ್ಷ' ಪ್ರಹಸನದ ನಂತರ ಪರಸ್ಪರ ದೂಷಿಸಿಕೊಂಡು ಶತ್ರುಗಳಂತಾಗಿದ್ದರು.
ಐಂದ್ರಿತಾ ಚಿತ್ರರಂಗಕ್ಕೆ ಕಾಲಿಟ್ಟಾಗ ಮುದ್ದುಮಾಡಿ ಪಾರಿಜಾತದಂತೆ ಸಾಕಿದ್ದು ಸ್ವತಃ ರಮ್ಯಾ. ಇನ್ನೂ ಚಿಕ್ಕ ಹುಡುಗಿ ಐಂದ್ರಿತಾ ಹೇಗೆ ಬೆಳೆಯಬೇಕು, ಅದ್ಹೇಗೆ ದೊಡ್ಡ ನಟಿಯಾಗಬೇಕು ಎಂದೆಲ್ಲ ಆಪ್ತರಲ್ಲಿ ಹೇಳಿಕೊಳ್ಳುತ್ತಿದ್ದರು ರಮ್ಯಾ. ಇಬ್ಬರೂ ಒಟ್ಟಿಗೆ ಓಡಾಡುತ್ತಿದ್ದರು, ಒಬ್ಬರ ಬಗ್ಗೆ ಒನ್ನೊಬ್ಬರು ಗೌರವದಿಂದ ಮಾತನಾಡುತ್ತಿದ್ದರು. ಅದೆಷ್ಟು ಎಂದರೆ ಎಲ್ಲರೂ ಹುಬ್ಬೇರಿಸುವಷ್ಟು ಗೆಳೆತನವಿತ್ತು.
2009ರ ಮಾರ್ಚ್ನಲ್ಲಿ ಕನ್ನಡ ಚಿತ್ರರಂಗದ 'ಅಮೃತ ಮಹೋತ್ಸವ'ದಲ್ಲೂ ಇಬ್ಬರೂ ಒಂದಾಗಿಯೇ ಇದ್ದು ಪಕ್ಕಪಕ್ಕದಲೇ ಆಸೀನರಾಗಿದ್ದರು. ಆದರೆ ಯಾವಾಗ ಐಂದ್ರಿತಾ ಮೇಸ್ಟ್ರು ನಾಗತಿಹಳ್ಳಿ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೋ, ರಮ್ಯಾ ಐಂದ್ರಿತಾರಿಂದ ಬಹುದೂರವಾಗಿದ್ದರು. ನಂತರ ಮುಸುಕಿನ ಗುದ್ದಾಟ ನಡೆದೇ ಇತ್ತು. ಆದರೀಗ ಇಬ್ಬರೂ ಮತ್ತೆ ಒಂದಾಗಿ ಮೊದಲಿನಂತೆ ಪರಮಾಪ್ತರಾಗಿದ್ದಾರೆ.
ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಹಳೆಯದನ್ನು ಮರೆತು ಪರಸ್ಪರ ಅಪ್ಪಿಕೊಂಡು ಜತೆಯಾಗಿ ಕುಣಿದಿದ್ದಾರೆ. ರಮ್ಯಾರ 'ಲಕ್ಕಿ' ಚಿತ್ರದ ಹಾಡೊಂದಕ್ಕೆ ಐಂದ್ರಿತಾ ಹೆಜ್ಜೆ ಹಾಕಿದ್ದಾರೆ. ನಂತರ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಐಂದ್ರಿತಾ "ಕೆಲ ಸಮಯ ಪರಸ್ಪರ ದೂರವಾಗಿದ್ದೆವು. ನಮ್ಮಿಬ್ಬರನ್ನು ಬೇರ್ಪಡಿಸಲು ಕೆಲವರು ಯತ್ನಿಸಿದ್ದರು. ಆದರೀಗ ಮತ್ತೆ ನಾವಿಬ್ಬರು ಉತ್ತಮ ಸ್ನೇಹಿತೆಯರು" ಎಂದಿದ್ದಾರೆ. (ಒನ್ ಇಂಡಿಯಾ ಕನ್ನಡ)