Don't Miss!
- News ಮೈಸೂರು: ಪ್ರಧಾನಿ ಮೋದಿ ಕುರಿತಾದ ಹಾಡು ಶೇರ್ ಮಾಡಿ ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುನೀತ್ ಚಿತ್ರದಲ್ಲಿ 'ನೀಳ ಕಾಲ್ಗಳ' ಶ್ರುತಿ ಹಾಸನ್?
ಆದರೆ, ಈಗ ಪವರ್ ಸ್ಟಾರ್ ಪುನೀತ್ ಜೊತೆ ಶ್ರುತಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ನಿರ್ದೇಶಕ ಜಯಂತ್ ಚಿ ಪರಾಂಜಿ ಅವರು ಶ್ರುತಿ ಅವರನ್ನು ಸಂಪರ್ಕಿಸಿದ್ದು, ಶ್ರುತಿ ಬಹುತೇಕ ಒಪ್ಪಿಗೆ ನೀಡಿದ್ದಾರೆ ಎಂಬ ಮಾತಿದೆ. ಕನ್ನಡದ ಕೋಟ್ಯಧಿಪತಿ ಶೂಟಿಂಗ್ ನಲ್ಲಿ ಪುನೀತ್ ಬ್ಯುಸಿಯಾಗಿರುವುದರಿಂದ ಚಿತ್ರ ಇನ್ನೂ ಸೆಟ್ಟೇರಿಲ್ಲ. ಪುನೀತ್ ಅವರ ಹುಟ್ಟುಹಬ್ಬದ ದಿನದಂದು ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹೊರ ಹಾಕುವ ನಿರೀಕ್ಷೆಯಿತ್ತು.
ಜಯಂತ್ ಪರಾಂಜಿ ಅವರು ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಿರ್ದೇಶಕ, ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್, ಮಹೇಶ್ ಬಾಬು, ಪವನ್ ಕಲ್ಯಾಣ್ ಸೇರಿ ಎಲ್ಲಾ ಜನಪ್ರಿಯ ನಟರಿಗೂ ಆಕ್ಷನ್ ಕಟ್ ಹೇಳಿದ ಅನುಭವಿದೆ. ಪುನೀತ್ ಅವರ ಹೊಸ ಚಿತ್ರ 'ನಿನ್ನಿಂದಲೇ..' ಗೆ ಜಯಂತ್ ನಿರ್ದೇಶಕರಾಗಿ ಶ್ರುತಿ ಕಾಲಿಡುವುದು ಬಹುತೇಕ ಖಾತ್ರಿ ಎನ್ನಬಹುದು.
ಶ್ರುತಿ ಟ್ರ್ಯಾಕ್ ರೆಕಾರ್ಡ್: ದೇವರ್ ಮಗನ್ ಚಿತ್ರದ 'ಪೊಟ್ರಿ ಪಾಡಡಿ ಪೊನ್ನೆ ಹಾಡು ನೆನಪಿರಬೇಕಲ್ಲ. ಇಳಯರಾಜ ಸಂಗೀತ ಸಂಯೋಜನೆಯ ಗೀತೆಗೆ ದನಿ ನೀಡುವ ಮೂಲಕ 1992ರಲ್ಲೇ ಚಿತ್ರರಂಗಕ್ಕೆ ಅಧಿಕೃತವಾಗಿ ಶ್ರುತಿ ಎಂಟ್ರಿ ಕೊಟ್ಟವರು. ಅಪ್ಪ ಕಮಲ್ ಅಮ್ಮ ಸಾರಿಕಾ ಅವರ ನೆರಳಿಲ್ಲದೆ ಚಿತ್ರರಂಗದಲ್ಲಿ ಗಾಯಕಿಯಾಗಿ ಒಳ್ಳೆ ಹೆಸರು ಗಳಿಸಿದವರು.
ತೆಳ್ಳಗೆ ಬೆಳ್ಳಗೆ ಅಮ್ಮನ ಹೋಲಿಕೆ ಇರುವ ಶ್ರುತಿಗೆ ನಟನೆ ಹುಚ್ಚು ಹಿಡಿದಿದ್ದೆ ತಡ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದಳು. ಅನಗನಗ ಓ ಧೀರುಡು ಫ್ಯಾಂಟಸಿ ಸಿನಿಮಾಗೆ ಫಿಲಂಫೇರ್ ಬಂದರೂ ಚಿತ್ರ ಓಡಲಿಲ್ಲ. ಹಿಂದಿಯಲ್ಲಿ ಎರಡು ಚಿತ್ರದಲ್ಲಿ ನಟಿಸಿದರೂ 'ಲಕ್' ಕುದುರಲಿಲ್ಲ. ಕಡೆಗೆ ಸೂರ್ಯ ಜೊತೆ 7 ಆಮ್ ಅರಿವು ಚಿತ್ರದಲ್ಲಿ ನಟಿಸಿದರೂ ಏಳಿಗೆಯಾಗಲಿಲ್ಲ.
ಗಬ್ಬರ್ ಸಿಂಗ್ ಓಡಿದರೂ ಪವನ್ ಕಲ್ಯಾಣ್ ನಿಂದಾಗಿ, 3 ಚಿತ್ರ ಸದ್ದು ಮಾಡಿದ್ದು ಕೊಲವೆರಿ ಡಿ ಹಾಡಿಗಾಗಿ ಶ್ರುತಿ ಗಾಯಕಿಯಾಗೇ ಕನ್ನಡ ಚಿತ್ರಕ್ಕೆ ಬಂದರೆ ಸಾಕು ನಾಯಕಿಯಾಗಿ ಏತಕ್ಕೆ ಬೇಕು ಎಂದು ಪುನೀತ್ ಅಭಿಮಾನಿಗಳು ಗೊಣಗಾಡುತ್ತಿರುವುದು ಸುಳ್ಳಲ್ಲ. ಶ್ರುತಿ ಕಾಲಿಟ್ಟ ಕೂಡಲೇ ಚಿತ್ರ ಢಮಾರ್ ಆಗಲೇ ಬೇಕು ಎಂಬ ಸಿದ್ಧಾಂತವಿಲ್ಲ. ಶ್ರುತಿ ಕಾಲ್ಗುಣದಿಂದ ಪುನೀತ್ ಚಿತ್ರವೂ ಓಡಲಿ