Don't Miss!
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- News Heavy Rain: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು: ಸಿಡಿಲು ಬಡಿದು 25 ಮೇಕೆಗಳ ಸಾವು
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ಲಕ್ಷ್ಮಿ ರೈ ಬಾಳಿಗೆ ಮಗ್ಗುಲಮುಳ್ಳಾದರೆ ಧೋನಿ?
ಬೆಳಗಾವಿಯ ಚೆಲುವೆ ನಟಿ ಲಕ್ಷ್ಮಿ ರೈ (ಈಗ ರಾಯ್ ಲಕ್ಷ್ಮಿ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದಾರೆ) ಕಡೆಗೂ ಧೋನಿ ಬಗ್ಗೆ ಮೌನ ಮುರಿದಿದ್ದಾರೆ. ಅವರು ತಾನೇ ಎಷ್ಟು ದಿನ ಎಂದು ಸಹಿಸಿಕೊಳ್ಳಲು ಸಾಧ್ಯ? ಕಡೆಗೂ ಅವರ ಚದುರಿದ ಚಿತ್ರ ಅವರ ಮನಸ್ಸಿನಿಂದ ಅನಾವರಣಗೊಂಡಿದೆ.
ಭಾರತ ಕ್ರಿಕೆಟ್ ತಂಡದ ಶಾಂತ ಸ್ವಭಾವದ ನಾಯಕ ಎನ್ನಿಸಿಕೊಂಡಿರುವ ಧೋನಿ ಹೆಸರು ನಟಿ ಲಕ್ಷ್ಮಿ ರೈ ಅವರೊಂದಿಗೆ ಥಳುಕು ಹಾಕಿಕೊಂಡಿತ್ತು. ಈಗಲೂ ಇವರಿಬ್ಬರ ಸಂಬಂಧದ ಬಗ್ಗೆ ಪ್ರಸ್ತಾಪಿಸದೆ ಮಾತು ಮುಂದಕ್ಕೇ ಹೋಗದಂತಹ ಪರಿಸ್ಥಿತಿ ಇದೆ. ಈ ಬಗ್ಗೆ ರೈ ಲಕ್ಷ್ಮಿಗೆ ನಖಶಿಖಾಂತ ಬೇಸರವೂ ಇದೆ. ['ಶೃಂಗಾರ' ತಾರೆ ಲಕ್ಷ್ಮಿ ರೈ ಕುರಿತ ಕೆಲವು ಸಂಗತಿಗಳು]
ಈ ಬಗ್ಗೆ ಮಾತನಾಡಿರುವ ಅವರು, "ತಮ್ಮಿಬ್ಬರ ಸಂಬಂಧದ ಬಗ್ಗೆ ಈಗಲೂ ಜನ ಮಾತನಾಡುತ್ತಲೇ ಇದ್ದಾರೆ. ಇದು ನನಗೆ ತೀರಾ ಕಸಿವಿಸಿ ವಿಚಾರ. ಅವರ ಜೊತೆಗಿನ ಸಂಬಂಧ ನನ್ನ ಬಾಳಿನಲ್ಲಿ ಅಚ್ಚಳಿಯದ ಕಲೆಯಾಗಿ, ಗಾಯವಾಗಿ, ಮುಳ್ಳಾಗಿ ಉಳಿದುಬಿಟ್ಟಿದೆ" ಎಂದಿದ್ದಾರೆ.
ಒಮ್ಮೊಮ್ಮೆ ನನಗೆ ನಿಜಕ್ಕೂ ಅಚ್ಚರಿಯೂ ಆಗುತ್ತದೆ. ನಮ್ಮಿಬ್ಬರ ಬಗ್ಗೆ ಮಾತನಾಡಲು ಜನಕ್ಕೆ ಇಷ್ಟೆಲ್ಲಾ ಎನರ್ಜಿ, ತಾಳ್ಮೆ ಇದೆಯಲ್ಲಾ ಎಂದು. ಟಿವಿ ವಾಹಿನಿಗಳಂತೂ ಧೋನಿ ಇತಿಹಾಸ ಪುಟಗಳನ್ನು ಕೆದಕುತ್ತಾ ನಮ್ಮಿಬ್ಬರ ಸಂಬಂಧಕ್ಕೆ ಉಪ್ಪು ಹುಳಿ ಖಾರ ಹಾಕಿದೆ ಇದ್ದರೆ ಅವರಿಗೆ ತಿಂದ ಅನ್ನ ಜೀರ್ಣವಾಗಲ್ಲ ಎಂದು ತಮ್ಮ ಮನಸ್ಸಿನ ಬೇಗುದಿಯನ್ನು ಹೊರಹಾಕಿದ್ದಾರೆ.
ಮುಂದೊಮ್ಮೆ ನನಗೆ ಮದುವೆಯಾಗಿ, ಮಕ್ಕಳಾಗಿ ಅವರು ಈ ರೀತಿಯ ಕಾರ್ಯಕ್ರಮ ನೋಡಿ ನನ್ನನ್ನೇ ಕೇಳುತ್ತಾರೋ ಏನೋ! ಧೋನಿ ಜೊತೆಗಿನ ಸಂಬಂಧ ಕಳೆದುಕೊಂಡ ಬಳಿಕ ನಾನು ಮೂರು ಅಥವಾ ನಾಲ್ಕು ಮಂದಿ ಜೊತೆಗೆ ರಿಲೇಷನ್ ಶಿಪ್ ಇಟ್ಟುಕೊಂಡಿದ್ದೇನೆ. ಆದರೆ ಅದನ್ನು ಮಾತ್ರ ಯಾರೂ ಗಮನಿಸುತ್ತಿಲ್ಲ ಎಂದಿದ್ದಾರೆ.
ಈಗಲೂ ಧೋನಿ ಮತ್ತು ನನ್ನ ನಡುವೆ ಒಳ್ಳೆಯ ಒಡನಾಡವಿದೆ. ಅವರಿಗೂ ಮದುವೆಯಾಗಿ ಹೆಂಡತಿ ಜೊತೆಗೆ ಹಾಯಾಗಿದ್ದಾರೆ. ಇದೆಲ್ಲವೂ ಮುಗಿದ ಅಧ್ಯಾಯ. ಆದರೆ ಮಾಧ್ಯಮಗಳು ಮಾತ್ರ ನಮ್ಮಿಬ್ಬರ ಬಗ್ಗೆ ಬರೆಯುವುದನ್ನು ನಿಲ್ಲಿಸಿಲ್ಲ. ಇನ್ನಾದರೂ ನಿಲ್ಲಿಸಿ ಪುಣ್ಯ ಕಟ್ಟಿಕೊಳ್ಳಿ ಎಂಬರ್ಥದಲ್ಲಿ ರೈ ಲಕ್ಷ್ಮಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)